SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 28, 2025
ಶಿವಮೊಗ್ಗ | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರೇ ನೀವು ರಾಹುಲ್ ಗಾಂಧಿಯವರ ಕೈಗೊಂಬೆಯಾಗಿದ್ದೀರ ನೀವು ಸ್ವರ್ಗಕ್ಕೆ ಹೋಗಬೇಕೆಂಬುದು ನಮ್ಮ ಬಯಕೆ ಆದರೆ ನೀವು ರಾಹುಲ್ ಗಾಂಧಿ ಮಾತು ಕೇಳಿದರೆ ನರಕಕ್ಕೆ ಹೋಗ್ತೀರಾ ಎಂದು ಶಾಸಕ ಎಸ್ ಎನ್ ಚೆನ್ನಬಸಪ್ಪ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆಯವರು ಕುಂಭಮೇಳದಲ್ಲಿ ಗಂಗಾ ಸ್ನಾನಮಾಡುವುದರಿಂದ ದೇಶದ ಬಡತನ ನಿರ್ಮೂಲನೆಯಾಗುವುದಿಲ್ಲ ಎಂದು ಬಿಜೆಪಿಗರಿಗೆ ಟೀಕಿಸಿದ ವಿಚಾರದ ಬಗ್ಗೆ ಶಾಸಕರು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಮಲ್ಲಿಕಾರ್ಜುನ್ ಖರ್ಗೆಯವರೆ ನೀವು ಹಿರಿಯ ವ್ಯಕ್ತಿ ಆದರೆ ನೀವು ಆ ಹಿರಿತನವನ್ನು ಇಟ್ಟುಕೊಂಡಿಲ್ಲ. ನೀವು ಪಕ್ಷಕ್ಕಾಗಿ ಬಹಳಾ ಶ್ರಮವನ್ನು ಪಟ್ಟಿದ್ದೀರ. ಆದರೆ ಕುಂಭಮೇಳದ ಬಗ್ಗೆ ಮನಸ್ಸಿಗೆ ಬಂದಹಾಗೇ ಮಾತನಾಡುತ್ತಿರಾ ಅದು ಸರಿಯಲ್ಲ ಎಂದರು.

ಗಂಗಾ ಸ್ನಾನ ಮಾಡಿದ್ರೆ ನರಕಕ್ಕೆ ಹೋಗ್ತೀರಾ ಅಂತಾ ಹೇಳಿದ್ದೀರಾ. ನರಕಕ್ಕೆ ಹೋಗೋದು ಗಂಗಾ ಸ್ನಾನ ಮಾಡಿದವರಲ್ಲ ಕಾಂಗ್ರೆಸ್ನವರು ಏಕೆಂದರೆ ಅಷ್ಟು ಮಟ್ಟಕ್ಕೆ ಕಾಂಗ್ರೆಸ್ ನವರು ದೇಶವನ್ನು ಹಾಳು ಮಾಡಿದ್ದೀರ ಎಂದರು. ಹಾಗೆಯೇ ನಿಮ್ಮನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಆಟ ಆಡುತ್ತಿದ್ದಾರೆ. ನೀವು ರಾಹುಲ್ ಗಾಂಧಿ ಕೈಗೊಂಬೆ ಆಗಿದ್ದೀರಾ. ಈ ಹಿಂದೆ ಸಂವಿಧಾನ ಅವಹೇಳನ ಮಾಡಿದ್ರಿ ಈಗ ಹಿಂದೂ ಧರ್ಮವನ್ನ ಅವಹೇಳನ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.
ಮಧು ಬಂಗಾರಪ್ಪನವರೇ ನಿವೇನು ಹೊಟ್ಟೆಗೆ
ಮಾಜಿ ಸಚಿವರಾದ ಹರತಾಳು ಹಾಲಪ್ಪ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪವನರು ನೀಡಿದ ಅವಹೇಳನಾಕಾರಿ ಹೇಳಿಕೆಗೆ ಶಾಸಕ ಚೆನ್ನಬಸಪ್ಪನವರು ಖಾರವಾಗಿ ಪ್ರತಿಕ್ರಿಯಿಸಿದರು. ಮಧು ಬಂಗಾರಪ್ಪನವರೇ ಹುಷಾರು ತಪ್ಪಬೇಡಿ. ಹರತಾಳು ಹಾಲಪ್ಪರವರು ಹೊಟ್ಟೆಗೆ ಏನು ತಿನ್ನುತ್ತಿದ್ದರು ಎಂದು ಅವಾಚ್ಯ ಶಬ್ದದಿಂದ ಕೇಳಿದ್ದೀರಿ. ಆ ರೀತಿ ಪದ ಬಳಕೆ ಮಾಡುವ ನೀವು ಹೊಟ್ಟೆಗೆ …ತಿನ್ನುತ್ತಿದ್ರಾ ಹರತಾಳು ಹಾಲಪ್ಪ ನಿಮ್ಮ ಸಮುದಾಯದ ನಾಯಕ ನಿಮ್ಮ ತಂದೆ ಜೊತೆ ಇದ್ದವರು ಅವರಿಗೆ ಗೌರವ ಕೊಡಿ ಎಂದರು.
SUMMARY | Mallikarjun Kharge You Are A Puppet In The Hands Of Rahul Gandhi We Want You To Go To Heaven But You Will Go To Hell By Listening To Rahul Gandhi
KEYWORDS | Mallikarjun Kharge, Rahul Gandhi, channabasappa, politics,