Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಮಾಧ್ಯಮಗಳು ಧರ್ಮಗುರುಗಳ ಆಯುಧವಾಗಿ ಪರಿಣಮಿಸಿವೆ: ದಿನೇಶ್ ಅಮೀನ್‌ಮಟ್ಟು ಕಳವಳ

prathapa thirthahalli
Last updated: July 28, 2025 3:00 pm
Prathapa thirthahalli - content producer
Share
SHARE

Press Freedom : ಮಾಧ್ಯಮಗಳು ಧರ್ಮಗುರುಗಳ ಆಯುಧವಾಗಿ ಪರಿಣಮಿಸಿವೆ: ದಿನೇಶ್ ಅಮೀನ್‌ಮಟ್ಟು ಕಳವಳ

Press Freedom :  ಶಿವಮೊಗ್ಗ : ಪತ್ರಕರ್ತರು ಹಬ್ಬ ಹರಿದಿನಗಳಲ್ಲಿ ಹೆಚ್ಚು ಕಾರ್ಯನಿರತರಾಗಿದ್ದರೂ ಸಮಾಜ ಇದನ್ನು ಕಡಿಮೆ ಅರ್ಥಮಾಡಿಕೊಳ್ಳುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು. ಮಾಧ್ಯಮ ಕ್ಷೇತ್ರದ ದೊಡ್ಡ ಶತ್ರುಗಳು ರಾಜಕಾರಣಿಗಳಲ್ಲ, ಬದಲಾಗಿ ಧರ್ಮಗುರುಗಳು. ಇಂದು ಮಾಧ್ಯಮವು ಧರ್ಮಗುರುಗಳ ಆಯುಧವಾಗಿ ಪರಿಣಮಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಧ್ಯಮವು ನಿಜವಾದ ಉದ್ಯಮವಾಗಬೇಕು, ಆದರೆ ಅದು ಕೆಲವರಿಗೆ ಮಾತ್ರ ಉದ್ಯಮವಾಗಿದೆ. ಪತ್ರಿಕೆಗಳು ಒಮ್ಮೆ ವಿಶ್ವಾಸ ಕಳೆದುಕೊಂಡರೆ, ಜನರು ಕಾಲಕ್ರಮೇಣ ಅವುಗಳನ್ನು ನಂಬುವುದಿಲ್ಲ ಎಂದು ಅಮೀನ್‌ಮಟ್ಟು ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Press Freedom :  ಓದುಗರ ಹಣದಿಂದ ಪತ್ರಿಕೆ ನಡೆಸುವುದು ಸಾಧ್ಯವಿಲ್ಲ. ಮಾಧ್ಯಮದ ಮಾದರಿಯಲ್ಲೇ ತಪ್ಪು ಇದೆ. ಮೊದಲೆಲ್ಲ ಓದುಗರಿಗೆ ಧ್ವನಿ ಇರಲಿಲ್ಲ, ಆದರೆ ಈಗ ಓದುಗನಿಗೆ ಧ್ವನಿ ಇದೆ. ಎಷ್ಟೋ ವೈರಲ್ ಪೋಸ್ಟ್‌ಗಳಿಂದ ಒಳ್ಳೆಯದೂ ಸಹ ಆಗಿದೆ. ಜಗತ್ತಿನ ಜ್ಞಾನ ಬೆರಳ ತುದಿಯಲ್ಲಿದ್ದರೂ, ಬೆಳಗ್ಗೆ ಪತ್ರಿಕೆ ಓದಿದರೆ ಸಮಾಧಾನ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ದೇಶದ ಸ್ವಾತಂತ್ರ್ಯ, ಸಂವಿಧಾನ, ಇತಿಹಾಸಗಳ ಕುರಿತು ಸಮಾಜವನ್ನು ಎಚ್ಚರಿಸುವ, ತಿಳಿಸುವ ಕೆಲಸವನ್ನು ಪತ್ರಕರ್ತರು ದಿಟ್ಟವಾಗಿ ಮಾಡುತ್ತಿದ್ದಾರೆ. ಲೇಖನಿಯ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

Press Freedom :  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ಆಗಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ‘ಅಪತ್ವಾಂಧವ’ ಮೂಲಕ ಪ್ರತಿ ತಿಂಗಳು ೫೦ ಸಾವಿರ ರೂ. ಸಂಗ್ರಹವಾಗುತ್ತಿದೆ. ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಒಂದು ಕೋಟಿ ರೂ. ಕ್ರೋಡೀಕರಣಗೊಂಡಿದ್ದು, ಇದನ್ನು ಪತ್ರಕರ್ತರ ಅನಾರೋಗ್ಯದ ಸಂದರ್ಭದಲ್ಲಿ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಶ್ರೀನಿವಾಸಮೂರ್ತಿ, ಜಿ.ಟಿ. ಸತೀಶ್, ರವಿ ಬಿದನೂರು, ಉಮೇಶ್, ಚಂದ್ರಶೇಖರ್ ಶೃಂಗೇರಿ, ಎಚ್.ಯು. ವೈದ್ಯನಾಥ್, ದೇಶಾದ್ರಿ ಹೊಸಮನೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಶಿವಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಪ್ರಮುಖರಾದ ಭಂಡಿಗಡಿ ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.

TAGGED:Press Freedom
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Shivamogga Press Meet ಕೆ ಎಸ್​ ಈಶ್ವರಪ್ಪ Shivamogga Press Meet ರಾಜ್ಯ ಸರ್ಕಾರ ಪರಿಶಿಷ್ಟ ವರ್ಗಗಳಿಗೆ ದ್ರೋಹ ಮಾಡಿದೆ :  ಕೆ.ಎಸ್​. ಈಶ್ವರಪ್ಪ 
Next Article NR Pura Taluk ಪ್ರತಿಭಟನೆ ನಡೆಸುತ್ತಿರುವ ಸಾರ್ವಜನಿಕರು ಆನೆ ದಾಳಿ ಸಾವು, ಪ್ರತಿಭಟನೆಗೆ ಮಣಿದ ಸರ್ಕಾರ, ಆನೆ ಸೆರೆ ಕಾರ್ಯಾಚರಣೆ ಆರಂಭ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ಬರಲಿದ್ದಾರೆ ಅರಣ್ಯ ಸಚಿವರು |ಏನೇಲ್ಲಾ ಕಾರ್ಯಕ್ರಮ ಇದೆ?

By 13

ಚಿತ್ರದುರ್ಗ, ಶಿವಮೊಗ್ಗದ ಮೂವರಿಗೆ ಕುವೆಂಪು ವಿವಿಯಿಂದ PHD ಪದವಿ

By 13
Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train
SHIVAMOGGA NEWS TODAY

railway news ಜೂನ್​ 26, 2025 :  ಹಬ್ಬನಘಟ್ಟ-ಅರಸೀಕೆರೆ ಕಾಮಗಾರಿ | ಈ ದಿನ ಶಿವಮೊಗ್ಗದ ಕೆಲವು ರೈಲುಗಳ ಸಂಚಾರ ಸ್ಥಗಿತ

By Prathapa thirthahalli
shivamogga news
SHIVAMOGGA NEWS TODAY

ಸಾರಿಗೆ ನೌಕರರಿಂದ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರ: ಸರ್ಕಾರಕ್ಕೆ ಗಡುವು

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up