ಆರ್​ಎಂಎಂ ಮಂಜುನಾಥ್​ ಗೌಡರು, ಬೇಳೂರು ಗೋಪಾಲಕೃಷ್ಣರ ಜೊತೆ ತೀರ್ಥಹಳ್ಳಿ ಕಂಬದ ಗಣಪತಿಗೆ ಡಿಕೆ ಶಿವಕುಮಾರ್ ಪೂಜೆ ! ಏನಿದು ವಿಶೇಷ1?

ಹಂಚಿಕೊಳ್ಳಿ
WhatsApp Facebook X Telegram
MALENADUTODAY.COM | SHIVAMOGGA NEWS
ಶಿವಮೊಗ್ಗ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಪ್ರಜಾಧ್ವನಿ ಯಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ. ಇದರ ನಡುವೆ ಅವರು ವಿವಿಧ ದೇವಸ್ಥಾನಗಳನ್ನು ಪವಿತ್ರ ಕ್ಷೇತ್ರಗಳಿಗೂ ಭೇಟಿಕೊಟ್ಟು ಪೂಜೆ ಪುನಸ್ಕಾರ ಸಲ್ಲಿಸ್ತಿದ್ಧಾರೆ. 
ಇದಕ್ಕೆ ಪೂರಕವಾಗಿ ತೀರ್ಥಹಳ್ಳಿಯ  ಪುರಾಣ ಪ್ರಸಿದ್ದ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಂಬದ ಗಣಪತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ  ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಆರ್ ಎಂ ಮಂಜುನಾಥ ಗೌಡರು ನಿನ್ನೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ.  ಈ ವೇಳೆ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣರರವರು ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ರು.
ಇಲ್ಲಿನ  ಕಂಬದ ಗಣಪತಿಗೆ ಪೂಜೆ ಸಲ್ಲಿಸಿದರೆ, ಯಶಸ್ಸು ಪಕ್ಕಾ ಎಂಬ ಮಾತು ಮಲೆನಾಡು (Malenadu) ಭಾಗದಲ್ಲಿದೆ. ಅಲ್ಲದೆ ಇಲ್ಲಿ ಪ್ರಸಾದವಾದರೆ, ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ಪ್ರತೀತಿಯಿದೆ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ನಿನ್ನೆ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇನ್ನೂ ಈ ವೇಳೆ ಆರ್​ಎಂ ಮಂಜುನಾಥ್ ಗೌಡರು ಪೂಜೆ ಸಲ್ಲಿಸಿದ್ದು, ಕೆಪಿಸಿಸಿ ಅಧ್ಯಕ್ಷರ ಆಪ್ತವಲಯದ ಈ ಪೂಜೆ ಚರ್ಚೆಯನ್ನು ಸಹ ಹುಟ್ಟುಹಾಕಿದೆ. 
Malenadu Today Shivamogga

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor