ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಹಾಗೂ ವೈಶಾಖ ಮಾಸ ಶುಕ್ಲ ಪಕ್ಷದ ದ್ವಾದಶಿಯು ರಾತ್ರಿ 7.35 ರವರೆಗೆ ಇರಲಿದೆ. ತದನಂತರ ತ್ರಯೋದಶಿ ತಿಥಿಯು ಆರಂಭವಾಗಲಿದೆ. ಉತ್ತರ ನಕ್ಷತ್ರವು ರಾತ್ರಿ 11.21 ರವರೆಗೆ ಇರಲಿದ್ದು, ಬಳಿಕ ಹಸ್ತ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಗಳಿಗೆ ಸಂಜೆ 4.02 ರಿಂದ 5.41 ರವರೆಗೆ ಇರುತ್ತದೆ. ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದ್ದು, ಯಮಗಂಡ ಕಾಲ ಮುಂಜಾನೆ 9.00 ರಿಂದ 10.30 ರವರೆಗೆ ಇರಲಿದೆ.
ನಿಮ್ಮ ಇಂದಿನ ದಿನ ಹೇಗಿರಲಿದೆ? ದಿನಭವಿಷ್ಯದ ಮೂಲಕ ತಿಳಿದುಕೊಳ್ಳಿ
ಮೇಷ / ಸಾಲಬಾಧೆ ನಿವಾರಣೆಯಾಗಲಿವೆ. ಶುಭ ಕಾರ್ಯಗಳ ಆಹ್ವಾನ ನಿಮಗೆ ಬರಲಿವೆ. ದೈನಂದಿನ ವ್ಯವಹಾರಗಳಲ್ಲಿಮುನ್ನಡೆ ಸಾಧಿಸುವಿರಿ. ಮಾತುಕತೆಗಳು ಯಶಸ್ವಿಯಾಗಲಿವೆ, ಉದ್ಯೋಗದಲ್ಲಿ ಹೊಸದಿನ
ವೃಷಭ / ಖರ್ಚು ಹಾಗೂ ಶ್ರಮದ ದಿನ. ಮಾತಿನ ಚಕಮಕಿ ನಡೆಯುವ ಸಾಧ್ಯತೆ, ದಿಢೀರ್ ಪ್ರಯಾಣ, ಕೆಲಸಗಳನ್ನು ಪೂರ್ಣಗೊಳಿಸುವುದು ಕಷ್ಟವಾಗಬಹುದು. ವ್ಯಾಪಾರ ಸಾಧಾರಣ, ಉದ್ಯೋಗದಲ್ಲಿ ಕೆಲವು ತೊಂದರೆ.
ಮಿಥುನ / ಕೆಲಸಗಳು ಮುಂದೂಡಲ್ಪಡುವ ಲಕ್ಷಣಗಳಿವೆ. ಅಧಿಕ ಶ್ರಮಪಡಬೇಕಾಗುತ್ತದೆ. ಸಂಬಂಧಿಕರೊಂದಿಗೆ ವಿವಾದ, ಕಿರಿಕಿರಿ ಉಂಟಾಗುವ ಸೂಚನೆಗಳಿವೆ. ದೂರ ಪ್ರಯಾಣ, ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಅಡೆತಡೆ ಎದುರಾಗಲಿವೆ.
ಕಟಕ / ಅತ್ಯಂತ ಅನುಕೂಲಕರವಾಗಿದೆ ಈ ದಿನ. ಬರಬೇಕಾದ ಹಳೆಯ ಬಾಕಿ ಹಣವು ಕೈಸೇರಲಿದೆ. ಪುಣ್ಯಕ್ಷೇತ್ರಗಳು ಹಾಗೂ ದೇವಾಲಯಗಳಿಗೆ ಭೇಟಿ . ವ್ಯಾಪಾರವನ್ನು ವಿಸ್ತರಣೆ, ಉದ್ಯೋಗದ ಸ್ಥಳದಲ್ಲಿ ನಿಮಗೆ ಪೂರಕವಾದ ವಾತಾವರಣವಿರಲಿದೆ.
ಸಿಂಹ / ವಿವಾದ ತಲೆದೋರುವ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ನಿರಾಶಾದಾಯಕವಾಗಿರಲಿದೆ. ನಿತ್ಯದ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮದ ಅಗತ್ಯ. ಅನಾರೋಗ್ಯದ ಸಮಸ್ಯೆ. ಹೆಚ್ಚಿನ ಒತ್ತಡ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಉತ್ಸಾಹ ಕಡಿಮೆಯಾಗಲಿದೆ.
