ಟ್ರೆಂಡ್ ಆಗುತ್ತಿದೆ ಈ ಲೇಡಿ ಪೊಲೀಸ್ ಟೀಂನ ಎನ್​ಕೌಂಟರ್! ಏಕೆ ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
Swathi Death Case sp mithunkumar statement
Swathi Death Case sp mithunkumar statement

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 : ಪೊಲೀಸರು ಕಾಲಿಗೆ ಗುಂಡು ಹೊಡೆಯುವುದು ಸಾಮಾನ್ಯವಾದ ಸುದ್ದಿ. ಈ ಪೈಕಿ ಕೆಲವೊಮ್ಮೆ ಲೇಡಿ ಪೊಲೀಸ್ ಆಫಿಸರ್​ ಕಾಲಿಗೆ ಗುಂಡು ಹೊಡೆದ ಅಧಿಕಾರಿಯಾಗಿರುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಆರೋಪಿಯೊಬ್ಬನನ್ನು ಹಿಡಿಯುವ ಆತನ ಕಾಲಿಗೆ ಗುಂಡೇಟು ನೀಡಿದ್ದರು. ಅದೇ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಅಶೋಕ ನಗರ ಠಾಣೆಯ ಪಿಎಸ್​ಐ ಅನ್ನಪೂರ್ಣರವರು ಆರೋಪಿಯನ್ನು ಎನ್​ಕೌಂಟರ್ ಮಾಡಿದ್ದರು. ಇವೆಲ್ಲದ ನಡುವೆ ಇದೀಗ ಉತ್ತರ ಪ್ರದೇಶದಿಂದ ಒಂದು ಸುದ್ದಿ ಬಂದಿದೆ. ಇಡೀ ಎನ್​ಕೌಂಟರ್ ಆಪರೇಷನ್​ ಒಂದನ್ನ ಲೇಡಿ ಆಫೀಸರ್ ಹಾಗೂ ಲೇಡಿ ಪೊಲೀಸ್ ಸಿಬ್ಬಂದಿ ನಿರ್ವಹಿಸಿದ್ದಾರೆ. ಅಲ್ಲದೆ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಸಂಪೂರ್ಣ ಮಹಿಳಾ ಪೊಲೀಸ್ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಸದ್ಯ ಈ ಲೇಡಿ ಪೊಲೀಸ್ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ಪ್ರಕರಣಗಳಲ್ಲಿ ಬೇಕಿದ್ದ  ಕ್ರಿಮಿನಲ್‌ ಜಿತೇಂದ್ರ ಎಂಬಾತನನ್ನ ಬಂಧಿಸಲು ಪೊಲೀಸ್ ಟೀಂ ತೆರಳಿತ್ತು. ಇಡೀ ತಂಡ ಮಹಿಳಾ ಪೊಲೀಸ್  ಸಿಬ್ಬಂದಿಯಿದ ಕೂಡಿತ್ತು. ಇನ್ನೂ ಆರೋಪಿಯನ್ನು ಇನ್ನೇನು ಬಂಧಿಸಬೇಕು ಎಂದು ಕವರ್ ಆಗಿದ್ದ ಪೊಲೀಸರ ಮೇಲೆ ಆರೋಪಿ ಗುಂಡಿನ ಮಳೆಗರೆಯಲು ಆರಂಭಿಸಿದ್ದ. ಪ್ರತಿಯಾಗಿ ಲೇಡಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದಾರೆ. ಅಂತಿಮವಾಗಿ ಆರೋಪಿ ಕಾಲಿಗೆ ಗುಂಡು ಬಿದ್ದಿದ್ದು ಆತನನ್ನು ತಂಡ ವಶಕ್ಕೆ ಪಡೆದಿದೆ. 

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Women Police Team in UP Shoots and Arrests Criminal in Encounter

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor