ಬೀದಿ ದೀಪ ಅಳವಡಿಸುವಾಗ ಕರೆಂಟ್​ ಶಾಕ್! ಓರ್ವ ಸಾವು, ಇನ್ನೊಬ್ಬರಿಗೆ ತೀವ್ರ ಪೆಟ್ಟು!

This Article Written by / Malenadu Today / ಸೆಪ್ಟೆಂಬರ್ 13, 2023

ಬೀದಿ ದೀಪ ಅಳವಡಿಸುವಾಗ ಕರೆಂಟ್​ ಶಾಕ್! ಓರ್ವ ಸಾವು, ಇನ್ನೊಬ್ಬರಿಗೆ ತೀವ್ರ ಪೆಟ್ಟು!

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು, ಹುಂಚ ಗ್ರಾಮಪಂಚಾಯ್ತಿಯಲ್ಲಿ ಬರುವ ಆನೆಗದ್ದೆಯಲ್ಲಿ ವಿದ್ಯುತ್ ತಂತಿ ತಗುಲಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ನಡೆದಿದ್ದೇನು?

ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮೃತರನ್ನು ನಾರಾಯಣ ಎಸ್​ಸಿ  ಎಂದು ಗುರುತಿಸಲಾಗಿದೆ. ಆನೆಗದ್ದೆಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬದಲ್ಲಿ ಬೀದಿ ದೀಪ ಅಳವಡಿಸುವ  ಕೆಲಸ ನಡೆಯುತ್ತಿತ್ತು. ಈ ವೇಳೆ ಏಣಿ ಹಾಕಿಕೊಂಡು ಕಂಬದಲ್ಲಿ ದೀಪ ಅಳವಡಿಸುತ್ತಿದ್ದಾಗ ಏಣಿ ಜಾರಿದೆ. ಅಲ್ಲದೆ ವಿದ್ಯುತ್​ ತಂತಿಗೆ ಏಣಿ ತಾಗಿದೆ. ಪರಿಣಾಮ ಕರೆಂಟ್ ಹೊಡೆದು ನಾರಾಯಣರವರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ವೇಳೆ ಏಣಿ ಹಿಡಿದುಕೊಂಡಿದ್ದ ಇನ್ನೊಬ್ಬರ ಕೈಗಳು ಸುಟ್ಟುಹೋಗಿವೆ. 
 

ನಾರಾಯಣ್​ರವರು ಒಂದು ವರ್ಷದಿಂದ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದವರು. ಅಲ್ಲದೆ ಗ್ರಾಮ  ಪಂಚಾಯಿತಿ ಸೂಚನೆಯಂತೆ ಕರೆಂಟ್ ಕಂಬಗಳಿಗೆ ಬೀದಿ ದೀಪ ಅಳವಡಿಸುತ್ತಿದ್ದರು. ಅವರಿಗೆ ಶ್ರೀದರ್​ ಎಂಬವರು ಸಹಾಯಕರಾಗಿದ್ದರು. ಇಬ್ಬರು  ಇಲ್ಲಿನ ಜಂಬಿ ರಸ್ತೆ ಹೊಸನೀರಿನ ಟ್ಯಾಂಕ್ ಹತ್ತಿರವಿರುವ ವಿದ್ಯುತ್ ಕಂಬಕ್ಕೆ 18 ಎತ್ತರದ ಏಣಿ ಬಳಸಿ ವಿದ್ಯುತ್ ದೀಪ ಅಳವಡಿಸಲು ಮುಂದಾಗಿದ್ದಾರೆ. ಈ ವೇಳೆ ಕಬ್ಬಿಣದ ಏಣಿ ತುಸು ಜಾರಿ , ಎಲೆಕ್ಟ್ರಿಕ್ ವಯರ್​ಗೆ ತಾಗಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಎಣಿ ಹತ್ತಿದ್ದ ನಾರಾಯಣ್ ವಿದ್ಯತ್ ಶಾಕ್​ಗೆ ಒಳಗಾಗಿದ್ದಾರೆ.  ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.  


ಇನ್ನಷ್ಟು ಸುದ್ದಿಗಳು 

 


 

#ShimogaNews,#ShivamoggaNews,HosanagarA Today News,Male Nadu Today News. Com,Malnad Live,Malnad News Today,Malnad Report,Malnad Stories,News Sagar,Sagar Today News,Shikaripura Today News,Shimoga District Report,Shimoga Local News,Shimoga Times Today,Shimoga Today Details,shimoga today news,Shimoga Today Report,SHIVAMOGGA,shivamogga live,Shivamogga Today Live News,Shivamogga Today Video,Soraba Today News,Thirthahalli Today News

ಮುಂದಿನ ಸುದ್ದಿ ಒದಿ

Leave a Comment