December 15 ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶೀರ ಮಾಸದ, ಬಾದ್ರಪದ ಏಕಾದಶಿ ತಿಥಿ ರಾತ್ರಿ 10.04 ರವರೆಗೆ ಇದ್ದು, ನಂತರ ದ್ವಾದಶಿ ಆರಂಭವಾಗಲಿದೆ. ಚಿತ್ತಾ ನಕ್ಷತ್ರ ಮಧ್ಯಾಹ್ನ 12.53 ರವರೆಗೆ ಇರುತ್ತದೆ, ತದನಂತರ ಸ್ವಾತಿ ನಕ್ಷತ್ರ ಇರಲಿದೆ. ಇಂದು ಸರ್ವ ಏಕಾದಶಿ ಆಚರಣೆ ಇದೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ, ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇರಲಿದೆ.

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್ಗಳು ಇಲ್ಲಿವೆ
ಇಂದಿನ 12 ರಾಶಿಗಳ ಭವಿಷ್ಯ /December 15 Today Horoscope: Financial, Career, and Health Forecast for All 12 Zodiac Signs
ಮೇಷ: ಯಶಸ್ಸು ದೊರೆಯಲಿದೆ. ಗೌರವ ಹೆಚ್ಚುತ್ತದೆ. ಭಿನ್ನಾಭಿಪ್ರಾಯ ಪರಿಹಾರ ಕಾಣುತ್ತದೆ.ವ್ಯಾಪಾರ ಕ್ಷೇತ್ರದಲ್ಲಿ ಸಮಾಧಾನಕರ ಪ್ರಗತಿ ಇರುತ್ತದೆ. ಉದ್ಯೋಗದಲ್ಲಿ ವಾರದ ಆರಂಭದ ಅನುಭವಕ್ಕೆ ಅನಿರೀಕ್ಷಿತ ಸಂತೋಷವೊಂದು ಸೇರಿಕೊಳ್ಳುತ್ತದೆ.
ವೃಷಭ: ನಿರುದ್ಯೋಗಿಗಳ ಪ್ರಯತ್ನಕ್ಕೆ ಫಲ, ದಿನವಿಡಿ ಧನಾತ್ಮಕ ಬೆಳವಣಿಗೆ ಕಾಣಬಹುದು. ಸಾಮರ್ಥ್ಯವನ್ನು ಎಲ್ಲರ ಮುಂದೆ ಸಾಬೀತುಪಡಿಸುತ್ತೀರಿ. ಹೊಸ ಸಂಪರ್ಕ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಇನ್ನಷ್ಟು ಮುನ್ನಡೆ.
ಮಿಥುನ: ಸಣ್ಣ ಪುಟ್ಟ ಅಡೆತಡೆ. ಖರ್ಚು ವೆಚ್ಚ ಹೆಚ್ಚಾಗಲಿವೆ. ಆಸ್ತಿ ವಿವಾದ. ಧಾರ್ಮಿಕ ಸ್ಥಳಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದ ನಡುವೆ ಒತ್ತಡದ ದಿನ ಇರಲಿವೆ.
ಕರ್ಕಾಟಕ: ದೂರ ಪ್ರಯಾಣ, ಆದಾಯಕ್ಕಿಂತ ಖರ್ಚು ಅಧಿಕ. ಆಲೋಚನೆ ಸ್ಥಿರವಾಗಿಲ್ಲದಿರಬಹುದು. ಕುಟುಂಬದಲ್ಲಿ ಒತ್ತಡ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣ ಬದಲಾವಣೆ

