ಗನ್ ತೋರಿಸಿ ಬೆದರಿಕೆ ಹಾಕಿದ ಯುವಕ/ ಶಿವಮೊಗ್ಗ ಸಿಟಿಯಲ್ಲಿ ಪಿಸ್ತೂಲ್ ಓಡಾಡ್ತಿದ್ಯಾ? / ಏನಿದು ಎಚ್ಚರಿಕೆ ?
Shimoga: Youth threatens a man at gunpoint in Ilyas Nagar
ಶಿವಮೊಗ್ಗ ನಗರ ದಲ್ಲಿ ವ್ಯಕ್ತಿಯೊಬ್ಬ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದ್ದು ಕೇಸ್ ಎಫ್ಐಆರ್ ಆಗಿದೆ.
ಶಾದಿಮಹಲ್ ಬಳಿ ಘಟನೆ
ಸೆಕೆಂಡ್ ಹ್ಯಾಂಡ್ ಬೈಕ್ ಡೀಲರ್ ಒಬ್ಬರಿಗೆ ಗನ್ ತೋರಿಸಿದ ಯುವಕ ಅದರಿಂದಲೇ ಅವರ ಮೇಲೆ ಹಲ್ಲೆ ಸಹ ಮಾಡಿದ್ಧಾನಂತೆ. ನಗರದ ಇಲಿಯಾಸ್ ನಗರದ ಬಳಿಇರುವ ಶಾದಿ ಮಹಲ್ ಬಳಿಯಲ್ಲಿ ಈ ಘಟನೆ ನಡೆದಿದೆ.
ನಡೆದಿದ್ದೇನು?
ಇಲಿಯಾಜನ್ ನಗರದಲ್ಲಿ ಮೊಹಮ್ಮದ್ ರಿಯಾಮ್ ಎಂಬವರು ಬೈಕ್ ಡೀಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರ ಬಳಿ ಅಜರ್ ಎಂಬಾತ ಬಂದಿದ್ದನಂತೆ. ಅಲ್ಲದೆ ಬೈಕ್ವೊಂದನ್ನ ಖರೀದಿಸಿ, ಅದರ ೪೦ ಸಾವಿರ ರೂಪಾಯಿ ಹಣವನ್ನು ೨ ತಿಂಗಳು ಬಿಟ್ಟು ಕೊಡುವುದಾಗಿ ತಿಳಿಸಿದ್ದಾನೆ.
ಆದರೆ ಎರಡು ತಿಂಗಳು ಕಳೆದರು ಹಣ ಕೊಡದ ಹಿನ್ನೆಲೆಯಲ್ಲಿ ರಿಯಾಬ್ ಕಳೆದ ಶನಿವಾರ, ಅಜರ್ನನ್ನ ಕರೆಸಿಕೊಂಡು ಹಣ ಕೊಡು ಇಲ್ಲ ಬೈಕ್ ವಾಪಸ್ ಕೊಡು ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೇ ರಾಂಗ್ ಆದ ಅಜರ್, ಪೈಸ ಸಹ ಕೊಡುವುದಿಲ್ಲ , ಏನ್ ಮಾಡ್ತೀಯಾ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾನೆ.
ಗನ್ ತೋರಿಸಿ ಬೆದರಿಕೆ
ಕೇವಲ ಬೆದರಿಕೆ ಹಾಕಿದ್ದಷ್ಟೆ ಅಲ್ಲದೆ ಅಜರ್, ತನ್ನ ಬೆನ್ನ ಹಿಂದೆ ಸಿಗಿಸಿಕೊಂಡಿದ್ದ ಗನ್ನನ್ನ ತೆಗೆದು ರಿಯಾಬ್ಗೆ ಹೆದರಿಸಿದ್ದಾನೆ. ಆತನ ಕಿವಿಗೆ ಅದರಿಂದಲೇ ಹಲ್ಲೆ ಮಾಡಿ, ಶೂಟ್ ಮಾಡ್ತೀನಿ ಎಂದು ಬೆದರಿಸಿದ್ದಾನೆ..
ಗನ್ ಬಂದಿದ್ದು ಎಲ್ಲಿಂದ
ಅಷ್ಟೊತ್ತಿಗೆ ಅಲ್ಲಿಗೆ ಕೆಲವರು ಬರುವುದನ್ನ ಗಮನಿಸಿದ ಅಜರ್, ಗನ್ ಸಮೇತ ಪರಾರಿಯಾಗಿದ್ಧಾನೆ.ಸದ್ಯ ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಆಗಿದೆ. ಆದರೆ ಶಿವಮೊಗ್ಗ ಸಿಟಿಯಲ್ಲಿ ಗನ್ವೊಂದನ್ನ ಬಳಸಲಾಗುತ್ತಿದೆ ಎಂದರೆ, ಆತನ ಹಿಂದಿನ ಉದ್ದೇಶ ಏನಿರಬಹುದು ಎಂಬುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನು ಸಹ ಓದಿ
Read /ಶಿವಮೊಗ್ಗದ ಈ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್ ಲೆಟರ್ನಲ್ಲಿ ಏನಿದೆ ಗೊತ್ತಾ
Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !
Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ 1 ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ
Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್
Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್!
Read / Bhadravati/ ಪರ್ಮಿಶನ್ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್ಗೆ ಸೇರಿದ ವಾಹನ ಜಪ್ತಿ
Read / ತೀರ್ಥಹಳ್ಳಿಯಲ್ಲಿ ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ
Read / ಆಯನೂರು ಮಂಜುನಾಥ್ ಕಾಂಗ್ರೆಸ್ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್!
Read/ ಸಾಗರಕ್ಕೆ ಬರುತ್ತಿದ್ದ ಬಸ್ ಅಪಘಾತ/ ಸ್ಟೇರಿಂಗ್ ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS
HASHTAGS
Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite#LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News #KannadaWebsite MalenaduToday.com Malenadu today Malenadu Postbox kannnada