ನಿಮ್ಮ ಇಂದಿನ ದಿನ ಹೇಗಿರಲಿದೆ? ದಿನಭವಿಷ್ಯದ ಮೂಲಕ ತಿಳಿದುಕೊಳ್ಳಿ
ಕನ್ಯಾ / ಆರ್ಥಿಕ ಸ್ಥಿತಿಯು ಉತ್ತಮ ಪ್ರಗತಿ ಹೊಂದಲಿದೆ. ಕೈಗೊಂಡ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಅಚ್ಚುಕಟ್ಟಾಗಿ ಪೂರ್ಣಗೊಳಿಸುವಿರಿ. ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆಯುವಿರಿ. ವ್ಯಾಪಾರ ಹೆಚ್ಚು ಲಾಭದಾಯಕವಾಗಿ ಸಾಗಲಿದೆ ಹಾಗೂ ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರಲಿವೆ.
ತುಲಾ / ಕೈಗೆತ್ತಿಕೊಳ್ಳುವ ಕೆಲಸಗಳಲ್ಲಿ ವಿಳಂಬ, ಹಣಕಾಸಿನ ತೊಂದರೆ. ಅನಿರೀಕ್ಷಿತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಅನಾರೋಗ್ಯದ ಮುನ್ಸೂಚನೆ. ವ್ಯಾಪಾರ ವ್ಯವಹಾರ ಮಂದಗತಿಯಲ್ಲಿ ಸಾಗಲಿವೆ ಮತ್ತು ಕೆಲಸದ ಒತ್ತಡ ಹೆಚ್ಚಾಗಲಿವೆ.
ವೃಶ್ಚಿಕ / ಯಶಸ್ಸನ್ನು ಸಾಧಿಸುವಿರಿ. ಶುಭ ಕಾರ್ಯ. ಬಾಂಧವ್ಯವು ಮತ್ತಷ್ಟು ವೃದ್ಧಿಯಾಗಲಿದೆ. ವಾಹನ ಹಾಗೂ ಮನೆ ಖರೀದಿಸುವಂತಹ ಯೋಗ ಕೂಡಿಬರಲಿವೆ. ಉದ್ಯೋಗಾವಕಾಶ ಹುಡುಕಿಕೊಂಡು ಬರಲಿವೆ. ವ್ಯಾಪಾರ ಮತ್ತು ಉದ್ಯೊಗದಲ್ಲಿ ಶುಭದಿನ
ಧನುಸ್ಸು / ಉದ್ಯೋಗದಲ್ಲಿ ಸಿಹಿಸುದ್ದಿ ಸಿಗಲಿದೆ. ಉತ್ತಮ ಸಂಪರ್ಕ ಮತ್ತು ಪರಿಚಯ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಆದರ ಹೆಚ್ಚಾಗಲಿವೆ. ಕೈಗೊಂಡ ಕೆಲಸಗಳಲ್ಲಿ ಉತ್ತಮ ಪ್ರಗತಿ ಕಾಣುವಿರಿ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಪಟ್ಟಂತಹ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತವಾಗಿ ದೊರೆಯಲಿದೆ.
ಮಕರ / ಅನಿವಾರ್ಯವಾಗಿ ಸಾಲ ಆಗಬಹುದು. ದಿಢೀರ್ ಪ್ರಯಾಣದೆ. ಮಾನಸಿಕ ಒತ್ತಡವಿರಲಿದೆ. ಮನಸ್ಸು ಆಧ್ಯಾತ್ಮಿಕ ವಿಚಾರಗಳತ್ತ ಹೆಚ್ಚಿನ ಒಲವು ತೋರಲಿದೆ. ವ್ಯಾಪಾರವು ಸಾಧಾರಣ ಮಟ್ಟದಲ್ಲಿರಲಿದೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇಂದು ಸಾಮಾನ್ಯ ದಿನ
ಕುಂಭ / ವೈಮನಸ್ಸು ಉಂಟಾಗಲಿದೆ. ಅನಾರೋಗ್ಯ. ಸಂಬಂಧಿಕರೊಂದಿಗೆ ಅನಗತ್ಯ ಭಿನ್ನಾಭಿಪ್ರಾಯ ಮೂಡಲಿವೆ. ದೈನಂದಿನ ಕೆಲಸಗಳಲ್ಲಿ ಶ್ರಮ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ.
ಮೀನ / ಹೊಸ ವಿಷಯ ತಿಳಿದುಕೊಳ್ಳುವ ಕುತೂಹಲ ತೋರುವರು. ಕೆಲಸ ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಜಮೀನು ವಿವಾದ ಬಗೆಹರಿಯಲಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಪ್ರತಿಯೊಂದರಲ್ಲೂ ಮೇಲುಗೈ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
