SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 29, 2025
ಶಿವಮೊಗ್ಗ | ಆರ್ ಎಸ್ ಎಸ್ ನ ಚಿಂತನಾ ಗಂಗ ಪುಸ್ತಕದ ವಿರುದ್ದ ಪ್ರಧಾನಿ ಮೋದಿ ಹೇಳಿಕೆ ಕೊಟ್ಟರೆ ಹತ್ತು ದಿನದಲ್ಲಿ ಪ್ರಧಾನಿ ಸ್ಥಾನದಿಂದ ಅವರನ್ನು ಕೆಳಗಿಳಿಸುತ್ತಾರೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಆರ್ ಎಸ್ ಎಸ್ ನ ಮೂಲ ತತ್ವ ಚಿಂತನಗಂಗಾದಲ್ಲಿ ಅಡಗಿದೆ. ಒಂದು ದೇಶ ಒಂದು ಆಡಳಿತ ಒಂದು ಸಂಸತ್, ಭಾಷಾವಾರು ರಾಜ್ಯಗಳ ರದ್ದತಿ, ಸಂವಿಧಾನವನ್ನು ಪುನರ್ ಪರಿಶೀಲಿಸಿ ಪುನಃ ಹೊಸತಾಗಿ ಬರೆಯುವುದು ಚಿಂತನಗಂಗಾ ಪುಸ್ತಕದ ಮೂಲ ಉದ್ದೇಶವಾಗಿದೆ. ಈ ಎಲ್ಲಾ ವಿಷಯಗಳನ್ನು ಅನುಷ್ಠಾನ ಮಾಡಿದರೆ ಭಾರತದ ಹಿಂದಿ ಮತ್ತು ಸಂಸ್ಕೃತ ಹೊರತು ಪಡಿಸಿ ಎಲ್ಲಾ ಭಾಷೆಗಳು ಮತ್ತು ಅವರು ಬೆಳೆಸಿಕೊಂಡು ಬಂದಂತಹ ಸಂಸ್ಕೃತಿ ಮತ್ತು ಸಂಪ್ರದಾಯಗಳು ಕ್ರಮೇಣ ನಶಿಸಿ ಹೋಗುತ್ತವೆ. ಈ ನಿರ್ಧಾರಗಳ ವಿರುದ್ಧ ನಮ್ಮ ಕಾಂಗ್ರೆಸ್ ಹೋರಾಟ ಮಾಡುತ್ತಿದ್ದೇವೆ. ಪ್ರಧಾನ ಮಂತ್ರಿ ಮೋದಿಯವರು ಆರ್ ಎಸ್ ಎಸ್ ಹೇಳಿದಂತೆ ಕೇಳಿಕೊಂಡು ಇರುವುದಕ್ಕಾಗಿ ಇದುವರೆಗೂ ಪ್ರಧಾನಿ ಹುದ್ದೆಯಲ್ಲಿದ್ದಾರೆ. ಮೋದಿಯ ಸ್ವೀಚ್ ನಾಗ್ಪುರದಲ್ಲಿದೆ. ಅವರೇನಾದರು ಆರ್ ಎಸ್ ಎಸ್ ನ ಚಿಂತನಾ ಗಂಗ ಪುಸ್ತಕದ ವಿರುದ್ದ ಹೇಳಿಕೆ ಕೊಟ್ಟರೆ ಹತ್ತು ದಿನದಲ್ಲಿ ಪ್ರಧಾನಿ ಸ್ಥಾನದಿಂದ ಅವರನ್ನು ಕೆಳಗಿಳಿಸುತ್ತಾರೆ ಎಂದರು.

SUMMARY | Former education minister Kimmane Ratnakar has said that if Prime Minister Narendra Modi makes a statement against the RSS’s Chintana Ganga book, he will be removed from the prime minister’s post within 10 days.
KEYWORDS | Kimmane Ratnakar, Narendra Modi, prime minister,