ಕವಿಶೈಲದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್! ಕುವೆಂಪುರವರ ಮನೆಗೆ ಭೇಟಿಕೊಟ್ಟ ನಟ ಹೇಳಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
ಕವಿಶೈಲದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್! ಕುವೆಂಪುರವರ ಮನೆಗೆ ಭೇಟಿಕೊಟ್ಟ ನಟ ಹೇಳಿದ್ದೇನು?

Shivamogga |  Jan 28, 2024  |  ತೀರ್ಥಹಳ್ಳಿಗೆ ನಟ ಸಾಯಿಕುಮಾರ್ ಬಂದು ಹೋಗಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪುರವರ ಮನೆಗೆ ಭೇಟಿಕೊಟ್ಟಿದ್ದಾರೆ. 

Noted actor Saikumar visited Rashtrakavi Kuvempu's Kavisaila in Thirthahalli

ಈ ಸಂಬಂಧ ನಟ ಸಾಯಿಕುಮಾರ್ (Sai Kumar) ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. 

ರಾಷ್ಟ್ರಕವಿ ಕುವೆಂಪು (Kuvempu) ರವರ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ (Kavishaila) ಭೇಟಿ ನೀಡಿರುವ ಅವರು ಅಲ್ಲಿನ ಅನುಭವವನ್ನ ಹಂಚಿಕೊಂಡಿದ್ದಾರೆ. 

Noted actor Saikumar visited Rashtrakavi Kuvempu's Kavisaila in Thirthahalli

ಸ್ನೇಹಿತರ ಜೊತೆ  ತೀರ್ಥಹಳ್ಳಿಯಲ್ಲಿರುವ  ರಾಷ್ಟ್ರಕವಿ ಕುವೆಂಪು ಅವರ ಮನೆ ಹಾಗು ಕವಿಶೈಲಕ್ಕೆ ಭೇಟಿ ನೀಡಿದ್ದೆ. ಆ ಸ್ಥಳವನ್ನು ಬಣ್ಣಿಸಲು ಪದಗಳು ಸಿಗ್ತಿಲ್ಲ ಎಂದಿದ್ದಾರೆ. 

ತಮ್ಮ ಸಿನಿಮಾಗಳಲ್ಲಿ ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’, ‘ಕನ್ನಡಕ್ಕೆ ಹೋರಾಡು ಕನ್ನಡದ ಕಂದ’, ‘ಬಾರಿಸು ಕನ್ನಡ ಡಿಂಡಿಮವ’ ಎಂಬ ಸಾಲುಗಳನನ್ನ ಬಳಸಿದ್ದೆ.  ‘ಜಯ ಭಾರತ ಜನನಿಯ ತನುಜಾತೆ’  ನಾಡಗೀತೆಯನ್ನು ಹಾಡಿದ್ದೆ. ಆದರೆ ಕವಿಶೈಲಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಇದೀಗ ಆ ಸ್ಥಳವನ್ನ ನೋಡಿ ಪುನೀತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

Noted actor Saikumar visited Rashtrakavi Kuvempu's Kavisaila in Thirthahalli


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor