SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 28, 2025
ಶಿವಮೊಗ್ಗ | ಇಂದು ಆಶ್ರಯ ಬಡಾವಣೆಯ ನಿವೇಶನ ಹಂಚಿಕೆ ಮಾಡಬೇಕಿತ್ತು ಆದರೆ ಸಚಿವ ಮಧು ಬಂಗಾರಪ್ಪನವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದ್ದು, ನಿವೇಶನ ಹಂಚಿಕೆಯ ದಿನಾಂಕವನ್ನು ದಿನದಿಂದ ದಿನಕ್ಕೆ ಮುಂದೂಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರ ವಿರುದ್ದ ವಾಗ್ದಾಳಿ ನಡೆಸಿದರು.
ಇಂದು ನಗರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಆಶ್ರಯ ನಿವೇಶನವನ್ನು ನೀಡುತ್ತಿದ್ರು ಆದರೆ ಇದೀಗ ಸರ್ಕಾರದಿಂದ ಜನರಿಗೆ ಮನೆಯನ್ನು ನೀಡಲಾಗುತ್ತಿದೆ. ಆ ಮನೆಯನ್ನು ಇಂದು ಹಂಚಿಕೆ ಮಾಡಬೇಕಿತ್ತು ಆದರೆ ಅಧಿಕಾರದ ಪಿತ್ತವನ್ನ ನೆತ್ತಿಗೆ ಏರಿಸಿಕೊಂಡವರಂತೆ ಮಧುಬಂಗಾರಪ್ಪ ವರ್ತಿಸುತ್ತಿದ್ದಾರೆ. ಸಚಿವರ ಉದ್ದಟತನದಿಂದ ಜಮೀರ್ ಅಹ್ಮದ್ ನಗರರಕ್ಕೆ ಬರುವುದನ್ನು ಸಹ ತಡೆದಿದ್ದಾರೆ ಎಂದು ಆರೋಪಿಸಿದರು.

ಮಧು ಬಂಗಾರಪ್ಪನವರು ಆಶ್ರಯ ಸಮಿತಿ ಅಧ್ಯಕ್ಷನ ಜೊತೆ ಮಾತನಾಡುವ ಸೌಜನ್ಯವನ್ನೂ ನೀವು ಇಟ್ಟುಕೊಂಡಿಲ್ಲ. ಈ ಆಶ್ರಯ ಬಡಾವಣೆ ವಿಚಾರದಲ್ಲಿ ನಾವೆಲ್ಲ ಸೇರಿ ಒಟ್ಟಿಗೆ ಹೋಗೋಣ ಎಂದಿದ್ದರೆ ನಾವು ಒಪ್ಪಿಕೊಳ್ಳುತ್ತಿದ್ವಿ. ಆದರೆ ನೀವು ಅದರ ಬಗ್ಗೆ ಮಾತನಾಡುವುದೇ ಇಲ್ಲ. ನೀವು ಏನು ಬೇಕಾದರೂ ರಾಜಕೀಯ ಮಾಡಿ, ಆದರೆ ಮನೆ ನೀಡುವ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದರು
SUMMARY | He also attacked district in-charge minister Madhu Bangarappa, saying that he was supposed to allot a plot of land in Du Ashraya Layout but minister Madhu Bangarappa was in power and was postponing the date of allotment of plots day by day.
KEYWORDS | minister, Madhu Bangarappa, Ashraya Layout, channabasappa, shivamogga,