former death : ಬೆಳೆ ನಷ್ಟದಿಂದಾಗಿ ರೈತ ಆತ್ಮಹತ್ಯೆ
ಸಾಲ ಭಾದೆಯಿಂದಾಗಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನವಟ್ಟಿ ಸಮೀಪದ ಹಿರೇಮಾಗಡಿ ಗ್ರಾಮದಲ್ಲಿ ಬಾನವಾರ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.. ವೀರ ಭದ್ರಯ್ಯ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ರೈತ.
ರೈತ ತಮ್ಮ 5 ಎಕರೆ ಹೊಲದಲ್ಲಿ ಸಾಲ ಮಾಡಿಕೊಂಡು ಮೆಕ್ಕೆ ಜೋಳ ಬೆಳೆದಿದ್ದರು. ಆ ಬೆಳೆಗಳನ್ನು ಕಟಾವು ಮಾಡಿ ಹಿರೇಮಾಗಡಿ ಕ್ರಾಸ್ ಹೆದ್ದಾರಿ ರಸ್ತೆಯಲ್ಲಿ ಒಣಗಿಸಲು ಹಾಕಿದ್ದರು. ಆದರೆ ಕಳೆದೊಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದರ ಪರಿಣಾಮ ಜೋಳವು ಒಣಗದೆ ಮೊಳಕೆ ಒಡೆದಿತ್ತು. ಮೊದಲೇ ಸಾಲ ಮಾಡಿ ಬೆಳೆ ಬೆಳೆದಿದ್ದ ರೈತ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಪ್ರಕರಣ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
