SHIVAMOGGA | Jan 21, 2024 |JD(S) leader’s car ಶಿವಮೊಗ್ಗದ ಸೂಗೂರು ಬಳಿ ಕಾರೊಂದು ಹೊಂಡಕ್ಕೆ ಬಿದ್ದಿರುವ ಘಟನೆ ಸಂಭವಿಸಿದೆ. ನಿನ್ನೆ ಈ ಘಟನೆ ನಡೆದಿದ್ದು ಕಾರಿನಲ್ಲಿ ಜೆಡಿಎಸ್ ಮುಖಂಡರಾದ ಗೀತಾ ಸತೀಶ್ ಹಾಗೂ ಅವರ ಪತಿ ಸತೀಶ್ರವರು ಇದ್ದರು ಎಂದು ಹೇಳಲಾಗಿದೆ. ಘಟನೆಯಲ್ಲಿ ಇಬ್ಬರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
JD(S) leader’s car
ಶಿವಮೊಗ್ಗದಿಂದ ಸಿದ್ಲಿಪುರಕ್ಕೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸೂಗೂರು ಬಳಿಯಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ತೋಟವೊಂದರ ಹೊಂಡಕ್ಕೆ ಉರುಳಿದೆ. ಕಾರು ಜಖಂಗೊಂಡಿದೆ. ಇನ್ನೂ ಘಟನೆ ಬಗ್ಗೆ ಶಾಸಕಿ ಶಾರದಾ ಪೊರ್ಯನಾಯ್ಕ್ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜನಸಂಪರ್ಕ ಸಭೆ
ಮೆಸ್ಕಾಂ ಬೆಜ್ಜುವಳ್ಳಿ ಉಪವಿಭಾಗ ಕಚೇರಿಯಲ್ಲಿ ಜ.24 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು ಮೆಸ್ಕಾಂ ಅಧಿಕಾರಿ ಭಾಗವಹಿಸುವರು. ಸಂಬಂಧಪಟ್ಟ ಪ್ರದೇಶದ ಗ್ರಾಹಕರು ಸಭೆಯಲ್ಲಿ ಪಾಲ್ಗೊಂಡು ಅಹವಾಲುಗಳನ್ನು ನೀಡಬಹುದು. ಹೆಚ್ಚಿನ ಮಾಹಿತಿಗೆ 8277882835 ನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
