MALENADUTODAY.COM |SHIVAMOGGA| #KANNADANEWSWEB
ಶಿಕಾರಿಪುರದಲ್ಲಿ ಮಾತನಾಡ್ತಾ ಮಾಜಿ ಶಾಸಕ ಮಧುಬಂಗಾರಪ್ಪ ತಮ್ಮ ತಂದೆ ಪ್ರೀತಿಯಿಂದ ಜನರ ಹೃದಯವನ್ನು ಲೂಟಿ ಹೊಡೆದಿದ್ದರು ಎಂದಿದ್ದಾರೆ. ಜನಗಳ ಹೃದಯವನ್ನು ಲೂಟಿ ಹೊಡೆದು, ಅವರ ಸ್ನೇಹ , ಪ್ರೀತಿಯನ್ನು ಪಡೆದಿದ್ದರು, ಅವರು ನಿಮ್ಮೆಲ್ಲರ ಹೃದಯದಲ್ಲಿದ್ದಾರೆ ಅದನ್ನು ಯಾರಿಂದಲೂ ಕಿತ್ತು ಹಾಕಲು ಸಾಧ್ಯವಿಲ್ಲ, ಅವರು ಸಿ.ಎಂ ಆದಾಗ ಕೊಟ್ಟ ಉಚಿತ ಪಂಪ್ಸೆಟ್ ಸೇರಿದಂತೆ ನೂರಾರು ಜನಪ್ರಿಯ ಕಾರ್ಯಕ್ರಮಗಳು ಇಂದಿನ ಸರ್ಕಾರದಲ್ಲಿ ಹೊಸ ಹೆಸರಿನೊಂದಿಗೆ ನಿಮಗೆ ತಲುಪುತ್ತಿದೆ ಎಂದರು.
ಅಭಿಮಾನಿಗಳು ಹಮ್ಮಿಕೊಂಡಿದ್ದ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತಾಡಿದ ಮಧುಬಂಗಾರಪ್ಪ, ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮೇಲಿನ ಲೋಕಾಯುಕ್ತ ರೇಡ್ ಪ್ರಕರಣ ಬಿಜೆಪಿಗೆ ಕಪ್ಪು ಚುಕ್ಕೆ. ಮಗನೇ ಅಷ್ಟೊಂದು ಭ್ರಷ್ಟಾಚಾರ ಮಾಡಿರುವಾಗ ತಂದೆ ಎಷ್ಟು ಭ್ರಷ್ಟಾಚಾರ ಮಾಡಿರಬಹುದು ಎಂದು ತನಿಕೆಯಾಗಲಿ ಎಂದರು. ಮೋದಿ ಶಿವಮೊಗ್ಗಕ್ಕೆ ಬಂದು ಕುವೆಂಪುರವರು ಬರೆದ ಸಾಲಗಳನ್ನು ಅಸ್ಪಷ್ಟವಾಗಿ ಉಚ್ಚರಿಸಿ ಕುವೆಂಪುರವರಿಗೆ ದೊಡ್ಡ ಅವಮಾನ ಮಾಡಿದ್ದಾರೆ, ಮೊದಲು ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟ ರೈತರಿಗೆ ಪರಿಹಾರ ಕೊಡಿ ಅದೇ ರೀತಿ ಉದ್ಘಾಟನೆಯಾದ ಶಿಕಾರಿಪುರದ ಏತ ನೀರಾವರಿಯಿಂದ ಇನ್ನೂ ಶೇಕಡ 90/ ರಷ್ಟು ಕೆರೆಗಳನ್ನು ಯಾಕೆ ತುಂಬಿಸಿಲ್ಲ ಎಂದು ಪ್ರಶ್ನಿಸಿದರು.
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #