SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024 ರಾಜ್ಯ ಸರ್ಕಾರಿ ನೌಕರರ ಪಿಂಚಣಿ ವಿಚಾರದಲ್ಲಿ ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ಅಲ್ಲದೆ ಕೇಂದ್ರ ಸರ್ಕಾರ NPS ಬದಲಿಗೆ UPS ಜಾರಿಗೆ ತರುತ್ತಿದೆ. ಇದರ ನಡುವೆ , ಈ ಎರಡು ಪಿಂಚಣಿ ವ್ಯವಸ್ಥೆ ಬೇಡ, ಹಳೆಯ ಪಿಂಚಣಿ ವ್ಯವಸ್ಥೆ ಏನಿದೆ OPS ಇದನ್ನು ಜಾರಿಗೆ ತನ್ನಿ ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರಾಜ್ಯ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಕಳೆದ 10 ವರ್ಷಗಳಿಂದ ಹಳೆ ಪಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ವಿಷಯದಲ್ಲಿ ಹೋರಾಟ ನಡೆಸ್ತಿದೆ. ಈ ವಿಷಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ರಾಷ್ಟ್ರಮಟ್ಟದಲ್ಲಿ NATIONAL MOVEMENT FOR OLD PENSION SCHEME(R) NEWDELHI, (NMOPS) ಸಹಯೋಗವನ್ನು ಹೊಂದಿದೆ.
ಈ ನಡುವೆ ಸಂಘಟನೆಗಳ ಹೋರಾಟಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ NPS ಯೋಜನೆಯನ್ನು ಬದಲಾಯಿಸಿ, ಏಕೀಕೃತ ಪಂಚಣಿ ಯೋಜನೆಯನ್ನು (UPS) ಜಾರಿಗೆ ತರಲು ತೀರ್ಮಾನಿಸಿದೆ. ಈ ಯೋಜನೆ ಸಹ ಷೇರು ಮಾರುಕಟ್ಟೆ ಆಧಾರಿತವಾಗಿದ್ದು , ಸರ್ಕಾರಿ ನೌಕರರ ಸಂಧ್ಯಾ ಕಾಲದ ಬದುಕಿಗೆ ಯಾವುದೇ ಭದ್ರತೆಯನ್ನು ಒದಗಿಸುವ ಅಂಶಗಳನ್ನು ಹೊಂದಿರುವುದಿಲ್ಲ ಎಂದು ನೌಕರರ ಸಂಘಟನೆ ಆರೋಪಿಸಿದೆ.
ಈ ವಿಚಾರವಾಗಿ No_NPS No_UPS Only OPS ಎಂಬ ಶೀರ್ಷಿಕೆಯಡಿ Old Pension Scheme OPS ನ್ನು ಜಾರಿಗೊಳಿಸುವಂತೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಎನ್ಪಿಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ರಜನಿಕಾಂತ್, ಸಹ ಕಾರ್ಯದರ್ಶಿ ಚಂದ್ಯನಾಯ್ಕ್, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ, ಕಾರ್ಯದರ್ಶಿ ಶಿವಶಂಕರ್, ಡಾ. ನಾಗರಾಜ ಪರಿಸರ, ಹಾಲೇಶಪ್ಪ ಇನ್ನಿತರರಿದ್ದರು.
