ಹುಷಾರಾಗಿ ಗಾಡಿ ಓಡಿಸಿದ್ರೂ ಹೀಗಾಗುತ್ತೆ ! ಬೈಕ್ ಸವಾರರೇ ವಿಡಿಯೋ ನೋಡಿ ಜಾಗ್ರತೆ ವಹಿಸಿ

ಹಂಚಿಕೊಳ್ಳಿ
WhatsApp Facebook X Telegram
ಹುಷಾರಾಗಿ ಗಾಡಿ ಓಡಿಸಿದ್ರೂ ಹೀಗಾಗುತ್ತೆ ! ಬೈಕ್ ಸವಾರರೇ  ವಿಡಿಯೋ ನೋಡಿ ಜಾಗ್ರತೆ ವಹಿಸಿ

CHIKKAMAGALURU  |  Dec 14, 2023  | ಚಿಕ್ಕಮಗಳೂರು ನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ನಡೆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂದೆ ಸಾಗುತ್ತಿದ್ದ ಕಾರೊಂದನ್ನ ಓವರ್​ ಟೇಕ್ (over take ) ಮಾಡಲು ಮುಂದಾದ ಕಾರೊಂದು ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯು ಗಾಳಿಯಲ್ಲಿ ತೇಲಿ ಮುಂದಕ್ಕೆ ಹೋಗಿ ಬಿದ್ದಿದೆ. ಘಟನೆಯಲ್ಲಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರು ಚಾಲಕ ಕಾರು ನಿಲ್ಲಿಸದೇ ಎಸ್ಕೇಪ್ ಆಗಿದ್ದಾನೆ. 

READ : ಡಿ.16 ರಂದು ಶಿವಮೊಗ್ಗದ ಈ ಪ್ರಮಖ ಪ್ರದೇಶಗಳಲ್ಲಿ ಪವರ್ ಕಟ್/ ಸಾಗರದಲ್ಲಿ ರದ್ದಾಯ್ತು ಕುವೆಂಪು ವಿವಿ ಸಂಯೋಜನಾ ಕೇಂದ್ರ

‘ಚಿಕ್ಕಮಗಳೂರು ಅಪಘಾತ

ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ 2 ದಿನಗಳ ಹಿಂದೆ ನಡೆದ ಈ ಅಪಘಾತದಲ್ಲಿ ಸ್ಕೂಟಿ ಸವಾರ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಇನ್ನೂ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಆತಂಕ ಮೂಡಿಸುತ್ತಿದೆ. ತಮ್ಮದಲ್ಲದ ತಪ್ಪಿಗೆ ಅಮಾಯಕರು ಅಪಘಾತಕ್ಕೀಡಾಡುತ್ತಿರುವುದಕ್ಕೆ ದೃಶ್ಯ ಸಾಕ್ಷಿ ಹೇಳುತ್ತಿದೆ. ಇನ್ನೂ ಘಟನೆ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.  


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor