thirthahalli news today ಜೂನ್​ 30 : ಶಾಲಾ ಮಕ್ಕಳಿಂದ ಮೊಬೈಲ್ ತ್ಯಾಗದ ಪ್ರತಿಜ್ಞೆ 

prathapa thirthahalli
Prathapa thirthahalli - content producer

thirthahalli news today :  ಶಾಲಾ ಮಕ್ಕಳಿಂದ ಮೊಬೈಲ್ ತ್ಯಾಗದ ಪ್ರತಿಜ್ಞೆ 

thirthahalli news today :  ತೀರ್ಥಹಳ್ಳಿ: ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೀರ್ಥಹಳ್ಳಿಯ ಸೀಬಿನಕೆರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸೋಮವಾರ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ, ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ ಮತ್ತು ನೋಡುವುದಿಲ್ಲ ಎಂದು ಮಕ್ಕಳು ಪ್ರತಿಜ್ಞೆ ಮಾಡಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಿ ಮೇಡಂ ಅವರು ಮೊಬೈಲ್ ಅತಿಯಾದ ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿದಾಗ, ವಿದ್ಯಾರ್ಥಿಗಳು ತಾವಾಗಿಯೇ ಈ ಪ್ರತಿಜ್ಞೆ ಸ್ವೀಕರಿಸಲು ಮುಂದೆ ಬಂದರು.

- Advertisement -

ಇತ್ತೀಚಿನ ದಿನಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಬಳಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಸನ್ನಿವೇಶದಲ್ಲಿ, ಸರ್ಕಾರಿ ಶಾಲೆಯ ಮಕ್ಕಳ ಈ ಪ್ರಮಾಣವು ಪೋಷಕರಿಗೆ ಅಪಾರ ಸಂತಸ ತಂದಿದೆ. ಅನೇಕ ಪೋಷಕರು ಶಾಲೆಯ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. 

 

Share This Article
Leave a Comment

Leave a Reply

Your email address will not be published. Required fields are marked *