ಅಪ್ರಾಪ್ತೆ ಬಳಿ ಕುಡಿಯೋಕೆ ನೀರು ಕೇಳಿ ತಪ್ಪು ಮಾಡಿದ ಯುವಕ! ದಾಖಲಾಯ್ತು ಕೇಸ್! ಗಾಂಧಿ ಬಜಾರ್​ನಲ್ಲಿ ಸ್ನೇಹಿತೆಯನ್ನ ಕರೆದುಕೊಂಡು ಹೋಗುವಾಗ ಹಲ್ಲೆ!

KARNATAKA NEWS/ ONLINE / Malenadu today/ Sep 7, 2023 SHIVAMOGGA NEWS  

ಆಪ್ರಾಪ್ತೆಗೆ ಕಿರುಕುಳ! ಕೇಸ್ ದಾಖಲು 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪೊಲೀಸ್ ಸ್ಟೇಷನ್ ಒಂದರಲ್ಲಿ ಯುವಕನೊಬ್ಬನ ವಿರುದ್ಧ  ಪೋಕ್ಸೋ ಕಾಯ್ದೆ (Pocso Act) ಅಡಿ ಕೇಸ್​ ದಾಖಲಾಗಿದೆ. 

 

ಕುಡಿಯಲು ನೀರು ಕೇಳಿ ಬಾಲಕಿಯ ಮನೆಯೊಳಗೆ ನುಗ್ಗಿದ್ದ ಆರೋಪಿ, ಆಕೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿದ್ದಾಳೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ಘಟನೆ ಬೆನ್ನಲ್ಲೆ ಆರೋಪಿಯನ್ನು ಬಂಧಿಸುವಂತೆ ಪೋಷಕರು ಹಾಗೂ ಗ್ರಾಮಸ್ಥರು ಡಿವೈಎಸ್​ಪಿ ಗೋಪಾಲಕೃಷ್ಣ ನಾಯ್ಕ್​ರವರ ಬಳಿ ಒತ್ತಾಯಿಸಿದ್ದಾರೆ. ಸದ್ಯ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ.  


ಗಾಂಧಿಬಜಾರ್​ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ 

ಹುಷಾರಿಲ್ಲದ ಸ್ನೇಹಿತೆಯನ್ನ ಆಸ್ಪತ್ರೆಗೆ ತೋರಿಸಿ ಬೈಕ್​ನಲ್ಲಿ ಮನೆಗೆ ಬಿಡಲು ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಗಾಂಧಿಬಜಾರ್​ನಲ್ಲಿ ಹಲ್ಲೆ ಮಾಡಲಾಗಿದೆ. ಯುವಕನೊಬ್ಬ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ಸಹ ದಾಖಲಾಗಿದೆ. 


   

ಇನ್ನಷ್ಟು ಸುದ್ದಿಗಳು 


 

 

Leave a Comment