SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 18, 2025
ಶಿವಮೊಗ್ಗ | ಅತಿಥಿ ಉಪನ್ಯಾಸಕರು ನಿಮ್ಮ ಗ್ಯಾರಂಟಿ ಯೋಜನೆಯ ಪುಕ್ಸಟ್ಟೆ ಹಣ ಕೇಳುತ್ತಿಲ್ಲ. ಅವರು ಕೆಲಸ ಮಾಡಿದ್ದಕ್ಕೆ ಪ್ರತಿಯಾಗಿ ಹಣ ಕೇಳುತ್ತಿದ್ದಾರೆ. ಆದಷ್ಟು ಬೇಗ ಶಿಕ್ಷಕರ ಸಂಬಳವನ್ನು ಬಿಡುಗಡೆ ಮಾಡಿ ಎಂದು ಮಾಜಿ ಡಿಸಿ ಎಂ ಕೆ ಎಸ್ ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಇಂದು ಶಿವಮೊಗ್ಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಕೆಲವು ಶಾಲಾ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರ 7 ತಿಂಗಳಿಂದ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇದರಿಂದಾಗಿ ಅನೇಕ ಉಪನ್ಯಾಸಕರು ನಾವು ಬದುಕಬೇಕೂ ಸಾಯಬೇಕೂ ಎಂದು ಕೇಳುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ಸರ್ಕಾರ ರಾಜ್ಯದಲ್ಲಿ ಬದುಕಿದೆಯೂ ಸತ್ತಿದೆಯೂ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಆದ್ದರಿಂದ ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯುತ್ತಿದ್ದೇನೆ ಎಂದರು.

ಶಿಕ್ಷಕರು ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದಾಗ ಖಜಾನೆಯಿಂದ ಹಣ ಬರುತ್ತದೆ ಎಂಬ ಸಬೂಬನ್ನೂ ಹೇಳುತ್ತಾರೆ. 7 ತಿಂಗಳ ಕಾಲ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡದಿದ್ದರೆ ಅವರ ಬದುಕು ಬಹಳ ಕಷ್ಟವಾಗುತ್ತದೆ. ಶಿಕ್ಷಕರಿಗೆ ಹಣ ನಿಲ್ಲಿಸಿದ ಹಾಗೆ ಒಂದು ತಿಂಗಳು ಮಂತ್ರಿಗಳಿಗೆ ಸಂಬಳ ನಿಲ್ಲಿಸಿ ನೋಡೋಣ. ಅದು ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ದೂರಿದರು.
ಇದೇ ವೇಳೆ ಅನೇಕ ಶಿಕ್ಷಕರು ನನ್ನ ಬಳಿ ಬಂದು ಕ್ರಾಂತಿವೀರ ಬ್ರಿಗೇಡ್ ಮೂಲಕ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಕೇಳಿದ್ದರು. ಆದ್ದರಿಂದ ನಾನು ಕ್ರಾಂತಿವೀರ ಬ್ರಿಗೇಡ್ ವತಿಯಿಂದ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರಿಗೆ ಈ ಕುರಿತು ಪತ್ರ ಬರೆಯುತ್ತಿದ್ದೇನೆ ಎಂದರು.
SUMMARY | The guest lecturers are not asking for the puxate money of your guarantee scheme. They are asking for the money they have worked for. Former DC M K S Eshwarappa urged the state government to release the salaries of teachers at the earliest.
KEYWORDS | guest lecturers, K S Eshwarappa, state government, release salaries,