SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 10, 2024
ಶಿವಮೊಗ್ಗ| ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರೆಲ್ಲರೂ ಡಿಸೆಂಬರ್ 13ರಂದು ಬೆಳಗಾವಿ ಸುವರ್ಣ ಸೌಧಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಗೌಡ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಮೂರನೇ ಬಾರಿ ಸುವರ್ಣ ಸೌಧವನ್ನು ಮುತ್ತಿಗೆ ಹಾಕುತ್ತಿದ್ದೇವೆ. ಚುನಾವಣೆ ನಡೆಯುವ ಮುನ್ನ ಕಾಂಗ್ರೆಸ್ ಸರ್ಕಾರ ರೈತ ಕಾಯ್ದೆಯನ್ನುರದ್ದು ಮಾಡುತ್ತೇವೆ ಎಂದು ಹೇಳಿತ್ತು. ಆದರೆ ಅದರ ಬಗ್ಗೆ ಇದುವರೆಗೂ ಸುದ್ದಿಯೇ ಇಲ್ಲ. ಸರ್ಕಾರ ಇಂದು ಮಾಡುವ ಕೆಲಸವನ್ನು ಮಾಡದೇ ಬೇಡದೆ ಇರುವ ಕೆಲಸವನ್ನೆಲ್ಲಾ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ಯಾವಾಗಲೂ ರೈತರನ್ನು ಕಡೆಗಣಿಸುತ್ತೆ ಎಂದು ಹೇಳಿದರು. ಆದರೆ ಈಗ ಅವರ ಸರ್ಕಾರವೇ ರೈತರನ್ನ ಕಡೆಗಣಿಸುತ್ತಿದೆ. ಕೃಷಿ ಕಾಯ್ದೆಯಿಂದ ಬೇಸತ್ತು 10 ಲಕ್ಷ ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದರು. ರಾಜ್ಯ ಸರ್ಕಾರ ರೈತರ ಮರಣ ಶಾಸನವನ್ನು ಬರೆಯಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ವರ್ಷ ರೈತರು ಮಳೆ ಇಲ್ಲದೆ ಕಂಗಾಲಗಿದ್ದರು ಆದರೆ ಈ ಬಾರಿ ಮಳೆ ಹೆಚ್ಚಾಗಿ ಬೆಳೆ ಕಟಾವು ಮಾಡಲು ಪರದಾಡುತ್ತಿದ್ದಾರೆ. ಈ ನಡುವೆ ಸರ್ಕಾರ ಭತ್ತದ ರೇಟನ್ನು ಸಹ ಇಳಿಸಿದೆ. ಇದರಿಂದಾಗಿ ರೈತರ ಸಮಸ್ಯೆಯನ್ನು ಬಗೆಹರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ಡಿಸೆಂಬರ್ 13ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಭಾರಿ ಪ್ರಮಾಣದಲ್ಲಿ ರೈತರು ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದರು.
ರೈತರು ರಾಜ್ಯ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳೇನು
ನೂತನ ಕೃಷಿ ಕಾಯ್ದೆ ರದ್ದುಗೊಳಿಸಬೇಕು, ವಕ್ಫ್ ಹೆಸರನ್ನ ರೈತ ಪಹಣಿಯಲ್ಲಿ ತರಲಾಗಿದೆ ಅದು ಸಂಪೂರ್ಣ ರದ್ದಾಗಬೇಕು,ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಉಳುಮೆ ಮಾಡಿಕೊಂಡಿದ್ದ ರೈತರನ್ನ ಹೊರದೂಡುವ ಕೆಲಸ ಮಾಡುತ್ತಿದೆ ಅದನ್ನು ನಿಲ್ಲಿಸಬೇಕು, 10,000 ಕೋಟಿ ಅವರ್ತ ನಿಧಿ ಸ್ಥಾಪಿಸಿ ಎಲ್ಲಾ ಬೆಳೆ ಖರೀದಿಸಬೇಕು ಎಂದು ಹಲವು ಬೇಡಿಕೆಗಳನ್ನ ರೈತರು ಸರ್ಕಾರದ ಮುಂದಿಟ್ಟಿದ್ದಾರೆ.
SUMMARY | On December 13, they will lay siege to the Suvarna Soudha in Belagavi. Manjunath Gowda, district president of Karnataka Rajya Raitha Sangha and Hasiru Sena, informed about this.
KEYWORDS| Suvarna Soudha in Belagavi, Rajya Raitha Sangha December 13, kannadanews,