ಗ್ಯಾಸ್​ ಸಿಲಿಂಡರ್ ಕೊಡದಿದ್ದಕ್ಕೆ , ಮಹಿಳೆಯನ್ನು ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಒಂದು ವರ್ಷ ಶಿಕ್ಷೆ ! ಏನಿದು ಘಟನೆ ವಿವರ ಇಲ್ಲಿದೆ!

ಹಂಚಿಕೊಳ್ಳಿ
WhatsApp Facebook X Telegram

 MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ , 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಪ್ರಕರಣವೊಂದರಲ್ಲಿ ಆರೋಪಿಯೊಬ್ಬನಿಗೆ ಒಂದು ವರ್ಷ ಶಿಕ್ಷೆ ವಿಧಿಸಿದೆ. ಗ್ಯಾಸ್ ಸಿಲಿಂಡರ್ ಕೊಡದಿದ್ದಕ್ಕೆ , ಸಿಟ್ಟಾಗಿ ಮಹಿಳೆಯನ್ನು ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಒಂದು ವರ್ಷ ಶಿಕ್ಷೆ ನೀಡಲಾಗಿದೆ. 

READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

ಟಿಪ್ಪು ನಗರದ ನಿವಾಸಿ ಅಶ್ರಫ್​ ಎಂಬಾತ,  ಮಹಿಳೆಯೊಬ್ಬರ ಬಳಿ ಗ್ಯಾಸ್ ಸಿಲಿಂಡರ್​ ಕೇಳಿದ್ದ.ಆದರೆ ಆಕೆ ಅದನ್ನು ಕೊಡುವುದಿಲ್ಲ ಎಂದಿದ್ಧಾಳೆ. ಇದೇ ಕಾರಣಕ್ಕೆ ಸಿಟ್ಟಾಗಿ,  02-06-2017 ರಂದು ಆಕೆಯ ಜೊತೆ ಜಗಳ ತೆಗೆದು ಕೈ ಹಿಡಿದು ಎಳೆದಾಡಿದ್ದ. ಈ ಸಂಬಂಧ  ಐಪಿಸಿ 448, 323, 354(B) ಐಪಿಸಿ ಮತ್ತು ಕಲಂ 3 (1) (w) (1), 3 (2) (va) ಎಸ್.ಸಿ & ಎಸ್,ಟಿ (ಪಿಎ) ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. ಮೇಲಾಗಿ ಕೇಸ್​ ಸಂಬಂಧ ಚಾರ್ಜ್​ ಶೀಟ್​ ಸಲ್ಲಿಕೆಯಾಗಿತ್ತು. ಆನಂತರ ಕೇಸ್​ನ ವಿಚಾರಣೆ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭವಾಗಿತ್ತು.  ಈ ಕೇಸ್​ನಲ್ಲಿ ಸರ್ಕಾರಿ ಅಭಿಯೋಜಕಿ ಪುಷ್ಪರವರು ವಾದ ಮಂಡಿಸಿದ್ದರು. ಅಂತಿಮವಾಗಿ ವಿಚಾರಣೆ ಮುಗಿದು ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗೆ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor