ಕರೆಂಟ್ ಶಾಕ್! ಕುರಿ ಕಾಯಲು ಹೋಗಿದ್ದ ಯುವಕ ಸಾವು! ಶಿವಮೊಗ್ಗ ನಗರದಲ್ಲಿಯೇ ನಡೀತು ಘಟನೆ

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ವಿದ್ಯುತ್ ಅವಘಡವೊಂದರಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಇಲ್ಲಿನ ಸ್ಥಳೀಯ ನಿವಾಸಿ ಗಿರೀಶ್ ಎಂಬಾತ ಮೃತ ದುರ್ದೈವಿ. 

ಸ್ಥಳೀಯ ನಿವಾಸಿ ಗಿರೀಶ್​ ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಕಾಣೆಯಾಗಿದ್ದ. ಆತ ಮನೆಗೆ ಊಟಕ್ಕೆ ಬರದಿದ್ದನ್ನು ನೋಡಿ ಕುಟುಂಬಸ್ಥರು ಹುಡುಕಾಡಿದ್ದಾರೆ. ಕುರಿ ಕಾಯಲು ಹೋಗಿದ್ದ ಗಿರೀಶ್​ ಮಲ್ಲಿಕಾರ್ಜುನ್​ ನಗರದ ಬಳಿಯಲ್ಲಿ ವಿದ್ಯುತ್  ಸ್ಪರ್ಶದಿಂದ ಸಾವನ್ನಪ್ಪಿರುವುದು ಕಂಡು ಬಂದಿದೆ. ಘಟನೆ  ಹೇಗಾಯ್ತು ಎಂಬುದನ್ನ ನೋಡಿದವರಿಲ್ಲ. ಛತ್ರಿ ತಗುಲಿದ್ದರಿಂದ ಕರೆಂಟ್ ತಗುಲಿರಬಹುದು ಎಂದು ಊಹಿಸುತ್ತಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಗಿರೀಶ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈತನಿಗೆ ಮದುವೆಯಾಗಿ ಮಕ್ಕಳಿದ್ದು, ಕುಟುಂಬಕ್ಕೆ ಈತನೇ ಆಧಾರವಾಗಿದ್ದ. ಇದೀಗ ಘಟನೆಯಲ್ಲಿ ಗಿರೀಶ್ ನನ್ನ ಕಳೆದುಕೊಂಡಿರುವ ಕುಟುಂಬ ಅನಾಥವಾಗಿದೆ. 

BIG EXCLUSIVE / ಶರತ್​ಗಾಗಿ ಜ್ಯೋತಿರಾಜ್​ ಹುಡುಕಾಟ! ಡ್ರೋಣ್​ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!

 

ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ಪ್ಲೈಟ್! ವಿಮಾನ ಹಾರಿಸಲು ಶೀಘ್ರದಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಮಿಟ್​!? ಬುಕ್ಕಿಂಗ್​ಗೆ ಬಲೇ ಡಿಮ್ಯಾಂಡ್!

Shivamogga Malenadu Today

 ​ 

 

 

Leave a Comment