Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ದ್ವೇಷದ ಗ್ಯಾರಂಟಿ ನಡುವೆ ಪ್ರಣಾಳಿಕೆಯ ಭರವಸೆಗಳು ಮರಿಚೀಕೆ ಆಯ್ತಾ? | ಡಿಎಸ್‌ ಅರುಣ್‌ ಆರೋಪವೇನು?

131
Last updated: November 15, 2024 8:45 pm
131
Share
SHARE

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024

ಶಿವಮೊಗ್ಗ| ಕಾಂಗ್ರೆಸ್  ಸರ್ಕಾರ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೀನಿ ಎಂದು ಸರ್ವ ಜನಾಂಗದ ದ್ವೇಷದ ತೋಟವನ್ನಾಗಿ ಮಾಡುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ  ಡಿಎಸ್ ಅರುಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆದಿನ ಶಿವಮೊಗ್ಗದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಎಲ್ಲ ರಾಷ್ಟ್ರೀಯ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಅದರಂತೆ ಕಾಂಗ್ರೆಸ್ ಸಹ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯ ಒಂದನ್ನು ಬಿಟ್ಟು ಬೇರೆ ಯಾವ ಪ್ರಣಾಳಿಕೆಯನ್ನು ಸಹ ಇದುವರೆಗೂ ಈಡೇರಿಸಲಿಲ್ಲ ಎಂದು ದೂರಿದರು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ಒಂದು ಪರ್ಸೆಂಟ್ ಕೆಲಸ ಸಹ ಇದುವರೆಗೂ ಆಗಿಲ್ಲವೆಂದ ಡಿಎಸ್‌ ಅರುಣ್‌,  ಕಾಂಗ್ರೆಸ್ ಪ್ರಣಾಳಿಕೆಯನ್ನು ಕಸದ ಬುಟ್ಟಿಗೆ ಹಾಕುವುದೇ ಉತ್ತಮ ಎಂದರು. ಪ್ರವಾಸೋಧ್ಯಮ , ಕ್ರೀಡೆ, ಕೃಷಿ, ಅಲ್ಪ ಸಂಖ್ಯಾತ, ಹಿಂದುಳಿದವರ ಕಲ್ಯಾಣ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೀಡಿದ ಭರವಸೆಗಳಿಗೆ ಇದುವರೆಗೂ ನಯಾ ಪೈಸೆ ಅನುದಾನ ಸರ್ಕಾರ ನೀಡಿಲ್ಲ ಎಂದು ಆರೋಪಿಸಿದರು. 

car decor

ಮಾಜಿ ಸಿಎಂ ಯಡಿಯೂರಪ್ಪನವರು ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆಗೆ ಈಗ 18 ವರ್ಷ ತುಂಬಿದೆ ಆದರೆ ಬಾಗ್ಯಲಕ್ಷ್ಮೀಯ ಹಣವನ್ನು ಕೊಡಲು ಸಹ ರಾಜ್ಯ ಸರ್ಕಾರದ ಬಳಿಯಲ್ಲಿ ಹಣವಿಲ್ಲ ಎಂದು ಟೀಕಿಸಿದ ಡಿಎಸ್‌ ಅರುಣ್‌  ಗೃಹ ಜ್ಯೋತಿ ಹೆಸರಲ್ಲಿ ಕರೆಂಟ್ ಫ್ರೀ ಕೊಟ್ಟಿದ್ದಾರೆ ಆದರೆ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದ್ದಾರೆ ಎಂದರು. 

ಪತ್ರಿಕೆಯಲ್ಲಿ ಗ್ಯಾರಂಟಿ ಜಾಹಿರಾತು ನೀಡಿ ಕಾಂಗ್ರೆಸ್‌ ಬದ್ಧತೆ ಅಂತ ಟ್ಯಾಗ್‌ಲೈನ್‌ ಹಾಕಿಕೊಳ್ಳುವ ಕಾಂಗ್ರೆಸ್‌ನದ್ದು ಮುಡಾ ಹಗರಣ ದ್ವೇಷ ರಾಜಕಾರಣದ ಬದ್ಧತೆಯಾಗಿದೆ. ಅದನ್ನ ಹೊರತುಪಡಿಸಿ ಕಾಂಗ್ರೆಸ್‌ ಸರ್ಕಾರದಲ್ಲಿ ಬೇರೆ ಬದ್ಧತೆ ಇಲ್ಲ ಎಂದರು. ಮೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್‌ಲ್ಲಿ ಪ್ರತಿಕ್ಷೇತ್ರಕ್ಕೆ ತಲಾ ಹತ್ತತ್ತು ಸಚಿವರು ಪ್ರಚಾರ ನಡೆಸಿದ್ದಾರೆ. ಆದರೆ ರಾಜ್ಯದಲ್ಲಿ ನೆರೆ ಬಂದ ಸಮಯದಲ್ಲಿ ಬಡವರು ಹಾಗೂ ರೈತರ ಕಷ್ಟವನ್ನು ಕೇಳಲು ಯಾವ ಸಚಿವರು ಹೋಗಿರಲಿಲ್ಲ. ಸಿದ್ದರಾಮಯ್ಯನವರೇ ಅಭಿವೃದ್ಧಿ ಮಾಡಿ ಅದು ಬಿಟ್ಟು ದ್ವೇಷದ ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದರು. 

ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ನಾಗೇಶ್‌ರವರು. ಈಗ ಆ ಪ್ರಕ್ರಿಯೆಯನ್ನು ಕಾಂಗ್ರೆಸ್ ಮುಂದುವರೆಸಿದ್ದು, ತಾನೇ ಶಿಕ್ಷಕರ ನೇಮಕಾತಿಯನ್ನು ಮಾಡಿದಂತೆ ಬಿಂಬಿಸಿಕೊಳ್ಳುತ್ತಿದೆ. ಖಾಲಿ ಹುದ್ದೆ ತುಂಬುವ ಗೋಜಿಗೇ ಸರ್ಕಾರ ಹೋಗಿಲ್ಲ. ಅಜೀಂ ಪ್ರೇಮ್ ಜೀ ಸಂಸ್ಥೆಯ ಸಹಯೋಗದೊಂದಿಗೆ 1600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ಯೋಜನೆಯೂ ಸಮರ್ಪಕವಾಗಿಲ್ಲ ಅಂತಾ ಆರೋಪಿಸಿದರು. 

ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಸರ್ಕಾರ ಕೋವಿಡ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಕೊಡುತ್ತಿದೆ. ಆದರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ತೆಗೆದುಕೊಂಡ ನಿರ್ಧಾರದಿಂದ ಕೋವಿಡ್‌ ನಿಂದ ರಾಜ್ಯದ ಜನರು ಬಚಾವ್‌ ಆಗಲು ಸಾಧ್ಯವಾಯ್ತು. ಆ ಸಂದರ್ಭದಲ್ಲಿ ಅಗತ್ಯವಾದ ಸಾಮಗ್ರಿಗಳನ್ನ ಬಿಎಸ್‌ವೈರವರು ತಕ್ಷಣದ ನಿರ್ಧಾರ ಕೈಗೊಂಡು ರಾಜ್ಯಕ್ಕೆ ತರಿಸಿಕೊಂಡಿದ್ದರು. ಇದರಿಂದ ಕೋವಿಡ್‌ನಲ್ಲಿ ಸಾಕಷ್ಟು ಸಹಕಾರಿಯಾಗಿದೆ. ಆದರೆ, ಕಾಂಗ್ರೆಸ್‌ ಈ ವಿಚಾರದಲ್ಲಿ ದ್ವೇಷ ಸಾಧಿಸಲು ಹೊರಟಿದೆ ಎಂದು ದೂರಿದ ಡಿಎಸ್‌ ಅರುಣ್, ಕಾಂಗ್ರೆಸ್‌ ಪ್ರಣಾಳಿಕೆಯನ್ನ ಕಸದ ಬುಟ್ಟಿಗೆ ಹಾಕುವುದು ಉತ್ತಮ ಎಂದರು.

SUMMARY|  MLC D S Arun criticised the Congress government’s manifesto in the state. 

 

KEY WORDS | MLC D S Arun criticised the Congress government’s manifesto in the state. 

malenadutoday add
Share This Article
Facebook Whatsapp Whatsapp Telegram Threads Copy Link
Previous Article ರಾಜ್ಯದೆಲ್ಲೆಡೆ ಈ ದಿನ ಬಾರ್ ಬಂದ್| ಕಾರಣವೇನು
Next Article ಬೈರತಿ ರಣಗಲ್‌ನ ಮೈಲಿಗಲ್ಲಿನ ಕಥೆಗೆ ಭರ್ಜರಿ ರೆಸ್ಪಾನ್ಸ್‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ವಿಷದ ಬಾಟಲಿ ವಿಡಿಯೋಕ್ಕೆ ಕ್ಲೈಮ್ಯಾಕ್ಸ್‌ | ಪತ್ತೆಯಾದ ಪಾಲಿಕೆ ನೌಕರರ | ಏನೆಲ್ಲಾ ಆಯ್ತು

By 13
SHIVAMOGGA NEWS TODAY

KPS ಶಾಲಾಭಿವೃದ್ಧಿಗೆ 2 ಸಾವಿರ ಕೋಟಿ  ಸಾಲ |

By 131
SHIVAMOGGA NEWS TODAY

ಶಿವಮೊಗ್ಗದಲ್ಲಿ ಅಪ್ಪು ಹುಟ್ಟುಹಬ್ಬ, ಅದ್ದೂರಿಯಾಗಿ ಆಚರಿಸಿದ ಫ್ಯಾನ್ಸ್‌

By 131
Protests Against kashmir Attack
NATIONAL NEWSSHIVAMOGGA NEWS TODAY

Protests Against kashmir Attack : ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಶಿವಮೊಗ್ಗ ಮುಸ್ಲಿಂ ಸಮುದಾಯ ಪ್ರತಿಭಟನೆ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up