9 ತರಗತಿ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವಾಗಿದ್ದು 750 ರೂಪಾಯಿ ಸಾಲನಾ?

This Article Written by / Malenadu Today / ಆಗಷ್ಟ್ 28, 2023

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS 

ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿತ್ತು. ಇದೀಗ ಈ ಪ್ರಕರಣದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಸಹ ಬಯಲಾಗಿದೆ.  ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ 9ನೇ ತರಗತಿ ವಿದ್ಯಾರ್ಥಿ ಸಾವಿಗೆ 750 ರೂಪಾಯಿ ಸಾಲ ಕಾರಣ ಎಂಬ ಚೀಟಿಯೊಂದು ಇದೀಗ ಲಭ್ಯವಾಗಿದೆ.

ಪೊಲೀಸರು, ಪ್ರಕರಣದ ತನಿಖೆಯಲ್ಲಿ ಡೆತ್ ನೋಟ್ ಪರಿಶೀಲಿಸಿದಾಗ, ವಿದ್ಯಾರ್ಥಿ ತನ್ನ ಸ್ನೇಹಿತರಿಂದ  750 ರೂ. ಸಾಲ ಪಡೆದಿದ್ದ ಎಂಬ ವಿಚಾರ ಗೊತ್ತಾಗಿದೆ. ಅಲ್ಲದೆ ವಿದ್ಯಾರ್ಥಿಯು  750 ರೂಪಾಯಿ ಪಡೆದಿದ್ದು, ಆದರೆ ಮೂರು ಸಾವಿರ ರೂಪಾಯಿ ಪಡೆದಿದ್ದೇನೆ ಎಂದು ಹೇಳಿ  ಟಾರ್ಚರ್ ನೀಡಿದ್ದಾರೆ ಎಂಬಂತಹ ಬರಹವೂ ಚೀಟಿಯಲ್ಲಿದೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 


 

 

ಮುಂದಿನ ಸುದ್ದಿ ಒದಿ

Leave a Comment