SHIVAMOGGA NEWS / ONLINE / Malenadu today/ Nov 24, 2023 NEWS KANNADA
Shivamogga | Malnenadutoday.com ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಗೊತ್ತೆ ಇದೆ.
ಅಯೋಧ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಈ ಭವ್ಯ ರಾಮಮಂದಿರದ ಉದ್ಘಾಟನೆಯ ಆಹ್ವಾನ ನೀಡುವ ಅಕ್ಷತೆ ಅಯೋಧ್ಯೆಯಿಂದ ಶಿವಮೊಗ್ಗಕ್ಕೆ ನಾಳೆ ರಾತ್ರಿ 9-30ಕ್ಕೆ ಆಗಮಿಸಲಿದೆ.
ಈ ಅಕ್ಷತೆಯನ್ನು, ಬೆಕ್ಕಿನ ಕಲ್ಮಠದ ಬಳಿಯಿಂದ ಕೋಟೆ ಶ್ರೀ ರಾಮಾಂಜನೇಯ ದೇವಸ್ಥಾನ ದವರೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಲಿದೆ.
READ : ಎನ್ಆರ್ ಪುರ ರೋಡಲ್ಲಿ ಮಗನ ವಿಲ್ಹೀಂಗ್! ತಂದೆಗೆ ಶಾಕ್ ಕೊಟ್ಟ ಪೂರ್ವ ಸಂಚಾರಿ ಪೊಲೀಸ್ !
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿಹಿಂಪ ಕಾರ್ಯಕರ್ತರು ಎಲ್ಲಾ ಮನೆಗಳಿಗೆ ಈ ಅಕ್ಷತೆಯನ್ನು ತಲುಪಿಸಿ ಆಹ್ವಾನಿಸಲಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸು ವಂತೆ ವಿಹೆಚ್ ಪಿ ಜಿಲ್ಲಾಧ್ಯಕ್ಷ ವಾಸುದೇವ್ ಕೋರಿದ್ದಾರೆ.
