ತೋಟಕ್ಕೆ ದನ-ಕರ ನುಗ್ಗಿದ್ದಕ್ಕೆ ಮೂವರ ಮಕ್ಕಳ ಮೇಲೆ ಹಲ್ಲೆ ಆರೋಪ! ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಅನುಚಿತ ವರ್ತನೆ ದೂರು!

Three children attacked for grazing cows in garden

ಹಂಚಿಕೊಳ್ಳಿ
WhatsApp Facebook X Telegram
ತೋಟಕ್ಕೆ ದನ-ಕರ ನುಗ್ಗಿದ್ದಕ್ಕೆ ಮೂವರ ಮಕ್ಕಳ ಮೇಲೆ ಹಲ್ಲೆ ಆರೋಪ! ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಅನುಚಿತ ವರ್ತನೆ ದೂರು!
ಸುದ್ದಿ ಸಾರಾಂಶ

Three children attacked for grazing cows in garden

KARNATAKA NEWS/ ONLINE / Malenadu today/ Jun 1, 2023 SHIVAMOGGA NEWS

ಶಿವಮೊಗ್ಗ ತಾಲ್ಲೂಕಿನ ಕುಂಸಿ ಪೊಲೀಸ್ ಸ್ಟೇಷನ್​ ನಲ್ಲಿ  ದನ-ಕರ ತೋಟಕ್ಕೆ ನುಗ್ಗಿದ ಕಾರಣಕ್ಕೆ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಪ್ರಶ್ನಿಸಿದ ಅವರ ತಾಯಿ ಜೊತೆಗೂ ಅಸಭ್ಯವಾಗಿ ವರ್ತಿಸಿದ ಆರೋಪ ಸಂಬಂಧ ಕೇಸ್ ದಾಖಲಾಗಿದೆ. 

ಇದೇ ಜೂನ್ 3 ಕ್ಕೆ ನಾ ಕಂಡಂತೆ ತೇಜಸ್ವಿ-ಶಾಮಣ್ಣ

ನಿನ್ನೆ ದಾಖಲಾಗಿರುವ ಎಫ್​ಐಆರ್​ ಹಾಗೂ ದೂರಿನಲ್ಲಿ , ಸುನೀತಾ ಎಂಬವರು ಈ ಸಂಬಂಧ ಆರೋಪ ಮಾಡಿದ್ದಾರೆ. ಮೊನ್ನೆ ದಿನ ಇವರ ಮಕ್ಕಳು ದನ ಹಾಗೂ ಕರುವೊಂದನ್ನ ಮೇಯಿಸಲು ಕೊಂಡೊಯ್ದಿದ್ದರಂತೆ. ಈ ವೇಳೆ ಆಕಸ್ಮಾತ್ ಆಗಿ, ಅಲ್ಲಿಯ ನಿವಾಸಿ ಮೋಹನ್​ ಎಂಬವರ ತೋಟಕ್ಕೆ ದನ ಕರು ನುಗ್ಗಿ ಮೇಯಲು ಆರಂಭಿಸಿವೆ. ಇದೆ ಕಾರಣಕ್ಕೆ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಅಲ್ಲದೆ ಘಟನೆಯಲ್ಲಿ ಬಾಲಕನೊಬ್ಬನ ಕೈ ಮುರಿದು ಹೋಗುವ ಸಾಧ್ಯತೆ ಇದೆ ಎಂದು ದೂರಲಾಗಿದೆ. ಇನ್ನೂ ಇದನ್ನ ಪ್ರಶ್ನಿಸಿದ್ದಕ್ಕೆ ಅವರ ಜೊತೆಗೂ ಅಸಭ್ಯವಾಗಿ ವರ್ತಿಸಿದ ಆರೋಪ ಮಾಡಲಾಗಿದೆ. ಇನ್ನೂ ತೋಟಕ್ಕೆ ನುಗ್ಗಿದ್ದ ದನ ಕರುವಿಗೂ ದೊಣ್ಣೆಯಿಂದ ಹೊಡೆದಿದ್ಧಾರೆ ಎಂದು ದೂರಿದ್ಧಾರೆ. ಸದ್ಯ ಈ ಸಂಬಂಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. 

 ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor