KARNATAKA NEWS/ ONLINE / Malenadu today/ Sep 3, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (Hosnagar taluk) ಬಾಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ನಲ್ಲಿ ನಾಗರ ಹಾವೊಂದು ಸೇರಿಕೊಂಡು ಆತಂಕ ಮೂಡಿಸಿತ್ತು.
ಈ ಘಟನೆ ಶುಕ್ರವಾರ ನಡೆದಿದ್ದು ನಿನ್ನೆ ಬೆಳಕಿಗೆ ಬಂದಿದೆ. ಸ್ಕೂಲ್ ಆರಂಭವಾಗುತ್ತಲೇ ಶಿಕ್ಷಕರು ಪುಸ್ತಕ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಆಗ ವಿದ್ಯಾರ್ಥಿಯೊಬ್ಬ ಬ್ಯಾಗ್ ಜಿಪ್ ಓಪನ್ ಮಾಡಿ ನೋಡಿದ್ದಾನೆ. ಆಗ ಬ್ಯಾಗ್ನಲ್ಲಿ ಹಾವು ಇರುವುದು ಗೊತ್ತಾಗಿದೆ.
ತಕ್ಷಣವೇ ಪಕ್ಕದಲ್ಲಿದ್ದ ವಿದ್ಯಾರ್ಥಿಗೆ ಹೇಳಿದ್ಧಾರೆ. ಆತ ಸಮಯ ಪ್ರಜ್ಞೆ ತೋರಿ ಬ್ಯಾಗ್ ಜಿಪ್ ಹಾಕಿದ್ದಾನೆ. ಹೀಗಾಗಿ ಹಾವು ಹೊರಕ್ಕೆ ಬರುವುದು ತಪ್ಪಿದೆ. ಇನ್ನೂ ಬಳಿಕ ಶಿಕ್ಷಕರಿಗೆ ವಿಷಯ ತಿಳಿದು , ಸುತ್ತಮುತ್ತಲಿನವರನ್ನ ಸೇರಿಸಿದ್ದಾರೆ. ಕೊನೆಗೆ ಹಾವನ್ನು ಸಮೀಪದ ಕಾಡಿಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ನಲ್ಲಿ ಹಾವು ಹೇಗೆ ಹೋಯ್ತು ಎಂಬುದು ಅಚ್ಚರಿ ಮೂಡಿಸುತ್ತಿದ್ದು, ಈ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ವಿಚಾರಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
SHIVAMOGGA AIRPORT ನಿಂದ ವಿಮಾನಯಾನ! ಪ್ರತಿ ಟಿಕೆಟ್ಗೆ 500 ರೂಪಾಯಿ ಸಬ್ಸಿಡಿ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಇಂಡಿಗೋ ಪ್ಲೈಟ್