Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು ಕ್ರಾಂತಿ ದೀಪ | ಎನ್‌ ಮಂಜುನಾಥ್‌ ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರು

131
Last updated: December 7, 2024 11:01 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 7, 2024 ‌

ಶಿವಮೊಗ್ಗ | ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು, ನನ್ನ ಕ್ರಾಂತಿದೀಪ ಪತ್ರಿಕೆ ಎಂದು ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರಾದ ಎನ್‌ ಮಂಜುನಾಥ್‌ ಹೇಳಿದರು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎನ್‌ ಮಂಜುನಾಥ ಅಭಿನಂದನಾ ಸಮಿತಿ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು, ನನ್ನ ಕ್ರಾಂತಿದೀಪ ಪತ್ರಿಕೆ. ಸುಮಾರು 40 ವರ್ಷಗಳಿಂದ ನನ್ನ ಪತ್ರಿಕೆಯನ್ನು ತೆಗೆದುಕೊಂಡು ಓದಿದ ಶಿವಮೊಗ್ಗದ ಜನತೆಗೆ ಧನ್ಯವಾದಗಳು ಎಂದರು. ಹಾಗೆಯೇ ನಾನು ಈ ಸ್ಥಾನಕ್ಕೆ ಬರಲು ಪ್ರಮುಖ ಕಾರಣಿಕರ್ತರು ಎಸ್‌ ಬಿ ರಾಮಪ್ಪ ಹಾಗೂ ಅವರ ಶ್ರೀಮತಿ ಕಮಲ ರವರು. ಎಸ್‌ ಬಿ ರಾಮಪ್ಪ ರೊಡನೆ ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ, ಆದರೆ ಕಾರಣಾಂತರಗಳಿಂದ ಅವರು ಪತ್ರಿಕೆಯನ್ನು ನಡೆಸಲಾಗಲಿಲ್ಲ ಆ ಸಂದರ್ಭದಲ್ಲಿ  ಅವರ ಶ್ರೀಮತಿ ಕಮಲಾ ರವರು ಆ ಪತ್ರಿಕೆಯನ್ನು ನೀನು ನಡೆಸು ಎಂದು ನನಗೆ ಬಿಟ್ಟುಕೊಟ್ಟರು.  ಅಂದಿನಿಂದ ಇದುವರೆಗೆ ಸುದೀರ್ಘ 40 ವರ್ಷಗಳ ಕಾಲ ಕ್ರಾಂತಿದೀಪ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದೇನೆ. ಇಂದು 8 ಜಿಲ್ಲೆಯಲ್ಲಿ ನಮ್ಮ ಪೇಪರ್‌ ಚಾಲ್ತಿಯಲ್ಲಿದೆ ಎಂದರು.

car decor
NES Head Office, Balaraja Urs Road, Shivamogga

ಎನ್‌ ಮಂಜುನಾಥ್‌ ರಿಗೆ ಸಿಕ್ಕ ಪ್ರಶಸ್ತಿ ನನಗೆ ಸಿಕ್ಕಷ್ಟೇ ಸಂತೋಷ ನೀಡಿದೆ | ನಂಜುಂಡೇಗೌಡ್ರು 

ಇತ್ತೀಚಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅರ್ಹತೆ ಇಲ್ಲದೆವರಿಗೆ ನೀಡಿ ಪ್ರಶಸ್ತಿಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ.  ಆದರೆ ಎನ್‌ ಮಂಜುನಾಥ್‌ ರವರಿಗೆ  ಮೊಹರೆ ಹಣಮಂತರಾಯ ಪ್ರಶಸ್ತಿ ಸಿಕ್ಕಿರುವುದರಿಂದಾಗಿ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದು ಹಿರಿಯ ಪತ್ರಕರ್ತರಾದ ನಂಜುಂಡೇ ಗೌಡ್ರು ತಿಳಿಸಿದರು. ಹಾಗೆಯೇ  ಎನ್‌ ಮಂಜುನಾಥ್‌ ರಿಗೆ ಸಿಕ್ಕ ಪ್ರಶಸ್ತಿ ನನಗೆ ಸಿಕ್ಕಷ್ಟೇ ಸಂತೋಷವಾಗಿದೆ ಎಂದರು. 

