SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದಾಗ್ಯು ಜಾಮೀನು ಪ್ರಕ್ರಿಯೆಗಳು ವಿಳಂಬವಾಗಿ ಇವತ್ತು ಆರೋಪಿಗಳ ರಿಲೀಸ್ ತಡವಾಗಿತ್ತು. ಇವತ್ತು ಅತ್ತ ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ ರಿಲೀಸ್ ಆಗಿದ್ದಾರೆ. ಇತ್ತ ಶಿವಮೊಗ್ಗದ ಜೈಲಿನಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಂಬರ್ 2 ಲಕ್ಷ್ಮಣ್ ರಿಲೀಸ್ ಆಗಿದ್ದಾರೆ.
ನಿನ್ನೆಯೇ ಶಿವಮೊಗ್ಗ ಸೆಂಟ್ರಲ್ ಜೈಲಿನಿಂದ ಲಕ್ಷ್ಮಣ್ರನ್ನ ಬಿಡುಗಡೆ ಮಾಡಲಾಗುತ್ತೆ ಎನ್ನಲಾಗಿತ್ತು. ಆದಾಗ್ಯು ಬೇಲ್ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಅವರು ರಿಲೀಸ್ ಆಗಿರಲಿಲ್ಲ. ಇವತ್ತು ಕಾನೂನು ಪ್ರಕ್ರಿಯೆಯಗಳನ್ನು ಮುಗಿಸಿದ ನಂತರ ಅವರನ್ನ ರಿಲೀಸ್ ಮಾಡಲಾಯ್ತು. ಇದಕ್ಕೂ ಮೊದಲು ಕೆಲಹೊತ್ತು ಸೆಂಟ್ರಲ್ ಜೈಲ್ನ ಮುಂಬಾಗಿಲ ಬಳಿಯಲ್ಲಿಯೇ ಲಕ್ಷ್ಮಣ್ ಕಾಯುತ್ತಿದ್ದರು.
ಇದೇ ಸಮಯದಲ್ಲಿ ಲಕ್ಷ್ಮಣ್ ಕಡೆಯವರು ಕಾರಿನಲ್ಲಿ ಜೈಲಿನ ಆವರಣಕ್ಕೆ ಬಂದರು. ಆ ಬಳಿಕ ಬೇಲ್ನ ಅಂತಿಮ ಹಂತದ ಕಾಗದ ಪತ್ರಗಳನ್ನ ಪರಿಶೀಲಿಸಿದ ಜೈಲಿನ ಅಧಿಕಾರಿಗಳು ಲಕ್ಷ್ಮಣ್ರವರ ರಿಲೀಸ್ಗೆ ಓಕೆ ಎಂದರು. ತಕ್ಷಣವೇ ಜೈಲಿನ ಮೇನ್ ಗೇಟ್ನಿಂದ ಹೊರಬಂದ ಲಕ್ಷ್ಮಣ್ ನೇರವಾಗಿ ಮಾಧ್ಯಮಗಳೊಂದಿಗೆ ಎದುರಾಗುವುದನ್ನ ತಪ್ಪಿಸಿಕೊಂಡು ಕಾರಿನ ಬಳಿ ಓಡಿದರು. ಕಾರನ್ನ ಹತ್ತಿ ಅಲ್ಲಿಂದ ತೆರಳಿದರು. ಈ ವೇಳೆ ಪ್ರತಿಕ್ರಿಯೆಗಾಗಿ ಮಾಧ್ಯಮಗಳು ಪ್ರಶ್ನೆ ಕೇಳಿದರೂ, ಲಕ್ಷ್ಮಣ್ ಯಾವುದಕ್ಕೂ ಉತ್ತರಿಸಲಿಲ್ಲ.

SUMMARY | Lakshman, an accused in the Renukaswamy murder case, was released from Shivamogge Central Jail today.
KEY WORDS | Lakshman, Renukaswamy murder case, released from Shivamogge Central Jail , darshan case , shivamogga jail, darshan pavitra gowda case ,