ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ಅಂದರೆ ಇವತ್ತು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಇರೋದಿಲ್ಲ ಕರೆಂಟ್
ನಗರದ ಪ್ರಮುಖ ಬಡಾವಣೆಗಳಾದ ಹಳೇನಗರ, ಹೊಸ ಸೇತುವೆ ರಸ್ತೆ, ಸಿದ್ಧಾರೂಢ ನಗರ, ಶಂಕರಮಠ, ಕನಕ ನಗರ, ತಾಲ್ಲೂಕು ಕಚೇರಿ ರಸ್ತೆ, ರಂಗಪ್ಪ ವೃತ್ತ ಹಾಗೂ ಬಸವೇಶ್ವರ ವೃತ್ತದ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಇದರೊಂದಿಗೆ ಕೋಟೆ, ಕಂಚಿನಬಾಗಿಲು, ಹಳದಮ್ಮನವರ ಬೀದಿ, ಖಾಜಿ ಮೊಹಲ್ಲಾ, ಭೂತನಗುಡಿ, ಹೊಳೆಹೊನ್ನೂರು ರಸ್ತೆ, ಖಲಂದರ ನಗರ, ಜಾಟ್ ಪಟ್ ನಗರ, ಅನ್ವರ್ ಕಾಲೊನಿ, ಮೊಮಿನ್ ಮೊಹಲ್ಲಾ, ಅಮಿರ್ ಜಾನ್ ಕಾಲೊನಿ, ಹೊಸಮನೆ ಮತ್ತು ಎನ್.ಎಮ್.ಸಿ ರಸ್ತೆಗಳಲ್ಲಿಯೂ ಕರೆಂಟ್ ಕಡಿತಗೊಳ್ಳಲಿದೆ. ಹಾಗೆಯೇ ಭೋವಿ ಕಾಲೊನಿ, ಸಂತೆ ಮೈದಾನ, ಕೇಶವಪುರ, ಸತ್ಯ ಸಾಯಿ ನಗರ, ಶಿವಾಜಿ ವೃತ್ತ, ಹನುಮಂತ ನಗರ, ತಮ್ಮಣ್ಣ ಕಾಲೊನಿ, ಸುಭಾಷ್ ನಗರ, ವಿಜಯನಗರ, ಕುವೆಂಪು ನಗರ, ನೃಪತುಂಗ ನಗರ ಹಾಗೂ ಸಯ್ಯದ್ ಕಾಲೊನಿ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಭದ್ರಾವತಿ ಗ್ರಾಮಾಂತರ
ಗ್ರಾಮಾಂತರ ಭಾಗಗಳಿಗೂ ಈ ವ್ಯತ್ಯಯ ಅನ್ವಯವಾಗಲಿದ್ದು, ಪ್ರಮುಖವಾಗಿ ಸೀಗೆಬಾಗಿ, ಆಶ್ವಥ್ ನಗರ, ಕಬಳಿಕಟ್ಟೆ, ಭದ್ರಾ ಕಾಲೊನಿ, ಕಣಕಟ್ಟೆ, ಗೌರಾಪುರ, ಗಾಂಧಿ ವೃತ್ತ, ಕೋಡಿಹಳ್ಳಿ, ಅರಳಿಹಳ್ಳಿ, ಬದನೆಹಾಳು, ಬೆಳ್ಳಿಗೆರೆ ಹಾಗೂ ಬಂಡಿಗುಡ್ಡ ಗ್ರಾಮಗಳಲ್ಲಿ ಪವರ್ ಕಟ್ ಇರಲಿದೆ. ಇದಲ್ಲದೆ ಹೊಸಳ್ಳಿ, ಕಲ್ಪನಹಳ್ಳಿ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಬಾಬಳ್ಳಿ, ವೀರಾಪುರ, ಶ್ರೀರಾಮ ನಗರ, ಕಲ್ಲಾಪುರ, ದಾನವಾಡಿ, ಡಿ.ಬಿ. ಹಳ್ಳಿ, ಅರಕೆರೆ ಮತ್ತು ಮಾರಶೆಟ್ಟಹಳ್ಳಿಯಲ್ಲಿ ವಿದ್ಯುತ್ ಕಡಿತವಾಗಲಿದೆ. ಇವುಗಳ ಜೊತೆಗೆ ಕಲ್ಲಿಹಾಳ್, ಅರಬಿಳಚಿ, ತಳ್ಳಿಕಟ್ಟೆ, ಕುಮಾರಿ ನಾರಾಯಣಪುರ, ತಿಮ್ಲಾಪುರ, ಅತ್ತಿಗುಂದ, ಗುಡ್ಡದ ನೇರಲೆಕೆರೆ, ದೇವರಹಳ್ಳಿ, ಕುಮಾರನಹಳ್ಳಿ ಪ್ರದೇಶಗಳಲ್ಲಿಯೂ ದಿನವಿಡೀ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

