GOOD NEWS / ಕೊಡಚಾದ್ರಿ ಪ್ರವಾಸಕ್ಕೆ ಇನ್ನಿಲ್ಲ ನಿರ್ಬಂಧ! ಆದರೆ ಇದೊಂದಕ್ಕಿಲ್ಲ ಅವಕಾಶ!

The wildlife department has lifted the ban on entry to Kodachadri hillಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶಕ್ಕೆ ಹಾಕಿದ್ದ ನಿರ್ಬಂಧವನ್ನು ವನ್ಯಜೀವಿ ವಿಭಾಗ ತೆರವುಗೊಳಿಸಿದೆ

GOOD NEWS / ಕೊಡಚಾದ್ರಿ ಪ್ರವಾಸಕ್ಕೆ ಇನ್ನಿಲ್ಲ ನಿರ್ಬಂಧ! ಆದರೆ ಇದೊಂದಕ್ಕಿಲ್ಲ ಅವಕಾಶ!

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS

 
ಶಿವಮೊಗ್ಗ ಜಿಲ್ಲೆ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳ ಕೊಡಚಾದ್ರಿ (Kodachadri)ಬೆಟ್ಟ. ಈ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನ ನಿಷೇಧಿಸಲಾಗಿತ್ತು. ವೀಕೆಂಡ್​ ಪ್ರವಾಸಿಗರಿಗೆ ಶಾಕ್! ಕೊಡಚಾದ್ರಿಗೆ ಹೋಗಲು ಇಲ್ಲ ಅವಕಾಶ! ಪ್ರವೇಶ ನಿಷೇಧ! ಎಂಬ ಶೀರ್ಷಿಕೆಯಡಿಯಲ್ಲಿ ಈ ಬಗ್ಗೆ ಮಲೆನಾಡು ಟುಡೆ ವರದಿಯನ್ನ ಮಾಡಿತ್ತ. ಇದೀಗ 13 ದಿನಗಳ ನಿಷೇಧದ ಬಳಿಕ ಕೊಡಚಾದ್ರಿ ಪ್ರವೇಶಕ್ಕೆ ಮತ್ತೆ ಅನುಕೂಲ ಮಾಡಿಕೊಡಲಾಗಿದೆ. 

ಆದೇಶ ವಾಪಸ್

ಕೊಡಚಾದ್ರಿಗೆ ಪ್ರವೇಶ ನಿರಾಕರಿಸಿ ವನ್ಯಜೀವಿ ವಿಭಾಗ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ.   ಭಾರಿ ಮಳೆಯ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗವು ಜುಲೈ 30ರಿಂದ ಕೊಡಚಾದ್ರಿ ಗೆ ಪ್ರವೇಶ ನಿರ್ಬಂಧ ಹೇರಿತ್ತು. ಇದು ವಿರೋಧಕ್ಕೂ ಕಾರಣವಾಗಿತ್ತು. ಪ್ರವಾಸಿಗರು ಹಾಗೂ ಭಕ್ತರ ಆಗಮನದಿಂದಲೇ ಬದುಕುತ್ತಿರುವ ಕುಟುಂಬಗಳು ನಿಷೇಧವನ್ನು ವಿರೋಧಿಸಿದ್ದವು. ಇದೀಗ ಷರತ್ತು ಸಡಿಸಲಿದ್ದು, ಪ್ರವಾಸಿಗರು ಹಾಗೂ ಭಕ್ತರು  ವಾಹನಗಳಲ್ಲಿ ತೆರಳಬಹುದಾಗಿದೆ. 

ಇದನ್ನು ಸಹ ಓದಿ : ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?

ಚಾರಣಕ್ಕಿಲ್ಲ ಅವಕಾಶ

ಸದ್ಯ ದೊರಕಿರುವ ಮಾಹಿತಿ ಪ್ರಕಾರ, ಚಾರಣ ಮಾಡಲು ಅನುಮತಿ ನೀಡಲಾಗಿಲ್ಲ. ಕೊಡಚಾದ್ರಿ ಬೆಟ್ಟ ಕಡಿದಾದ ದಾರಿಯನ್ನ ಹೊಂದಿದ್ದು, ಯಾವುದಾದರು ಅಪಾಯ ಸಂಭವಿಸುವ ಸಾಧ್ಯತೆ ಇರುವ ಕಾರಣಕ್ಕೆ ಚಾರಣಕ್ಕೆ ಅವಕಾಶ ನೀಡಲಾಗಿಲ್ಲ. 