ಪ್ರಸ್ತುತ ಪತ್ರಿಕೆಗಳು ಜಾಹೀರಾತಿನ ಹಿಂದೆ ಹೆಚ್ಚಾಗಿ ಹೋಗುತ್ತವೆ. ಹಾಗೆ ರಾಜಕಾರಣಿಗಳ ಹುಟ್ಟುಹಬ್ಬದ ಜಾಹೀರಾತು ಹಾಕಲು ಸಾವಿರಾರು ರೂಪಾಯಿ ಚಾರ್ಜ್‌ ಮಾಡುತ್ತವೆ ಅದು ತಪ್ಪಾಗುತ್ತದೆ. ಏಕೆಂದರೆ ಮುಂದೆ ರಾಜಕಾರಣಿಗಳ ಬಗ್ಗೆ ಸುದ್ದಿ ಬರೆದಾಗ ನನ್ನ ಹುಟ್ಟುಹಬ್ಬದ ಜಾಹೀರಾತು ನೀಡಲು ಹಣ ತೆಗೆದುಕೊಂಡು ಹೋಗಿ ನನ್ನ ಬಗ್ಗೆ ಬರೆಯುತ್ತೀರ ಎಂದು ಕೇಳುತ್ತಾರೆ. ಇದರಿಂದಾಗಿ ಪತ್ರಿಕಾ ಸ್ವಾತಂತ್ರದ ಮೇಲೆ ಹೊಡೆತ ಬೀಳುವುದು ಎಂದರು.

ಯುವಕರು ಹೆಚ್ಚಾಗಿ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು | ಎಂ ಶ್ರೀಕಾಂತ್

ಎನ್‌ ಮಂಜುನಾಥ್‌ ರವರು ತಪ್ಪು ಮಾಡಿದರೆ ತಪ್ಪು ಎಂದು ನೇರವಾಗಿ ಹೇಳುವ ವ್ಯಕ್ತಿ. ಹಾಗೆಯೇ ಬಡವರ ಪರವಾಗಿ ಸದಾ ನಿಲ್ಲುವ ವ್ಯಕ್ತಿ  ಎಂದು ಎಂ ಶ್ರೀಕಾಂತ್‌ ಹೇಳಿದರು. ಹಾಗೆಯೇ ಪ್ರಸ್ತುತ ಕೇರಳ ಭಾಗದಲ್ಲಿ ಹೆಚ್ಚು ಲಾರಿ ಡ್ರೈವರ್ಸ್‌ ಹಾಗೂ ಹಮಾಲಿ ಕೆಲಸ ಮಾಡುವವರು ಸಹ ದಿನಾ ಪೇಪರ್‌ ಒದುತ್ತಾರೆ, ಆದರೆ ನಮ್ಮಕರ್ನಾಟಕದಲ್ಲಿ  ಯುವಕರು ಪೇಪರ್‌ ಗಿಂತ ಹೆಚ್ಚಾಗಿ ಮೊಬೈಲ್‌ ನೋಡುತ್ತಾರೆ. ಇಂದಿನ ಯುವಕರು ಹೆಚ್ಚಾಗಿ ಪೇಪರ್‌ ಓದಬೇಕು ಎಂದರು.

