ತೀರ್ಥಹಳ್ಳಿ ರಸ್ತೆಯಲ್ಲಿ ಪಲ್ಟಿಯಾಗಿ ಉಲ್ಟಾ ನಿಂತ ಮಾರುತಿ 800 ಕಾರು!
A Maruti 800 car overturns on Theerthahalli road
MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬಿಳುಕೊಪ್ಪದ ಬಳಿಯಲ್ಲಿ ನಿನ್ನೆ ಆಕ್ಸಿಡೆಂಟ್ ಆಗಿದೆ. ಇಲ್ಲಿನ ನಿವಾಸಿಯೊಬ್ಬರ ಮಾರುತಿ 800 ಕಾರು ಬಿಳುಕೊಪ್ಪದ ಬಳಿ ಪಲ್ಟಿಯಾಗಿ ನಡುರಸ್ತೆಯಲ್ಲಿಯೇ ಉಲ್ಟಾ ನಿಂತಿತ್ತು ಘಟನೆಯಲ್ಲಿ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಆತನಿಗೆ ಸ್ತಳೀಯವಾಗಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
READ | *ಮದುವೆಯಾಗದ ಬ್ರಹ್ಮಚಾರಿಗಳಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ! ಡಾಲಿ ಧನಂಜಯ್ರಿಂದಲೇ ಆರಂಭ! ಏನಿದು ವಿಶೇಷ?*
ತೀರ್ಥಹಳ್ಳಿ ಕಾಡಿನಲ್ಲಿ ಮೃತದೇಹ ಪತ್ತೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಲ್ಮನೆಯಲ್ಲಿ ಕಾಣಸಿಗುವ ಪ್ಲಾಂಟೇಶನ್ ಕಾಡಿನ್ಲಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ರಾಮಪ್ಪ ಸುಧಾಕರ್ ಎಂಬ 50 ವರ್ಷದ ವ್ಯಕ್ತಿ ಮೃತರು ಎಂದು ಗುರುತಿಸಲಾಗಿದೆ. ಲಕ್ಕುಂದ ಮೂಲದ ರಾಮಪ್ಪ ಕಲ್ಮನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಹೊಸನಗರದಲ್ಲಿ ನಡೆಯಲಿರುವ ತಮ್ಮನ ಮನೆ ಗೃಹ ಪ್ರವೇಶಕ್ಕೆ ಹೋಗಲು ಸಿದ್ದತೆ ನಡೆಸಿದ್ದ ಇವರು, ತೀರ್ಥಹಳ್ಳಿ ಪೇಟೆಯಿಂದ ಬಟ್ಟೆ, ಚಪ್ಪಲಿ ಸೇರಿದಂತೆ ಹಲವು ವಸ್ತುಗಳನ್ನು ಸಹ ಖರೀದಿಸಿ ತಂದಿದ್ದರು. ಪೇಟೆಯಿಂದ ಬಂದು ಪ್ಲಾಂಟೇಶನ್ ಕಾಡಿನಲ್ಲಿ ಮೃತರಾಗಿದ್ದಾರೆ.