ಹಳೇ ಹುಬ್ಬಳ್ಳಿ ಪೊಲೀಸರಿಗೆ ಬೇಕಿದ್ದ ವಾಹನ ಕಳ್ಳನನ್ನ ಹಿಡಿದ ಶಿರಾಳಕೊಪ್ಪ ಪೊಲೀಸರು !

This Article Written by / Malenadu Today / ಮಾರ್ಚ್ 6, 2023

MALENADUTODAY.COM  |SHIVAMOGGA| #KANNADANEWSWEB

ದಿನಾಂಕಃ 12-02-2023  ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಜಾವಗಟ್ಟೆ ಗ್ರಾಮದ ವಾಸಿ ಶ್ರೀಕಾಂತ್ ರವರಿಗೆ ಸೇರಿದ್ದ ಅಶೋಕ ಲೈಲ್ಯಾಂಡ್ ವಾಹನ ಕಳ್ಳತನವಾಗಿತ್ತು. ಈ ಸಂಬಂಧ  379  ಐಪಿಸಿ ಅಡಿಯಲ್ಲಿ ಕೇಸ್ ಆಗಿತ್ತು. ಪ್ರಕರಣದ ತನಿಖೆ ಕೈಗೊಂಡ ಶಿರಾಳಕೊಪ್ಪ ಪೊಲೀಸರು ಪ್ರಕರಣವನ್ನು ಭೇದಿಸಿದ್ಧಾರೆ. ಅಲ್ಲದೆ ಸೊರಬ ಟೌನ್​ನಿವಾಸಿ ಆರೋಪಿ ಶಾಹಿದ್ ನನ್ನ ಅರೆಸ್ಟ್ ಮಾಡಿದ್ದಾರೆ.

READ | ಶಿವಮೊಗ್ಗ ಜಿಲ್ಲೆಯಲ್ಲಿ ಲಂಚ ಕೇಳ್ತಿದ್ದಾರಾ? ಲೋಕಾಯುಕ್ತಕ್ಕೆ ದೂರು ಕೊಡಬೇಕಾ!? ನಿಮ್ಮೂರಿಗೆ ಬರ್ತಿದ್ದಾರೆ ಅಧಿಕಾರಿಗಳು! ಯಾವಾಗ? ಎಲ್ಲೆಲ್ಲಿ? ವಿವರ ಓದಿ

ವಿಶೇಷ ಅಂದರೆ, ಈ ಶಾಹಿದ್​ ವಿರುದ್ಧ ಇನ್ನಷ್ಟು ಕೇಸ್​ಗಳಿರೋದು ಗೊತ್ತಾಗಿದ್ದು, ಈತನ ವಿರುದ್ಧ  ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ 02  ಪ್ರಕರಣಗಳು ಮತ್ತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ 02 ಪ್ರಕರಣಗಳು ಸೇರಿ ಒಟ್ಟು 04  ವಾಹನ ಕಳ್ಳತನ ಪ್ರಕರಣಗಳಿವೆ. ಈತನನ್ನ ಬಂಧಿಸಿರುವ ಪೊಲೀಸರು  01 ಅಶೋಕ ಲೈ ಲ್ಯಾಂಡ್ ವಾಹನ ಮತ್ತು   03  ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 

READ | ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಮುಂದಿನ ಸುದ್ದಿ ಒದಿ

Leave a Comment