ಯಾವುದೇ ಅಪಸ್ವರ ಇಲ್ಲದೇ ಎಲ್ಲಾ ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಇದು ಎನ್‌ ಮಂಜುನಾಥ್‌ ರವರು ಗಳಿಸಿರುವ ಹೆಸರು| ಸುಂದರ್‌ ರಾಜ್‌ ಎನ್‌ ಮಂಜುನಾತೆ ಅಭಿನಂದನಾ ಸಮಿತಿ ಅಧ್ಯಕ್ಷರು

ಎನ್‌ ಮಂಜುನಾಥ್‌ ರವರು ಮೊಹರೆ ಹಣಮಂತರಾಯ ಪ್ರಶಸ್ತಿ ಪಡೆದಿರುವ ಹಿನ್ನಲೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ವಿಚಾರವನ್ನು ಎಲ್ಲಾ ಪತ್ರಕರ್ತರಿಗೂ ತಿಳಿಸಿದಾಗ ಯಾವುದೇ ಅಪಸ್ವರ ಇಲ್ಲದೆ ಎಲ್ಲಾ ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಇದು ಎನ್‌ ಮಂಜುನಾಥ್‌ ರವರು ಗಳಿಸಿರುವ ಹೆಸರು. ಹಾಗೆಯೇ ಎನ್‌ ಮಂಜುನಾಥ್‌ ರವರ ಬಗ್ಗೆ ಅನೇಕ ಪತ್ರಕರ್ತರು ಲೇಖನವನ್ನು ಬರೆದು ಕೊಟ್ಟಿದ್ದಾರೆ. ಆ ಲೇಖನಗಳಲ್ಲಿ ಮಂಜುನಾಥ್‌ ರವರು ಪಡೆದ ಕಷ್ಟಗಳ ಬಗ್ಗೆ ತಿಳಿಸಲಾಗಿದೆ ಎಂದರು

ಈ ಸಂದರ್ಭದಲ್ಲಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್‌ ಷಡಾಕ್ಷರಿಯವರು  ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗದ ಕಾರಣ ಎಂ ಶ್ರೀಕಾಂತ್‌ ರವರು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು. ನಂತರ ಶಾಲು ಹೊದಿಸಿ ಹಾರ ಹಾಕುವ ಮೂಲಕ ಎನ್‌ ಮಂಜುನಾಥ್‌ ರವರಿಗೆ ಸನ್ಮಾನ ಮಾಡಲಾಯಿತು. ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು.

 

 

SUMMARY | N Manjunath, editor-in-chief of Krantideepa, said, “It was my Krantideepa magazine that lit up my life. 

KEYWORDS |  N Manjunath, editor-in-chief of Krantideepa,  shiv̧amoogga, kannadanews,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಈಗ ಮೊಬೈಲ್‌ ಇರುವವರೆಲ್ಲಾ ಪತ್ರಕರ್ತರೇ | ರವೀಂದ್ರ ಭಟ್‌
Next Article ಗ್ರಾಹಕರಿಗೆ ಬಿಗ್‌ ಶಾಕ್‌ | ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

zipline in jog falls
SHIVAMOGGA NEWS TODAYSAGARA

zipline in jog falls / ಮುಂದಿನ 3 ತಿಂಗಳಲ್ಲಿ ಜೋಗ ಜಲಪಾತದಲ್ಲಿ ಮತ್ತೊಂದು ದೊಡ್ಡ ಯೋಜನೆ ! ಪ್ರವಾಸಿಗರಿಗೆ ಸಿಹಿಸುದ್ದಿ

By ajjimane ganesh
Aredotlu village Theft case
SHIVAMOGGA NEWS TODAYBHADRAVATI

Aredotlu village Theft case 22 / ಅರೆದೊಟ್ಲು ಕಳ್ಳತನ ಕೇಸ್​/ ಚನ್ನಗಿರಿ ನಿವಾಸಿ, ಭದ್ರಾವತಿ ವಾಸಿ ಅರೆಸ್ಟ್!

By ajjimane ganesh
SHIVAMOGGA NEWS TODAY

ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

By 131

ಸುಮುಟೋ ಕೇಸ್‌ಗೆ ಕೆರಳಿದ ರಾಷ್ಟ್ರಭಕ್ತ ಬಳಗ | SP ಗೆ ಕೊಟ್ಟ ಮನವಿಯಲ್ಲಿ ಏನಿದೆ ಗೊತ್ತಾ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up