ಜೀಪ್ ಮಾಲೀಕರಿಗೆ ಸಂತಸ

ಕೊಡಚಾದ್ರಿಯ ತಪ್ಪಲಿನಲ್ಲಿ ಬೆಟ್ಟಕ್ಕೆ ಕರೆದೊಯ್ಯಲು ನಿಟ್ಟೂರು, ಕೊಲ್ಲೂರು, ಕಟ್ಟಿನಹೊಳೆ, ಸಂಪೆಕಟ್ಟೆ ಸುತ್ತಮುತ್ತ 180 ಕ್ಕೂ ಹೆಚ್ಚುಜೀಪ್​ಗಳು ನಿತ್ಯ ಓಡಾಡುತ್ತವೆ. ವನ್ನಜೀವಿ ವಿಭಾಗದ ನಿಯಮ ಸಡಿಲಿಕೆಯಿಂದ ಈ ಜೀಪ್ ಮಾಲೀಕರು ಹಾಗೂ ಚಾಲಕರಿಗೆ ಸಾಕಷ್ಟು ಅನುಕೂಲವಾಗಿದೆ. 

ಮೆಗ್ಗಾನ್ ಆಸ್ಪತ್ರೆಗೆ ರೋಗಿಯನ್ನ ಬಿಟ್ಟು ಶಿಕಾರಿಪುರಕ್ಕೆ ಹೋಗುವಾಗ ನಡೀತು ದುರಂತ! ಕ್ಯಾಂಟರ್​ಗೆ ಆ್ಯಂಬುಲೆನ್ಸ್​ ಡಿಕ್ಕಿ! ನರ್ಸ್​ ವಿಶ್ವನಾಥ್ ಸಾವು!

ಶಿಕಾರಿಪುರದಲ್ಲಿ ನರ್ಸ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು, ರೋಗಿಯೊಬ್ಬರನ್ನ ಶಿವಮೊಗ್ಗ ಆಸ್ಪತ್ರೆಗೆ ಬಿಟ್ಟು ಆ್ಯಂಬುಲೆನ್ಸ್​ನಲ್ಲಿ ವಾಪಸ್ ಆಗುವಾಗ ಸಂಭವಿಸಿದ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ದಾರೆ. 

ಏನಿದು ಘಟನೆ?

ನ್ಯಾಮತಿ ತಾಲ್ಲೂಕಿನ ಶಿಕಾರಿಪುರ-ಸವಳಂಗ ರಸ್ತೆಯ ಹೊಸಜೋಗ ಬಸ್ ನಿಲ್ದಾಣದ ಬಳಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಕ್ಯಾಂಟರ್‌ಗೆ ಹಿಂಬದಿಯಿಂದ ಆ್ಯಂಬುಲೆನ್ಸ್​ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಸ್ಟಾಫ್ ನರ್ಸ್ ವಿಶ್ವನಾಥ ಮನಗೊಳಿ (30) ಅವರು ಮೃತಪಟ್ಟಿದ್ದಾರೆ.

ಘಟನೆಯ ಹಿನ್ನೆಲೆ

ತೀವ್ರ ಗಂಭೀರ ಸ್ವರೂಪದಲ್ಲಿದ್ದ ರೋಗಿಯನ್ನು ಶಿಕಾರಿಪುರದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವಿಶ್ವನಾಥ್​ ಆ್ಯಂಬುಲೆನ್ಸ್​ನಲ್ಲಿ ಕರೆತಂದಿದ್ದರು. ಆನಂತರ ವಾಪಸ್ ಶಿಕಾರಿಪುರಕ್ಕೆ ಸವಳಂಗ ರಸ್ತೆಯ ಮೂಲಕ ಹೋಗುವಾಗ, ಹೊಸಜೋಗ ಬಳಿ ಈ ಅಪಘಾತ ಸಂಭವಿಸಿದೆ.  

ಎಲ್ಲಿಯುವರು ವಿಶ್ವನಾಥ್ ?

ಜಮಖಂಡಿ: ಪಟ್ಟಣದ ಶ್ರೀ ಸಿದ್ದ ರಾಮೇಶ್ವರ ಬಡಾವಣೆ ವಾಸಿ ವಿಶ್ವನಾಥ್  ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶುಶೂಪಕರಾಗಿ ಕೆಲಸ ಮಾಡುತ್ತಿದ್ದರು.  ಕಳೆದ ಮೂರೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. 

ಇನ್ನಿಬ್ಬರಿಗೆ ಗಾಯ

ಘಟನೆಯಲ್ಲಿ ಕ್ಯಾಂಟರ್​  ರಭಸವಾಗಿ ಡಿಕ್ಕಿ ಹೊಡೆದಿದ್ದರಿಂದ ಆ್ಯಂಬುಲೆನ್ಸ್​ನಲ್ಲಿದ್ದ ವಿಶ್ವನಾಥ ಮನಗೊಳಿ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಆ್ಯಂಬುಲೆನ್ಸ್​ ಮತ್ತು ಕ್ಯಾಂಟರ್ ಲಾರಿ ಚಾಲಕರಿಗೆ ಗಾಯಗಳಾಗಿದ್ದು, ಇಬ್ಬರಿಗೂ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು