SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 25, 2024
ಶಿವಮೊಗ್ಗ | ಪ್ರತ್ಯಂಗೀರ ಮಹಾ ಸಂಸ್ಥಾನದ ದೇವಾಲಯದಲ್ಲಿ ನಾಗರ ಹಾವಿಗಿಂತ 14 ಪಟ್ಟು ಹೆಚ್ಚು ವಿಷ ಹೊಂದಿದೆ ಎಂದೆ ಹೇಳಲಾಗುವ ಕಡಂಬಳ ಎಂಬ ಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ.
ಸುಮಾರು 4 ಅಡಿ ಉದ್ದವಿರುವ ಈ ಹಾವನ್ನು ನಿನ್ನೆ ರಾತ್ರಿ ಪ್ರತ್ಯಂಗೀರ ಮಹಾ ಸಂಸ್ಥಾನದ ಡಾ. ಸುಪ್ರೀತ್ ಗುರೂಜಿ ನೋಡಿದ್ದಾರೆ. ಈ ಹಿನ್ನಲೆ ತಕ್ಷಣ ಉರಗ ಸಂರಕ್ಷಕ ಸ್ನೇಕ್ ಕಿರಣ್ಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ದೇಶದಲ್ಲೇ ಅತಿ ಅಪಾಯಕಾರಿ ಹಾವುಗಳಲ್ಲಿ ಇದು ಒಂದಾಗಿದ್ದು, ಇದು ಕಚ್ಚಿದರೆ ವ್ಯಕ್ತಿ ಬದುಕುವ ಸಂಭವ ಬಹಳ ಕಡಿಮೆ ಈ ಹಾವನ್ನು ನೋಡಿದರೆ ನನಗೆ ಭಯವಾಗುತ್ತದೆ ಈ ಹಾವಿನಿಂದ ಸ್ವಲ್ಪ ಜಾಗೃತರಾಗಿರಬೇಕು ಎಂಬ ಸಲಹೆಯನ್ನು ಹಾವು ಸಂರಕ್ಷಣೆ ವೇಳೆ ಸ್ನೇಕ್ ಕಿರಣ್ ನೀಡಿದ್ದಾರೆ.
SUMMARY | Reptile expert Snake Kiran has rescued a snake named Kadambala, which has 14 times more venom than a cobra at the Pratyangira Maha Samsthana temple.
KEYWORDS | Snake Kiran, Kadambala, rescued snake, shivamogga,