ಸಾಗರ ಟೌನ್ ಸ್ಟೇಷನ್ ಲಿಮಿಟ್ಸ್ನಲ್ಲಿ ಪಿಸ್ತೂಲ್ ಹಿಡಿದು ಯುವಕರ ಕಿರಿಕ್! ಪ್ರಕರಣಕ್ಕೆ ಟ್ವಿಸ್ಟ್!
young-men-holding-pistols-sagar-town-station-limits-twist-case
Shivamogga Feb 12, 2024 | ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ಯಲ್ಲಿ ಪಿಸ್ತೂಲ್ ಹಿಡಿದು ಪುಂಡಾಟ ಮೆರೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಕ್ಕಳು ಆಡುವ ಆಟದ ಸಾಮಾನಿನ ಪಿಸ್ತೂಲ್ ಹಿಡಿದುಕೊಂಡಿದ್ದರ ಬಗ್ಗೆ ಪೊಲೀಸ್ ಇಲಾಖೆ ವರದಿ ಮಾಡಿದೆ.
ಮೊನ್ನೆ ರಾತ್ರಿ ಸಾಗರ ಪೇಟೆಯ ಜೆಪಿ ರೋಡ್ನಲ್ಲಿ ಕುಡಿದಿದ್ದ ಯುವಕನೊಬ್ಬ ಪಿಸ್ತೂಲ್ ಹಿಡಿದು ಬೆದರಿಸ್ತಿದ್ದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವೇಳೆ ಆತನ ಜೊತೆಗಿದ್ದ ಯುವಕರು ಅವನ ಮೇಲೆ ಹಲ್ಲೆ ಮಾಡಿದ್ದರು. ಈ ದೃಶ್ಯವು ಸಹ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಎರಡು ದೃಶ್ಯಗಳು ವೈರಲ್ ಆದ ಬೆನ್ನಲ್ಲೆ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ಪ್ರಕರಣ ಸಂಬಂಧ ದಿನಾಂಕ: 12-02-2024 ಸೀತಾರಂ, ಪಿಐ ಸಾಗರ ಟೌನ್ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಸದರಿ ವಿಡಿಯೋವನ್ನು ಪರಿಶೀಲಿಸಿದೆ.
ಅಲ್ಲದೆ ವಿಡೀಯೋದಲ್ಲಿದ್ದ ಯುವಕರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದೆ. ದರ್ಶನ್ ಹಾಗೂ ನವೀನ್ ಎಂಬಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಇವರಿಬ್ಬರು ಪರಸ್ಪರ ಗಲಾಟೆ ಮಾಡಿಕೊಂಡಿದ್ದು, ಆ ಸಂದರ್ಭದಲ್ಲಿ ದರ್ಶನ್ ಎಂಬಾತನು ಮಕ್ಕಳ ಆಟಿಕೆಯ ನಕಲೀ ಏರ್ ಪಿಸ್ತೂಲ್ ಅನ್ನು ತೋರಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಸದ್ಯ ಘಟನೆ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.