ಸಿದ್ದಾಪುರ-ಹೊಸನಗರ ಹೆದ್ದಾರಿಯಲ್ಲಿ ಹೊಳೆಗೆ ಪಲ್ಟಿಯಾದ ಇಂಧನ ಲಾರಿ!
ಸಿಂಹ: ಸ್ನೇಹಿತರಿಂದ ಹಣಕಾಸಿನ ಲಾಭ. ಆದಾಯ ನಿರೀಕ್ಷಿತ ಮಟ್ಟದಲ್ಲಿರುವುದು, ನಿಮಗೆ ಹಲವರು ನೆರವಾಗುತ್ತಾರೆ. ಆಸ್ತಿ ವಿವಾದ ಪರಿಹಾರ ಕಾಣಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಂತೃಪ್ತಿಯನ್ನು ನೀಡುತ್ತದೆ.
ಕನ್ಯಾ: ಪರಿಸ್ಥಿತಿ ಅನುಕೂಲಕರವಾಗಿರಲಿವೆ. ಅನಗತ್ಯ ಖರ್ಚು, ಆಕಸ್ಮಿಕ ಪ್ರಯಾಣ. ಅನಿರೀಕ್ಷಿತ ಘಟನೆ ನಡೆಯಬಹುದು ಆರೋಗ್ಯ ಸಮಸ್ಯೆ ಕಾಡಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನವಿಡಿ ಹೊಸ ಹುರುಪು
ತುಲಾ: ಉದ್ಯೋಗಕ್ಕಾಗಿ ಪ್ರಯತ್ನ ನಿರೀಕ್ಷೆಯ ಹಾದಿಯಲ್ಲಿರಲಿದದೆ. ಪ್ರಯತ್ನಿಸಿದ ಕೆಲಸ ಸಿದ್ಧಿಸುತ್ತವೆ. ಶುಭ ಸಮಾಚಾರ. ವಿದ್ಯಾರ್ಥಿಗಳಿಗೆ ಪ್ರಮುಖ ಮಾಹಿತಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಇನ್ನಷ್ಟು ಅನುಕೂಲಕರವಾಗಿರಲಿದೆ
ವೃಶ್ಚಿಕ: ಕೆಲವು ಕೆಲಸ ಮುಂದೂಡಲ್ಪಡಬಹುದು. ಅನಿರೀಕ್ಷಿತ ಪ್ರಯಾಣ. ಶಾರೀರಿಕ ಸಮಸ್ಯೆ ಕಾಣಿಸಬಹುದು. ಕುಟುಂಬದಲ್ಲಿ ಒತ್ತಡ ಸೃಷ್ಟಿಯಾಗಬಹುದು. ಬಂಧು ಬಳಗದವರೊಂದಿಗೆ ಸಣ್ಣ ಪುಟ್ಟ ವಿವಾದ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ

ಶಿವಮೊಗ್ಗ, ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, 51.75 ಲೀಟರ್ ಗೋವಾ ಮದ್ಯ ವಶ
ಧನುಸ್ಸು: ಸ್ನೇಹಿತರೊಂದಿಗೆ ಒಡನಾಟ. ಆದಾಯವು ಆಶಾದಾಯಕವಾಗಿರುತ್ತದೆ. ಬಂಧುಗಳ ಸಹಕಾರ. ಪ್ರಯಾಣದ ದಿನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉಲ್ಲಾಸ ಉತ್ಸಾಹ.
ಮಕರ: ನಿರೀಕ್ಷೆಗಳು ನಿಜವಾಗುತ್ತವೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಪ್ರಯಾಣ ಮುಂದೂಡಿಕೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ
ಕುಂಭ: ಆದಾಯ ಕಡಿಮೆಯಾಗುವ ಸಾಧ್ಯತೆ ಇದ್ದು, ಸಾಲ ಆಗಬಹುದು, ಜವಾಬ್ದಾರಿ ಹೆಚ್ಚಾಗುತ್ತವೆ. ಕೆಲವು ಕೆಲಸದಲ್ಲಿ ಅಡೆತಡೆ ಎದುರಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ
ಮೀನ: ಆಕಸ್ಮಿಕ ಪ್ರಯಾಣ. ಸ್ನೇಹಿತರೊಂದಿಗೆ ವಾದ ವಿವಾದ. ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಬಹುದು. ಕುಟುಂಬ ಸದಸ್ಯರಿಂದ ಒತ್ತಡ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರುತ್ಸಾಹ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
