Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಕೆ ಎಸ್‌ ಈಶ್ವರಪ್ಪನವರ ವಿರುದ್ಧ FIR | ಏನಿದು ಶಿವಮೊಗ್ಗ ರಾಜಕಾರಣದ ಸುಮೋಟೋ ಕೇಸ್‌ ?! |

131
Last updated: November 15, 2024 11:02 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024

 

- Advertisement -

ಶಿವಮೊಗ್ಗ  | ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ  ಶಿವಮೊಗ್ಗದ ಜಯನಗರ ಠಾಣಾ ಪೊಲೀಸರು ಸುಮೊಟೊ ಕೇಸ್‌ ದಾಖಲಾಗಿದೆ. ಸುದ್ದಿಗೋಷ್ಟಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಅಡಿಯಲ್ಲಿ ಜಯನಗರ ಠಾಣೆ ಪೊಲೀಸ್‌ ಇನ್ಸ್ಪೆಕ್ಟರ್‌  ಹೆಚ್‌ ಎಂ ಸಿದ್ದೇ ಗೌಡರು ದಾಖಲಿಸಿಕೊಂಡ ದೂರಿನ ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಕೇಸ್‌ನಲ್ಲಿ ಏನಿದೆ?

ಕಳೆದ ಬುದವಾರ ನವಂಬರ್‌ 13 ರಂದು ಕೆಎಸ್‌ ಈಶ್ವರಪ್ಪ ಪತ್ರಿಕಾ ಗೋಷ್ಠಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ವಕ್ಪ್ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರ್‌ ರವರ ಬಗ್ಗೆ ಕಾಂಗ್ರೆಸ್‌ ಮುಖಂಡರ ಹೇಳಿಕೆ ಹಾಗೂ ಮುಸ್ಲಿಂ ಗುತ್ತಿಗೆ ಮೀಸಲಾತಿ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಚೋದನಕಾರಿ ಹೇಳಿಕೆ ಆಡಿದ್ದಾರೆ ಎಂಬುದು ಆರೋಪ. ಹಾಗಾಗಿ (1) (a) 299 BNS ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

car decor

 

FIR ನಲ್ಲಿ ಏನಿದೆ 

13/11/2004 ರಂದು ಬೆಳಿಗ್ಗೆ 11-00 ಗಂಟೆಯಿಂದ ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಶಿವಮೊಗ್ಗ ಪತ್ರಿಕಾಭವನದಲ್ಲಿ ಕೆ,ಎಸ್ ಈಶ್ವರಪ್ಪ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರ ಭಕ್ತ ಬಳಗದ ಸಂಚಾಲಕರು ಇವರು ಪತ್ರಿಕಾ ಗೋಷ್ಟಿ ನಡೆಸಿದ್ದರು. ಆ ವೇಳೆ ಪತ್ರಿಕಾಗೋಷ್ಟಿ ಸಮಯದಲ್ಲಿ ಅವರು ವಕ್ಸ್ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ ಮುಸಲ್ಮಾನರು ಮಾಡುವ ಅಚಾತುರ್ಯಗಳನ್ನೆಲ್ಲಾ ಗಮನಿಸಿದರೂ ಕೂಡ ಕಾಂಗ್ರೇಸ್ ಸರ್ಕಾರ ಸುಮ್ಮನಿದೆ. ರೈತ ಭೂಮಿ, ದೇವಸ್ಥಾನ ಮಠಗಳು ಇಷ್ಟೇಕೆ ಶಾಲಾ ಕಾಲೇಜುಗಳು ಪುರಾತತ್ವ ಇಲಾಖೆಯ ಪ್ರದೇಶಗಳನ್ನೂ ಕೂಡ ವಕ್ಸ್ ಆಸ್ತಿ ಎಂದು ಬದಲಾಯಿಸಲಾಗಿದೆ,

 

