SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 7, 2024 | SHIVAMOGGA NEWS |
ಸದ್ಭಾವನ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ , ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ರವರು ನಾಡಹಬ್ವ ವಿಜಯದಶಮಿ ಪ್ರಯುಕ್ತ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ್ರು
ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಸೀರೆ ವಿತರಣೆ ಕಾರ್ಯಕ್ರ ಮದಲ್ಲಿ ನೂರಾರು ಪೌರ ಕಾರ್ಮಿಕರಿಗೆ ಸೀರೆ ವಿತರಣೆ ಮಾಡಿದ್ರು
ಬಳಿಕ ಮಾತನಾಡಿದ ಎಂ. ಶ್ರೀಕಾಂತ್ ಕಳೆದ ಮೂರು ವರ್ಷಗಳಿಂದ ಗೌರಿ ಹಬ್ಬಕ್ಕೆ ಪೌರ ಕಾರ್ಮಿಕರಿಗೆ ಸೀರೆ ವಿತರಣೆ ಮಾಡಿಕೊಂಡು ಬರಲಾಗಿತ್ತು, ಆದ್ರೆ ಈ ಬಾರಿ ಅನಿವಾರ್ಯ ಕಾರಣದಿಂದ ಆಗಲಿಲ್ಪ. ಈ ಬಾರಿ ವಿಜಯದಶಮಿ ಹಬ್ಬದಂದು ನೀಡುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುತ್ತಾ ಬಂದಿದ್ದೇನೆ.

ಪೌರ ಕಾರ್ಮಿಕರ ಸೇವೆ ಅನನ್ಯವಾದದ್ದು.ಇವರು ನಗರ ಶುಚಿಗೊಳಿಸಿದರಷ್ಟೆ ಕೌನ್ಸಲರ್ ಗಳು ನೆಮ್ಮದಿಯಿಂದ ಇರಲು ಸಾಧ್ಯ ನಗರ ಸುಂದರವಾಗಿರಲು ಸಾಧ್ಯ ಜನರು ಪೌರ ಕಾರ್ಮಿಕರನ್ನು ಅತ್ಯಂತ ಗೌರವದಿಂದ ಕಾಣಬೇಕು ಎಂದು ಶ್ರೀಕಾಂತ್ ಹೇಳಿದರು
ಇದೇ ಸಂದರ್ಭದಲ್ಲಿ ಪೌರಕಾರ್ಮಿಕ ಮಹಿಳೆಯರು ಎಂ.ಶ್ರೀಕಾಂತ್ ರವರಿಗೆ ಸನ್ಮಾನ ಮಾಡಿದರು, ಕಾರ್ಯಕ್ರಮದಲ್ಲಿ ಪಾಲಿಕ ಸದಸ್ಯ ನಾಗರಾಜ್ ಕಂಕಾರಿ , ಮಾಜಿ ಸದಸ್ಯ ಪಾಲಾಕ್ಷಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು
Summary | Sadbhavana Education and Charitable Trust, Congress leader M Srikanth distributed sarees to pourakarmikas on the occasion of Nadahabba Vijayadashami
Keywords | Sadbhavana Education and Charitable Trust, Congress leader M Srikanth, distributed sarees to pourakarmikas, Nadahabba Vijayadashami