Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಅವರಿಗೆ ಸಿಕ್ಕ ಖುಷಿ, ಇವರಿಗೆ ಕೊಡಿಸಿದ ಸಂತೋಷ | ಖಾಕಿ ಶಿಸ್ತಿನ ನಡುವೆ ಕಣ್ತುಂಬಿ ಬಂದ ಫೀಲಿಂಗ್‌ | ಹೀಗೂ ಆಗುತ್ತೆ

13
Last updated: December 17, 2024 4:19 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024 ‌‌ 

ಹಾಗೂ ಹೀಗೂ ಕಷ್ಟಪಟ್ಟು ದುಡಿದದ್ದರಲ್ಲಿ ಒಂದಿಷ್ಟು ಕೂಡಿಟ್ಟು, ಚಿನ್ನ ಬೆಳ್ಳಿ ಖರೀದಿಸಿ, ಅದನ್ನು ಭವಿಷ್ಯದ ಸಂಕಷ್ಟಕ್ಕಾಗಿ ಬೀರುವಿನಲ್ಲಿ ಕಾದಿಟ್ಟು ಬದುಕುವ ಮಧ್ಯಮವರ್ಗಕ್ಕೆ ತಮ್ಮ ಸ್ವತ್ತು ಕಳುವಾದರೆ ಜೀವ ಹೋದಷ್ಟೆ ನೋವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಕಳುವಾದ ವಸ್ತು ಸಿಗುತ್ತದೆ ಎಂಬ ನಂಬಿಕೆಯು ಅವರಲ್ಲಿ ಇರುವುದಿಲ್ಲ. ಅಂತಹ ನಂಬಿಕೆಯನ್ನ ಮತ್ತೆ ಮೂಡಿಸಿದಾಗ ಪೊಲೀಸ್‌ ಇಲಾಖೆಗೆ ಮಧ್ಯಮವರ್ಗದ ಮಂದಿ ಕೈ ಎತ್ತಿ ಮುಗಿಯುತ್ತಾರೆ. ನಿನ್ನೆ ಸಹ ಶಿವಮೊಗ್ಗ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ಮಧ್ಯಮವರ್ಗದ ಮಂದಿ ಕಣ್ತುಂಬಿಕೊಂಡು ಥ್ಯಾಂಕ್ಸ್‌ ಹೇಳಿದರು. ಅದರಲ್ಲಿಯು ವಿಶೇಷವಾಗಿ ಮಹಿಳೆಯರು ಕಳುವಾಗಿದ್ದ ತಮ್ಮ ವಸ್ತುಗಳನ್ನ ಪಡೆದು ಅಧಿಕಾರಿಗಳ ಕೆಲಸವನ್ನ ಎಸ್‌ಪಿ ಮಿಥುನ್‌ ಕುಮಾರ್‌ ಮುಂದೆ ಹಾಡಿ ಹೊಗಳಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಳೆದುಹೋದ ಮೊಬೈಲ್‌ ಇರಬಹುದು, ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನದ ಚೈನೇ ಇರಬಹುದು, ಬೈಕ್‌ನಲ್ಲಿ ಬಂದು ಕಿತ್ತುಕೊಂಡು ಹೋದ ತಾಳಿಸರವಿರಬಹುದು. ಅಥವಾ ಮನೆಯ ಬೀರುವಿನಲ್ಲಿಟ್ಟಿದ  ಬೆಳ್ಳಿ ಬಂಗಾರವೇ ಇರಬಹುದು. ಮಹಿಳೆಯರಿಗೆ ತಮ್ಮ ವಸ್ತುಗಳ ಬಗ್ಗೆ ಒಂದು ರೀತಿಯ ಭಾವನಾತ್ಮಕ ಭಾಂದವ್ಯ ಇರುತ್ತದೆ. ಅದೇ ರೀತಿಯಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳಲ್ಲಿಯು ಕಳುವಾದ ವಸ್ತುಗಳನ್ನು, ಮತ್ತೆ ವಾಪಸ್‌ ಕೊಡಿಸುವಾಗ ಒಂದು ರೀತಿಯ ವಿಶೇಷ ಭಾವವಿರುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಪವಿತ್ರ ಎನಿಸುವ ತಾಳಿಸರ ಕಳುವಾದಾಗ ಅದನ್ನು ವಾಪಸ್‌ ಕೊಡಿಸುವ ಸಂದರ್ಭದಲ್ಲಿ ಆ ಹೆಣ್ಣುಮಕ್ಕಳ ಕಣ್ಣಲ್ಲಿ ಒಂದು ರೀತಿಯ ವಿಶಿಷ್ಟ ಸಂತೃಪ್ತ ಭಾವ ಕಾಣುತ್ತದೆ. ಅದನ್ನು ನೋಡುತ್ತಾ, ಡಿಪಾರ್ಟ್‌ಮೆಂಟ್‌ಗೆ ಸೇರಿದ್ದು ಸಾರ್ಥಕವಾಯ್ತು ಎಂಬಂತಹ ಭಾವ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳಲ್ಲಿ ಮೂಡುತ್ತದಯಷ್ಟೆ ಅಲ್ಲದೆ ಇನ್ನಷ್ಟು ಕೆಲಸ ಮಾಡುವಂತೆ ಪ್ರೇರಪಿಸುತ್ತದೆ. ಅನ್ಯ ವಿಚಾರಗಳೇನೆ ಇದ್ದರು, ಸಾಮಾನ್ಯರ ವಸ್ತುಗಳು ವಾಪಸ್‌ ಕೊಡಿಸುವ ಸಂತೋಷದಲ್ಲಿ ನಿನ್ನೆ ದಿನ ಶಿವಮೊಗ್ಗದ ಪೊಲೀಸ್‌ ಇಲಾಖೆ ಭಾಗಿಯಾಗಿತ್ತು. 

ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೆಲಸಕ್ಕೆ ವಿಶೇಷವಾಗಿ ಮಹಿಳೆಯರು ಥ್ಯಾಂಕ್ಸ್‌ ಹೇಳಿದರು. ಭದ್ರಾವತಿಯಲ್ಲಿ ನಡೆದಿದ್ದ  ಚಿನ್ನ ಕಳ್ಳತನ ಪ್ರಕರಣವನ್ನ ಎರಡು ದಿನದಲ್ಲಿಯೇ ಭೇದಿಸಿದ ಪೊಲೀಸರಿಗೆ, ಸ್ವತ್ತಿನ ವಾರಸುದಾರ ಮಹಿಳೆಯು ಧನ್ಯವಾದ ತಿಳಿಸಿದ್ದಷ್ಟೆ ಅಲ್ಲದೆ, ಎಸ್‌ಪಿಯವರ ಮುಂದೆ ಪೊಲೀಸ್‌ ಸಿಬ್ಬಂದಿಯ ಗುಣಗಾನ ಮಾಡಿದರು

ಹೀಗೆ ಹಲವರು ತಮ್ಮ ಸ್ವತ್ತು ವಾಪಸ್‌ ಪಡೆದುಕೊಂಡು ಪೊಲೀಸ್‌ ಇಲಾಖೆಗೆ ಧನ್ಯವಾದ ಹೇಳಿದರು. ಕಳುವಾಗಿದ್ದು ಮತ್ತೆ ಸಿಕ್ಕ ಸಂತೋಷದಲ್ಲಿದ್ದ ಜನರ ನಡುವೆ ಪೊಲೀಸ್‌ ಇಲಾಖೆ ವರ್ಷದ ಲೆಕ್ಕ ಕೊಟ್ಟು, ಮಾಡಿದ ಸಾಧನೆಯ ಪಟ್ಟಿಯನ್ನ ಮುಂದಿಟ್ಟಿತ್ತು. 

 

SUMMARY | Women in Shimoga thank police for recovering stolen items

KEY WORDS | Women in Shimoga thank police , stolen items, shivamogga police  , shivamogga malenadutoday today ,Property Return Parade , bhadravati police  , sp mithun kumar 

Share This Article
Facebook Whatsapp Whatsapp Telegram Threads Copy Link
Previous Article ನಿಮ್ಮನ್ನ ಅರೆಸ್ಟ್‌ ಮಾಡಲಾಗಿದೆ ಅಂತಾ ಕಾಲ್‌ ಬಂದರೆ 112 ಗೆ ಕರೆ ಮಾಡಿ | ಶಿವಮೊಗ್ಗ ಜಿಲ್ಲಾ ಪೊಲೀಸ್‌
Next Article ಡಿ.18 ರಿಂದ ಒಂದು ಮುಷ್ಠಿ ಅಕ್ಕಿ ಸಂಗ್ರಹ ಕಾರ್ಯಕ್ರಮ
Leave a Comment

Leave a Reply Cancel reply

Your email address will not be published. Required fields are marked *

You Might Also Like

STATE NEWS

DINA BHAVISHYA | ಈ ದಿನ ಭವಿಷ್ಯ | ಹೆಚ್ಚು ವಿಶೇಷ | ಹೇಗಿದೆ ನೋಡಿ ರಾಶಿಫಲ

By 13

ಈ ವಾರದ ಭವಿಷ್ಯ | ನಾಲ್ಕು ಪ್ರಮುಖ ರಾಶಿಗಳಿಗೆ ವಿಶೇಷ ಸುದ್ದಿ

By 13

DINA BHAVISHYA OCTOBER 28 | ದಿನ ಭವಿಷ್ಯ | ಈ ರಾಶಿಗಳಿಗೆ ಇವತ್ತು ಹೊಸ ಸುದ್ದಿ |

By 13

ಗೃಹಲಕ್ಷ್ಮೀ ಯೋಜನೆಯಿಂದ ಬಂದ  ಹಣದಿಂದ ಹೈನುಗಾರಿಕೆ ಪ್ರಾರಂಭಿಸಿದ ಮಹಿಳೆ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up