ಇದೇ ಜೂನ್ 3 ಕ್ಕೆ ನಾ ಕಂಡಂತೆ ತೇಜಸ್ವಿ-ಶಾಮಣ್ಣ
'Naa Kandante Tejaswi-Shamanna' book to be released on June 3 / poornachandra tejaswi books
KARNATAKA NEWS/ ONLINE / Malenadu today/ Jun 1, 2023 SHIVAMOGGA NEWS
ಶಿವಮೊಗ್ಗ (poornachandra tejaswi books)ಬಹುಮುಖಿ ಶಿವಮೊಗ್ಗ ಹಾಗೂ ಅಭಿರುಚಿ ಪ್ರಕಾಶನ ಮೈಸೂರುನ ಸಹಯೋಗದೊಂದಿಗೆ ಜೂನ್ 3 ನೇ ತಾರೀಖು ಸಂಜೆ 5 ಗಂಟೆಗೆ ನಗರದ ಕುವೆಂಪು ರಂಗ ಮಂದಿರದಲ್ಲಿ ಲೇಖಕ ಕಡಿದಾಳ್ ಪ್ರಕಾಶ್ ರವರು ಬರೆದಿರುವ "ನಾ ಕಂಡಂತೆ ತೇಜಸ್ವಿ- ಶಾಮಣ್ಣ'' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಬಹುಮುಖಿಯ ನಾಗಭೂಷಣ್ ತಿಳಿಸಿದ್ದಾರೆ.
ವನ್ಯಜೀವಿ ತಜ್ಞರು ಹಾಗೂ ಛಾಯಾಗ್ರಹಕರಾದ ಕೃಪಾಕರ- ಸೇನಾನಿಯವರು ಪ್ರಸ್ತಕ ಬಿಡುಗಡೆ ನೆರವೇರಿಸಲಿದ್ದಾರೆ. ಸಾಹಿತಿ ಪುಟ್ಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ನಂತರ ಅತಿಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ಇರಲಿದೆ.
ನಾಡಿನ ಕಲೆ -ಸಾಹಿತ್ಯದ ಇಬ್ಬರು ದಿಗ್ಗಜರು ಪೂರ್ಣಚಂದ್ರ ತೇಜಸ್ವಿ ಹಾಗೂ ಕಡಿದಾಳ್ ಶಾಮಣ್ಣ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಇವರಿಬ್ಬರು ನಮ್ಮ ನಡುವೆ ದಂತ ಕತೆಯಾಗಿ ಬೆಳೆದವರು. . ಕಡಿದಾಳ್ ಪ್ರಕಾಶ್ ಇಬ್ಬರ ಬಗ್ಗೆ ಒಂದೇ ಪುಸ್ತಕದಲ್ಲಿ ಬರೆದಿದ್ದು ಇದೊಂದು ವಿಶೇಷ ಕೃತಿ ಎನಿಸಿಕೊಳ್ಳಲಿದೆ.