ಮಾಜಿ ಸಿಎಂ ದಿ. ಬಂಗಾರಪ್ಪನವರು ಪ್ರೀತಿಯಿಂದ ಲೂಟಿ ಹೊಡೆದಿದ್ದು ಏನು ಗೊತ್ತಾ!? ಮಧು ಬಂಗಾರಪ್ಪರವರು ಹೇಳಿದ ಮಾತು ಏನು ಓದಿ!

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM  |SHIVAMOGGA| #KANNADANEWSWEB

ಶಿಕಾರಿಪುರದಲ್ಲಿ ಮಾತನಾಡ್ತಾ ಮಾಜಿ ಶಾಸಕ ಮಧುಬಂಗಾರಪ್ಪ ತಮ್ಮ ತಂದೆ  ಪ್ರೀತಿಯಿಂದ ಜನರ ಹೃದಯವನ್ನು ಲೂಟಿ ಹೊಡೆದಿದ್ದರು ಎಂದಿದ್ದಾರೆ. ಜನಗಳ ಹೃದಯವನ್ನು ಲೂಟಿ ಹೊಡೆದು, ಅವರ ಸ್ನೇಹ , ಪ್ರೀತಿಯನ್ನು  ಪಡೆದಿದ್ದರು, ಅವರು ನಿಮ್ಮೆಲ್ಲರ ಹೃದಯದಲ್ಲಿದ್ದಾರೆ ಅದನ್ನು ಯಾರಿಂದಲೂ ಕಿತ್ತು ಹಾಕಲು ಸಾಧ್ಯವಿಲ್ಲ, ಅವರು ಸಿ.ಎಂ ಆದಾಗ ಕೊಟ್ಟ ಉಚಿತ ಪಂಪ್ಸೆಟ್ ಸೇರಿದಂತೆ ನೂರಾರು ಜನಪ್ರಿಯ ಕಾರ್ಯಕ್ರಮಗಳು ಇಂದಿನ ಸರ್ಕಾರದಲ್ಲಿ ಹೊಸ ಹೆಸರಿನೊಂದಿಗೆ ನಿಮಗೆ ತಲುಪುತ್ತಿದೆ ಎಂದರು.

READ | ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

ಅಭಿಮಾನಿಗಳು ಹಮ್ಮಿಕೊಂಡಿದ್ದ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ  ಮಾತಾಡಿದ ಮಧುಬಂಗಾರಪ್ಪ,  ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮೇಲಿನ ಲೋಕಾಯುಕ್ತ ರೇಡ್​ ಪ್ರಕರಣ ಬಿಜೆಪಿಗೆ ಕಪ್ಪು ಚುಕ್ಕೆ. ಮಗನೇ ಅಷ್ಟೊಂದು ಭ್ರಷ್ಟಾಚಾರ ಮಾಡಿರುವಾಗ ತಂದೆ ಎಷ್ಟು ಭ್ರಷ್ಟಾಚಾರ ಮಾಡಿರಬಹುದು ಎಂದು ತನಿಕೆಯಾಗಲಿ ಎಂದರು.   ಮೋದಿ ಶಿವಮೊಗ್ಗಕ್ಕೆ ಬಂದು ಕುವೆಂಪುರವರು ಬರೆದ ಸಾಲಗಳನ್ನು ಅಸ್ಪಷ್ಟವಾಗಿ ಉಚ್ಚರಿಸಿ ಕುವೆಂಪುರವರಿಗೆ ದೊಡ್ಡ ಅವಮಾನ ಮಾಡಿದ್ದಾರೆ, ಮೊದಲು ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟ ರೈತರಿಗೆ ಪರಿಹಾರ ಕೊಡಿ   ಅದೇ ರೀತಿ ಉದ್ಘಾಟನೆಯಾದ ಶಿಕಾರಿಪುರದ ಏತ ನೀರಾವರಿಯಿಂದ ಇನ್ನೂ ಶೇಕಡ 90/ ರಷ್ಟು ಕೆರೆಗಳನ್ನು ಯಾಕೆ ತುಂಬಿಸಿಲ್ಲ ಎಂದು ಪ್ರಶ್ನಿಸಿದರು.

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor