Bhadra River Wall Rs 50 Crore ಭದ್ರಾ ನದಿ ಪ್ರವಾಹ ನಿಯಂತ್ರಣಕ್ಕೆ ₹50 ಕೋಟಿ ಅನುದಾನ: ಭದ್ರಾವತಿಗೆ ಸಿಎಂ ಬಂಪರ್ ಗಿಫ್ಟ್!
Bhadra River Wall Rs 50 Crore ಭದ್ರಾವತಿ (Bhadravati), ಜುಲೈ 18, 2025 : ನಗರದ ಹೃದಯ ಭಾಗದಲ್ಲಿ ಹರಿಯುವ ಭದ್ರಾ ನದಿ ತುಂಬಿದ ಸಂದರ್ಭದಲ್ಲಿ ಪ್ರತಿವರ್ಷ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ.
ಈ ಹಿನ್ನೆಲೆಯಲ್ಲಿ (Bhadra River) ಭದ್ರಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೊಂದಿಕೊಂಡಂತೆ ನದಿಗೆ ತಡೆಗೋಡೆ ನಿರ್ಮಿಸಲು ₹50 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಸಂಬಂಧ ಶಾಸಕರ ಕಚೇರಿಯ ಪ್ರಕಟಣೆಯ ಪ್ರಕಾರ, ಜಲಸಂಪನ್ಮೂಲ ಇಲಾಖೆಯ (Water Resources Department) ವಿಶೇಷ ಕರ್ತವ್ಯಾಧಿಕಾರಿ ಕೆ. ಶುಭಾ ಅವರು ಸೋಮವಾರ (ಜುಲೈ 14) ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆನೀಡಿ ಆದೇಶ ಹೊರಡಿಸಿದ್ದಾರೆ.



Bhadra River Wall Rs 50 Crore
ಕಳೆದ ಜುಲೈ 2 ರಂದು ಈ ಸಂಬಂಧ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ನಿರ್ಣಯ ಕೈಗೊಳ್ಳಲಾಗಿತ್ತು. ಭದ್ರಾವತಿ ನಗರದಲ್ಲಿ ಸೃಷ್ಟಿಯಾಗುವ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ
ಒಟ್ಟಾರೆ ಭದ್ರಾವತಿ ಸಿಟಿಯಲ್ಲಿ ಭದ್ರಾ ನದಿ 3 ಕಿ.ಮೀ.ಗಳಷ್ಟು ದೂರ ಹರಿಯುತ್ತದೆ. ಸಾಮಾನ್ಯವಾಗಿ ಭದ್ರಾ ಡ್ಯಾಂ ತುಂಬುವರೆಗೂ ಹೆಚ್ಚಿನ ಸಮಸ್ಯೆಯಾಗದು. ಆದರೆ ಭದ್ರಾ ಡ್ಯಾಂ ತುಂಬಿ , ನೀರನ್ನು ಹೊರಕ್ಕೆ ಬಿಡುವಾಗ, ಇಲ್ಲಿನ ಅಂಬೇಡ್ಕರ್ ಕಾಲೊನಿ , ಗೌಳಿಗರ ಬೀದಿ,
ಗುಂಡೂರಾವ್ ಶೆಡ್ ಮತ್ತು ಯಕಿನ್ಸಾ ಕಾಲೊನಿಗಳಲ್ಲಿ ನೀರು ನುಗ್ಗುತ್ತದೆ. ಸದ್ಯ ಇದೇ ಭಾಗದಲ್ಲಿ ತಡೆಗೋಡೆ ನಿರ್ಮಿಸಲು ಅನುಧಾನ ಬಿಡುಗಡೆಯಾಗಲಿದೆ. ಒಟ್ಟಾರೆ. ಅಂದಾಜು 1.115 km ಉದ್ದದ ತಡೆಗೋಡೆ ನಿರ್ಮಾಣ ಆಗಲಿದೆ.
Bhadra River Wall Rs 50 Crore Sanctioned for Bhadra River Flood Protection Wall in Bhadravati
ಭದ್ರಾವತಿ, ಭದ್ರಾ ನದಿ, ಪ್ರವಾಹ, ತಡೆಗೋಡೆ, ಅನುದಾನ, 50 ಕೋಟಿ, ಜಲಸಂಪನ್ಮೂಲ ಇಲಾಖೆ, ಕೆ. ಶುಭಾ, ಮುಖ್ಯಮಂತ್ರಿ, ಸಚಿವ ಸಂಪುಟ, ಅಂಬೇಡ್ಕರ್ ಕಾಲೊನಿ, ಗೌಳಿಗರ ಬೀದಿ, ಚಾಮೇಗೌಡ ಏರಿಯಾ, ಗುಂಡೂರಾವ್ ಶೆಡ್, ಯಕಿನ್ಸಾ ಕಾಲೊನಿ, ಶಿವಮೊಗ್ಗ, Bhadravati, Bhadra River, Flood Protection, Retaining Wall, Grant, 50 Crore, Water Resources Department,
K. Shubha, Chief Minister, Cabinet Approval, Ambedkar Colony, Gauligara Beedi, Chamegowda Area, Gundoorao Shed, Yakinsa Colony, Shivamogga, Karnataka Floods, #Bhadravati #BhadraRiver #FloodProtection #Karnataka #GovernmentScheme #WaterResources #Development #Shivamogga #FloodRelief #Infrastructure
View this post on Instagram