SHIVAMOGGA | MALENADUTODAY NEWS | ಮಲೆನಾಡು ಟುಡೆ Nov 30, 2024
ಕೋರ್ಟ್ನಲ್ಲಿದ್ದ ಪ್ರಕರಣದಲ್ಲಿ ರಾಜಿ ಮಾಡಿಸುವ ಆಮೀಷವೊಡ್ಡಿ ವ್ಯಕ್ತಿಯೊಬ್ಬರಿಂದ ಮೂರು ಸಾವಿರ ಲಂಚ ಪಡೆಯುತ್ತಿದ್ದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಒಬ್ಬರು ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆ ಬಳಿಯ ಕೆರೆಹಳ್ಳಿ ಗ್ರಾಮದ ಅಂಜನ್ಕುಮಾರ್ ವೇಲು ನಾಯರ್ ನೀಡಿದ್ದ ದೂರು ಅಧರಿಸಿ ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಎಂ.ಎಚ್.ಮಂಜುನಾಥ ಚೌಧರಿ ನೇತೃತ್ವದ ತಂಡ ನಿನ್ನೆದಿನ ಕಾರ್ಯಾಚರಣೆ ನಡೆಸಿ ಎಪಿಪಿ ರವಿಯವರನ್ನ ವಶಕ್ಕೆ ಪಡೆದಿದದೆ.
ನಡೆದಿದ್ದೇನು?
ಅಂಜನ್ ಕುಮಾರ್ ಹಾಗೂ ಗವಟೂರು ಗ್ರಾಮದ ಕೆಲವರ ನಡುವೆ, ರಬ್ಬರ್ ಮರ ಲೀಸ್ ಪಡೆಯುವ ವಿಚಾರದಲ್ಲಿ ಹೊಡೆದಾಟ ಆಗಿತ್ತು. ಆ ಬಳಿಕ ಪ್ರಕರಣ ವಿಚಾರಣೆ ನಡೆದು, ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದೀಗ ಹೊಸನಗರ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ಈ ನಡುವೆ ಅಂಜನ್ಕುಮಾರ್ರವರಿಗೆ ಹೊಸನಗರ ಅಡಿಷನಲ್ ಜಡ್ಜ್ ಆಂಡ್ ಜೆಎಂಎಫ್ಸಿ ಕೋರ್ಟ್ ನ ಎಪಿಪಿ ರವಿ ಕೆ , ಪ್ರಕರಣವನ್ನು ರಾಜಿ ಮಾಡಿಸಿ ಕೊಡುತ್ತೇನೆ, ಇದಕ್ಕಾಗಿ ಲಂಚ ನೀಡಬೇಕು ಎಂದು ಅಂಜನ್ ಕುಮಾರ್ಗೆ ಹೇಳಿದ್ದರಂತೆ. ಅಲ್ಲದೆ ಈ ಸಂಬಂಧ ಮಾತುಕತೆಯ ವಿಡಿಯೋ ಸಹ ಅಂಜನ್ ಕುಮಾರ್ರವರ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಅದನ್ನ ಆದರಿಸಿ ಅಂಜನ್ ಕುಮಾರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ನಿನ್ನೆ ಹೊಸನಗರ ಕೋರ್ಟ್ನಲ್ಲಿ ಅಂಜನ್ಕುಮಾರ್ರಿಂದ ಹಣ ಪಡೆಯುತ್ತಿರುವಾಗಲೇ ಎಪಿಪಿ ರವಿಯವರನ್ನ ವಶಕ್ಕೆ ಪಡೆದಿದ್ದಾರೆ. ಅವರು ಪಡೆಯುತ್ತಿದ್ದ ಮೂರು ಸಾವಿರ ರೂಪಾಯಿ ಲಂಚದ ಹಣವನ್ನು ಸೀಜ್ ಮಾಡಿದ್ದಾರೆ.
SUMMARY | APP Ravi of Hosanagar Additional Judge and JMFC Court was caught by the Lokayukta police while accepting the bribe.
KEY WORDS | Hosanagar Additional Judge and JMFC Court APP , caught by the Lokayukta police