ಕಳೇದ ಜನವರಿ 8 ರಂದು ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಭೂಪಾಳಂರವರ ನಿವಾಸದಲ್ಲಿ ಸಂಭವಿಸಿದ ಅಗ್ನಿದುರಂತದ ಬಗ್ಗೆ ಇದೀಗ ಕೆಲವೊಂದು ಆರೋಪಗಳು ಕೇಳಿಬಂದಿವೆ. ಅಗ್ನಿದುರಂತದಲ್ಲಿ ಶರತ್ ರವರ ಸಾವು ಸಂಭವಿಸಲು ಅಗ್ನಿಶಾಮಕ ದಳದ ನಿರ್ಲಕ್ಷ್ಯವೂ ಸಹ ಒಂದು ಕಾರಣ ಎಂಬ ಆರೋಪವನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ. ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಕುಟುಂಬಸ್ಥರು ಇದೇ ವಿಚಾರವಾಗಿ ಜನವರಿ 16 ರಂದು ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ಮಹಿಳಾ ಅಭಿಮಾನಿಗಳ ಪ್ರಶ್ನೆಗಳಿಗೆ ಶಿವಣ್ಣನ ರಿಯಾಕ್ಷನ್ ನೋಡಿ
ಇನ್ನೂ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಶಿಧರ್ ಭೂಪಾಳಂ ಘಟನೆ ವೇಳೆ ಅಗ್ನಿ ಶಾಮಕ ದಳದ ಸಿಬ್ವಂದಿಗಳ ಮೈಮೇಲೆ ಸಮವಸ್ತ್ರವಿಲ್ಲದ ಕಾರಣ ಯಾರು ಇಲಾಖೆಯವರು ಯಾರು ಸಾರ್ವಜನಿಕರು ಎಂಬುದೇ ಗುರುತು ಹಿಡಿಯಲು ಕಷ್ಟವಾಗಿತ್ತು ಎಂದು ಆರೋಪಿಸಿದ್ದಾರೆ. ಅಗ್ನಿಶಾಮಕದಳದ ನಿಲಕ್ಷ್ಯದಿಂದ ಸಾವು ನೋವು ಸಂಭವಿಸಿದೆ. ಈ ಹಿನ್ನೆಲೆ ಜನವರಿ 16 ರಂದು ಶರತ್ ಭೂಪಾಳಂ ಮನೆ ಶುಭಶ್ರೀಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಬೆಳಿಗ್ಗೆ 10-30 ರವರೆಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಅಗ್ನಿಶಾಮಕ ದಳದ ವೈಫಲ್ಯಗಳ ಬಗ್ಗೆ ಭೂಪಾಳಂ ಕುಟುಂಬದ ಆರೋಪವೇನು?
- 1 ಅಗ್ನಿಶಾಮಕದಳದ ಸಮವಸ್ತ್ರವಿಲ್ಲದ ನೌಕರವರ್ಗ, ಆ ಸಮಯದಲ್ಲಿ ಮನೆಯೊಳಗೆ ನುಗ್ಗಿದ್ದರಿಂದ ಅಗ್ನಿಶಾಮಕ ದಳದವರನ್ನು ಗುರುತಿಸುವಲ್ಲಿ ಗೊಂದಲವಾಗಿತ್ತು
- 2 ಬೆಳ್ಳಂಬೆಳ್ಳಗೆ ಕತ್ತಲು, ಹೊಗೆಯ ನಡುವೆ ಟಾರ್ಚ್ ಲೈಟ್ಗಳಿಲ್ಲದೆ ಆದ ತೊಂದರೆ,
- 3 Fire protection, Resistance ಅನುಕೂಲತೆಗಳಿಲ್ಲದೆ ಪರದಾಟ
- 4 ಆಕ್ಸಿಜನ್ ಸಿಲಿಂಡರ್ ಮತ್ತು ಮಾಸ್ಕ್ಗಳಿಲ್ಲದೆ ಪರದಾಟ
- 5 ನಿವಾಸದ ಕಾಂಪೌಂಡ್ನಿಂದ ಒಳಬರಲು ಸಾಕಷ್ಟು ಜಾಗದ ಅವಕಾಶವಿದ್ದರು ವಾಹನಗಳು ಒಳಬರಲು ನಿರಾಕರಿಸಿದ್ದವು
- 6 ಅಗ್ನಿಶಾಮಕದಳದ ವಾಹನ ಬಂದ ನಂತರವು ನೀರಿನ ಪೈಪ್ಗಳ ಕೊರತೆ, ಹೊಂದಾಣಿಕೆ ಇಲ್ಲದ ವಾತಾವರಣದಿಂದ ಮತ್ತಷ್ಟು ಗೊಂದಲ ಉಂಟಾಗಿತ್ತು.
- 7 ಅಗ್ನಿಶಾಮಕ ದಳದಲ್ಲಿ ಪ್ರಮುಖವಾಗಿ ಬೇಕಾಗಿರುವ ಇನ್ಸಿಡೆಂಟ್ ಅನಾಲಿಸಿಸ್ ಬಗ್ಗೆ ಅಜ್ಞಾನ,
- 8 ಅತಿಮುಖ್ಯವಾದ ಎರಡನೇ ಆಗ್ನಿಶಾಮಕದಳದ ವಾಹನ ಘಟನೆ ಸಂಭವಿಸಿ ಅರ್ಧಗಂಟೆಯ ನಂತರ ಆಗಮನ, ಈ ವಾಹನದಲ್ಲಿ ಪ್ರಮುಖವಾಗಿ ಬೇಕಾಗಿದ್ದ ಎಲ್ಲಾ ಅನುಕೂಲತೆಗಳಿದ್ದು ಸಮಯಕ್ಕೆ ಒದಗಿಬರಬೇಕಾದರು ಬರದೇ ದುರಂತಕ್ಕೆ ಮೂಲ ಕಾರಣವಾಯಿತು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com