ಜಿಂಕೆ ಶಿಕಾರಿ! ಮೂವರು ಎಸ್ಕೇಪ್ ! ಮಂಡಗದ್ದೆ ರೇಂಜ್​ನಲ್ಲಿ ತಮಿಳುನಾಡು ಮೂಲದವನ ಬಂಧನ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA|  Dec 18, 2023  | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಅರಣ್ಯ ವಲಯದ ಅಧಿಕಾರಿಗಳು ಜಿಂಕೆಯನ್ನು ಶಿಕಾರಿ ಮಾಡಿದ್ದ ಆರೋಪದ ಮೇರೆ ಓರ್ವನನ್ನ ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. 

ಮಂಡಗದ್ದೆ ವಲಯದ ಗ್ರಾಮವೊಂದರಲ್ಲಿ ಜಿಂಕೆ ಶಿಕಾರಿಯಾಗಿದೆ ಎಂಬ ಮಾಹಿತಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಪರಿಚಿತ ವ್ಯಕ್ತಿಗಳು ಹಾಕಿಕೊಟ್ಟಿದ್ದಾರೆ. ಮಾಹಿತಿ ಮೂಲ ಆಧರಿಸಿ ಹೊರಟ ಅರಣ್ಯ ಅಧಿಕಾರಿಗಳು, ನಿಗದಿತ ಸ್ಥಳದಲ್ಲಿ ದಾಳಿ ನಡೆಸಿದ್ದಾರೆ. 

READ  : ಶಿವಮೊಗ್ಗಕ್ಕೆ ನಿತಿನ್ ಗಡ್ಕರಿ! ಸಿಗಂದೂರು ಸೇತುವೆ, ನೆಲ್ಲಿಸರ ಕ್ಯಾಂಪ್‌-ತೀರ್ಥಹಳ್ಳಿ, ತ್ಯಾವರೆಕೊಪ್ಪ- ತಾಳಗುಪ್ಪ ಚತುಷ್ಪಥ ರಸ್ತೆ ಬಗ್ಗೆ ಸಂಸದರ ಮಹತ್ವದ ಹೇಳಿಕೆ

ಈ ವೇಳೆ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಓರ್ವ ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈತ ತಮಿಳುನಾಡು ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಸಂಬಂಧ  ಮಂಡಗದ್ದೆ ವಲಯಾರಣ್ಯ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. 

ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆ ನಡೆಸಿದೆ. ಡಿಆರ್ ಎಫ್ಓ ಸುಹಾಸ್, ಗಸ್ತು ಅರಣ್ಯ ಪಾಲಕರಾದ ದುರುಗಪ್ಪ, ಮಹಾದೇವ ಕಣ್ಣೂರ, ವಾಹನ ಚಾಲಕ ನವೀನ್ ಮುಂತಾದವರು ಇದ್ದರು.

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor