SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 7, 2025

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ರಜತ್ ಹೆಗಡೆ ಎಂಬುವವರ ಮನೆಯ ಅಡಿಕೆ ಗೋಡಾನ್ಗೆ ಸಿಡಿಲು ಬಡಿದು ಸುಮಾರು 50 ಕ್ವಿಂಟಾಲ್ ಅಡಿಕೆ ಚೀಲಕ್ಕೆ ಹಾನಿಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಶನಿವಾರ ಸಂಜೆ ತೀರ್ಥಹಳ್ಳಿ ತಾಲೂಕಿನಲ್ಲಿ ಸಿಡಿಲು ಸಹಿತ ವಿಪರೀತ ಮಳೆ ಸುರಿದಿದೆ. ಈ ವೇಳೆ ರಜತ್ ರವರ ಅಡಿಕೆ ಗೋಡಾನ್ಗೆ ಸಿಡಿಲು ಬಡಿದೆದೆ. ಇದರಿಂದಾಗಿ ಗೋಡಾನ್ನಲ್ಲಿದ್ದ 93 ಅಡಿಕೆ ಚೀಲ ಹಾಗೂ ವಿವಿದ ಕೃಷಿ ಸಾಲಕಣೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಶಾಸಕ ಆರಗ ಜ್ಙಾನೇಂದ್ರ , ಡಿ ಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಸೇರಿದಂತೆ ಪ್ರಮುಕರು ಸ್ಥಳಕ್ಕೆ ಬೇಟಿ ನೀಡಿ ಅವಗಡದ ಬಗ್ಗೆ ಮಾಹಿತಿ ಪಡೆದುಕೊಂಡರು.
SUMMARY | About 50 quintals of arecanut was gutted in a lightning strike at the arecanut godown of Rajat Hegde of Megaravalli in Thirthahalli taluk on Saturday evening.
KEYWORDS | 50 quintals, arecanut, Megaravalli, Thirthahalli,