ವಿಶ್ವೇಶ್ವರಯ್ಯ ನವರು ಹುಟ್ಟಿದ ಗ್ರಾಮವನ್ನೂ ಇವರು ಬಿಟ್ಟಿಲ್ಲ ಮತ್ತೊಂದು ಕಡೆ ಇನ್ನೊಬ್ಬ ಮುಸ್ಲಿಂ ನಾಯಕ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡಿದ್ದಾರೆ. ಅಂಬೇಡ್ಕರ್ ಅವರು ಇಸ್ಲಾಂಧರ್ಮ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಹೀಗೆ ಅವಮಾನ ಮಾಡಿದ್ದರೂ ಕಾಗ್ರೇಸ್‌ನ ಒಬ್ಬ ನಾಯಕನೂ ಕೂಡ ಏಕೆಂದು ಪ್ರಶ್ನೆ ಮಾಡಲಿಲ್ಲ. 

 

ಇಸ್ಲಾಮೀಕರಣಕ್ಕೆ ಕಾಂಗ್ರೇಸ್ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ ಇದೀಗ ಮುಖ್ಯ ಮಂತ್ರಿ ಸಿದ್ದಾರಾಮಯ್ಯ ಅವರು ಕೂಡ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂರಿಗೆ ಶೇಕಡಾ 4 ರಷ್ಟು ಮಿಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಇವರೇನು ಹಿಂದೂಸ್ಥಾನವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರೆ. 

 

ಇದು ಹೀಗೇ ಮುಂದುವರೆದರೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಕಾಲ ದೂರವಿಲ್ಲ ಎಂದಿದ್ದರು. ಅಷ್ಟೇ ಅಲ್ಲದೆ ಕಾಂಗ್ರೇಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ.ಎಂದಿದ್ದರು.. ಶ್ರೀ.ಕೆ.ಎಸ್ ಈಶ್ವರಪ್ಪರವರು ಪತ್ರಿಕಾಗೋಷ್ಟಿ ಸಮಯದಲ್ಲಿ ಅನ್ಯ ಕೋಮಿನ ವಿರುದ್ಧ ದ್ವೇಷ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಸೌಹರ್ದತೆಯನ್ನು ಹೆಚ್ಚಿಸುವ ರೀತಿಯಲ್ಲಿ ಅನ್ನ ಕೋಮಿಗೆ ಹಾಗೂ ಅನ್ನ ಪಕ್ಷಕ್ಕೆ, ಉದ್ರೇಕ ಉಂಟಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿರುತ್ತಾರೆ. ಎಂದು ದೂರಿನಲ್ಲಿ ಊಲ್ಲೇಖಿಸಲಾಗಿದೆ.

 

ಈಶ್ವರಪ್ಪನವರ ಬಂಧನಕ್ಕೆ ಆಗ್ರಹʼ

ಇನ್ನೊಂದೆಡೆ ಈ ಸಂಬಂಧ  ಧರ್ಮ, ಧರ್ಮಗಳ ನಡುವೆ ಸಂಘರ್ಷಕ್ಕೆ ಈಶ್ವರಪ್ಪ ದಾರಿ ಮಾಡಿಕೊಡುತ್ತಿದ್ದಾರೆ. ಅವರನ್ನ ಬಂಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.  ಅಶೋಕ ವೃತ್ತದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪದೇಪದೇ ಅನ್ಯಧರ್ಮಿಯರನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿ ಹೇಳಿಕೆ ನೀಡುತ್ತಿರುವ  ಕೆಎಸ್‌ಇ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

 

ಕೇಸ್‌ ದಾಖಲು ರಾಜಕಾರಣ

ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಮುಖಂಡರುಗಳ ವಿರುದ್ಧ ಸಾಲು ಸಾಲು ಕೇಸ್‌ಗಳು ದಾಖಲಾಗುತ್ತಿದೆ. ಈ ಕೇಸ್‌ಗಳ ಹಿನ್ನೆಲೆ ಮುನ್ನೆಲೆ ಜನರ ಅರಿವಿಗೆ ಬರದೇ ಏನಿಲ್ಲ. ಆದಾಗ್ಯು ರಾಜಕಾರಣದ ಹೊಳಕು ಆಚೆ ಬರಲು ದಾಖಲುತ್ತಿರುವ ಪೂರ್ವಾಗೃಹ ದ್ವೇಷ ಪೀಡಿತ ಪ್ರಕರಣಗಳು ಸಾಕ್ಷ್ಯಗಳಾಗುತ್ತಿದೆ. ಇದೀಗ ಅದೇ ಕಾಯಿಲೆ ಶಿವಮೊಗ್ಗದಲ್ಲಿಯು ವ್ಯಕ್ತವಾದಂತಿದೆ. ಇತ್ತಿಚೆಗೆ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧದ ಪ್ರಕರಣವೊಂದನ್ನ ಹೈಕೋರ್ಟ್‌ ನಿರಾಕರಿಸಿತ್ತು. ಇದೀಗ ಮತ್ತೊಂದು ಪ್ರಕರಣ ಕೆಎಸ್‌ ಇ ವಿರುದ್ಧ  ದಾಖಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷ ಪ್ರತಿಭಟನೆಯನ್ನ ಸಹ ನಡೆಸಿದೆ. ಹೀಗಾಗಿ ಜಿಲ್ಲೆಯಲ್ಲಿಯು ಕೇಸು ರಾಜಕಾರಣ ಜೋರಾಯ್ತಾ ಎಂಬ ಕುತೂಹಲ ಮೂಡುತ್ತಿದೆ. 

 

SUMMARY|  Jayanagar police in Shivamogga have registered a suo motu case against former Deputy CM Eshwarappa.

 

KEY WORDS | suo motu case,   Jayanagar police Shivamogga, Deputy CM Eshwarappa, EYWORDS | Basanagouda Patil Yatnal, Aravind Limbavali, Ramesh Jarkiholi , meeting at former minister Kumar Bangarappa’s residence 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬೈರತಿ ರಣಗಲ್‌ನ ಮೈಲಿಗಲ್ಲಿನ ಕಥೆಗೆ ಭರ್ಜರಿ ರೆಸ್ಪಾನ್ಸ್‌
Next Article ಸೀಜನ್‌ ಆರಂಭದಲ್ಲಿ ಬೆಟ್ಟೆಗೆ ಬೆಲೆ | ಎಷ್ಟಿದೆ ಅಡಿಕೆ ರೇಟು | ಮಾರುಕಟ್ಟೆಯಲ್ಲಿನ ದರದ ವಿವರ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಡಿ 15 ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ 

By 131
SHIVAMOGGA NEWS TODAY

ಶಿವಮೊಗ್ಗದಲ್ಲಿಯು ಹೀಗೆ ನಡೆಯುತ್ತಾ? ಜಸ್ಟ್‌ 30 ಸೆಕೆಂಡ್‌ನಲ್ಲಿ ಕಾರಲ್ಲಿ ಏನಾಯ್ತು ಗೊತ್ತಾ?!

By 13
SHIVAMOGGA NEWS TODAY

ಹಬ್ಬದ ಪ್ರಯುಕ್ತ ಹುಲಿ ಸಿಂಹಧಾಮ ಮಂಗಳವಾರ ವೀಕ್ಷಣೆಗೆ ಲಭ್ಯ

By 131

Shivamogga toll gate | ಜನರಿಗೆ ಹೊರೆಯಾದ ಟೋಲ್‌ ಗೇಟ್‌ ಬಂದ್‌ ಆಗುತ್ತಾ? ಸಂಸದ ಬಿವೈ ರಾಘವೇಂದ್ರರ ಸಭೆಯಲ್ಲಿ ಏನಾಯ್ತು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up