ಮಧು ಬಂಗಾರಪ್ಪ V/s ಪ್ರಣವಾನಂದ ಸ್ವಾಮೀಜಿ! ಅವರ ಆರೋಪಕ್ಕೆ ಸಚಿವರು ನೀಡಿದ ಉತ್ತರವೇನು?

Madhu Bangarappa replied to Pranavananda Swamiji's accusation in Shimogaಪ್ರಣವಾನಂದ ಸ್ವಾಮೀಜಿಯ ಆರೋಪಕ್ಕೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪರವರು ಉತ್ತರಿಸಿದ್ದಾರೆ

ಮಧು ಬಂಗಾರಪ್ಪ V/s ಪ್ರಣವಾನಂದ ಸ್ವಾಮೀಜಿ!  ಅವರ ಆರೋಪಕ್ಕೆ ಸಚಿವರು ನೀಡಿದ ಉತ್ತರವೇನು?

 

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಪ್ರಣಾವನಂದ ಸ್ವಾಮೀಜಿ ಹಾಗೂ ಸಚಿವ ಮಧು ಬಂಗಾರಪ್ಪರ ನಡುವಿನ ವಾಕ್ಸಮರ ಮುಂದುವರಿದಿದೆ. ಕಾಂಗ್ರೆಸ್​ನ ಹಿರಿಯ ನಾಯಕ ಹರಿಪ್ರಸಾದ್​ ಪರವಾಗಿ ನಿಂತಿರುವ ಪ್ರಣಾವನಂದ ಸ್ವಾಮೀಜಿಯವರ ಬಗ್ಗೆ ನಿನ್ನೆ ಮಾತನಾಡಿದ್ದ ಮಧು ಬಂಗಾರಪ್ಪನವರ ಬಗ್ಗೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಮಾತನಾಡಿದ್ದಾರೆ.  

ಅವರು  ತಪ್ಪು ಮಾಡಿಲ್ಲವೆಂದ ಮೇಲೆ ಕಣ್ಣೀರೇಕೆ ಹಾಕಿದ್ರು ಎಂದು ಪ್ರಶ್ನಿಸಿದ ಸಚಿವರು, ಅವರಿಗೆ ನನ್ನಿಂದ ಜೀವ ಬೆದರಿಕೆ ಎನ್ನಲು, ನನಗೆ ಮಾಡಲು ಬೇರೆ ಕೆಲಸ ಇಲ್ಲವೇ ಎಂದು ಆಕ್ರೋಶ ಹೊರಹಾಕಿದ್ದಾರೆ.  ಮಧು ಬಂಗಾರಪ್ಪರನವರು ಕರೆ ಮಾಡಿ ಬೆದರಿಕೆ ಹಾಕಿದ್ರು ಎಂದು ಬುರುಡೆ ಬಿಡೋದನ್ನ ಬೇಕಾದಷ್ಟು ನೋಡಿದ್ದೇವೆ. ಅವರ ಸ್ಥಿತಿ ನೋಡಿ , ಅವರು ಮಾಡಿದ ಪಾಪದ ಕರ್ಮ ಕಾಣುತ್ತಿದೆ ಎಂದಷ್ಟೆ ಹೇಳುತ್ತೇನೆ.

ತಪ್ಪು ಮಾಡಿದರೆ, ಕಳ್ತನ ಮಾಡಿದರೇ ಮಾತ್ರ ಕಣ್ಣೀರು ಹಾಕುತ್ತಾರೆ. ಅವರನ್ನ ಭೇಟಿ ಮಾಡುವ ಕೆಲಸ ನಾನೇಕೇ ಮಾಡಬೇಕು. ನನಗೆ ಬೇರೆ ಕೆಲಸಗಳಿವೆ ಎಂದರು. ಅಲ್ಲದೆ ಪ್ರಣಾವನಂದ ಸ್ವಾಮೀಜಿಯವರು ಸುಳ್ಳು ಹೇಳುವ ಸ್ವಾಮಿ. ಅವರ ಹಿನ್ನೆಲೆಯನ್ನು ವಿಚಾರಿಸಿ ಎಲ್ಲವೂ ಗೊತ್ತಾಗುತ್ತದೆ. ಹರಿಪ್ರಸಾದ್​ ಗೆ ಸಚಿವ ಸ್ಥಾನ ನೀಡಬೇಡಿ ಎಂದು ನಾನ್ಯಾಕೆ ಹೇಳಲಿ, ಆದರೆ ಈ ಸುಳ್ಳನ್ನು ಹೇಳುತ್ತಾ,ಸ್ವಾಮೀಜಿ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. 

ಅವರು ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಪ್ರಖ್ಯಾತಿ ಪಡೆದುಕೊಳ್ಳುತ್ತಾರೆ. ಹಾಗಾಗಿ ಅವರನ್ನು ಪ್ರಖ್ಯಾತಿಗೊಳಿಸಲು ನನಗಿಷ್ಟವಿಲ್ಲ. ಹಾಗಾಗಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ನಮ್ಮ ಸಮುದಾಯದವರಲ್ಲ ಎಂದು ಮಧು ಬಂಗಾರಪ್ಪ, ಈ ಸ್ವಾಮೀಜಿ ಪೂರ್ವಪರ ನೀವೆ ಟಿವಿಗಳಲ್ಲಿ ಹಾಕಿದ್ದೀರಿ ಒಮ್ಮೆ ಅದನ್ನು ವಿಚಾರ ಮಾಡಿ ಎಂದಿದ್ಧಾರೆ. 


ಇನ್ನಷ್ಟು ಸುದ್ದಿಗಳು