SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 10, 2024
ಶಿವಮೊಗ್ಗ | ವಿಕಲ ಚೇತನ ನವಕರ್ನಾಟಕ ಎಂ ಆರ್ ಡಬ್ಲ್ಯೂ , ವಿಆರ್ ಡಬ್ಲ್ಯೂ ಯುಆರ್ ಡಬ್ಲು ಆಗಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ನಿಗದಿಪಡಿಸಬೇಕು ಅಥವ ತಮ್ಮ ಹುದ್ದೆಯನ್ನು ಖಾಯಂ ಗೊಳಿಸಬೇಕೆಂದು ಆಗ್ರಹಿಸಿ ಇದೇ ಡಿಸೆಂಬರ್ 13 ರಂದು ಸುವರ್ಣ ಸೌಧದ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ನವ ಕರ್ನಾಟಕ ವಿಕಲಚೇತನರ ಜಿಲ್ಲಾಧ್ಯಕ್ಷರಾದ ಯಶೋಧ ನಿನ್ನೆ ಶಿವಮೊಗ್ಗದಲ್ಲಿ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ದೇಶದ ಜನಸಂಖ್ಯೆಯ ಒಟ್ಟು ಶೆಕಡ 5 ರಷ್ಟು ವಿಕಲ ಚೇತನರಿದ್ದಾರೆ. ವಿಕಲ ಚೇತನರೆಂದರೆ ತಮ್ಮ ಎಲ್ಲಾ ಕೆಲಸವನ್ನು ಮಾಡಲು ಬೇರೆಯವರನ್ನು ಅವಲಂಭಿಸುವವರಾಗಿದ್ದಾರೆ. ನಮ್ಮ ಈ ವಿಕಲ ಚೇತನ ನವಕರ್ನಾಟಕ ಸಂಸ್ಥೆ ಸಹ ಜಿಲ್ಲೆಯಲ್ಲಿರುವ ಎಲ್ಲಾ ವಿಕಲ ಚೇತನರ ಮನೆಗೆ ಬೇಟಿ ನೀಡಿ ಸರ್ಕಾರದ 21 ಯೋಜನೆಗಳನ್ನು ಅವರಿಗೆ ತಿಳಿಸಿ ಆ ಯೋಜನೆಯನ್ನು ಅವರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ, ನಮ್ಮ ಈ ಸಂಸ್ಥೆ ಸ್ಥಾಪನೆಯಾಗಿ ಇಂದಿಗೆ 17 ವರ್ಷ ಕಳೆದಿದೆ ಆದರೆ ಸರ್ಕಾರ ಎಂ ಆರ್ ಡಬ್ಲೂ/ವಿಆರ್ ಡಬ್ಲೂ/ಯುಆರ್ ಡಬ್ಲು ಆಗಿ ಕಾರ್ಯನಿರ್ವಹಿಸುವವರ ಬಗ್ಗೆ ಅಸಡ್ಡೆ ತೋರಿದೆ. ಹಾಗೆಯೇ ಎಂ ಆರ್ ಡಬ್ಲೂ 15 ಸಾವಿರ ಸಂಬಳ ಕೊಡುತ್ತಿದ್ದು, ವಿಆರ್ ಡಬ್ಲೂಆಗಿ ಕಾರ್ಯ ನಿರ್ವಹಿಸುವವರಿಗೆ 9 ಸಾವಿರ ಸಂಬಳ ಕೊಡುತ್ತಿದೆ. ಇದರಿಂದಾಗಿ ಜೀವನ ನಡೆಸಲು ಬಹಳಾ ಕಷ್ಟವಾಗುತ್ತದೆ. ಸರ್ಕಾರ ಎಂ ಆರ್ ಡಬ್ಲೂ ಸಂಬಳವನ್ನು 35 ಸಾವಿರ ಮಾಡಬೇಕು ಹಾಗೆಯೇ ವಿಆರ್ ಡಬ್ಲೂ ಸಂಬಳವನ್ನು 18 ಸಾವಿರಕ್ಕೆ ಹೆಚ್ಚಿಸಬೇಕು. ಹಾಗಾಗಿ ನಮ್ಮ ಸಂಬಳವನ್ನು ಹೆಚ್ಚಿಬೇಕೆಂದು ಅಥವಾ ನಮ್ಮ ಕೆಲಸವನ್ನು ಖಾಯಂ ಗೊಳಿಸಬೇಕೆಂದು ಆಗ್ರಹಿಸಿ ಇದೇ ಡಿಸೆಂಬರ್ 13 ರಂದು ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದರು.

ನಮ್ಮ ರಾಜ್ಯದಲ್ಲಿ ಯುಆರ್ ಡಬ್ಲು, ವಿಆರ್ ಡಬ್ಲುಹಾಗೂ ಎಂಆರ್ ಡಬ್ಲೂ ಆಗಿ ಕಾರ್ಯ ನಿರ್ವಹಿಸುವವರು ಒಟ್ಟು 6780 ಜನ ಇದ್ದೇವೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 280 ಜನ ಇದ್ದೇವೆ. ಈ ಹಿಂದೆಯೂ ಸಹ ಈ ವಿಷಯದ ಕುರಿತು ಅನೇಕ ರಾಜಕೀಯ ವ್ಯಕ್ತಿಗಳಿಗೆ ಮನವಿ ನೀಡಿದ್ದೇವೆ.ಆದರೆ ನಮ್ಮ ಬಗ್ಗೆ ಸರ್ಕಾರ ಮನವಿ ಪರಿಗಣಿಸುತ್ತಿಲ್ಲ ಎಂದರು.
SUMMARY | On December 13, they staged a protest in front of Suvarna Soudha demanding that the state government fix minimum wages or regularise their posts for the workers working as Navakarnataka MRW, VRW URW
KEYWORDS| MRW, VRW, URW, Suvarna Soudha, minimum wages, protest,