ಶಿವಮೊಗ್ಗ-ಭದ್ರಾವತಿ ನಡುವೆ ಮೆಟ್ರೋ | ಸಂಸದ ಬಿ.ವೈ.ರಾಘವೇಂದ್ರರವರು ಹೇಳಿದ್ದೇನು?
Shimoga-Bhadravati Metro Train, ಶಿವಮೊಗ್ಗ -ಭದ್ರಾವತಿ ಮೆಟ್ರೋ ಟ್ರೈನ್,
KARNATAKA NEWS/ ONLINE / Malenadu today/ Oct 23, 2023 SHIVAMOGGA NEWS
ಈಗಾಗಲೇ ಶಿವಮೊಗ್ಗ ಏರ್ಪೋರ್ಟ್ನಲ್ಲಿ ವಿವಿಧ ಪ್ಲೈಟ್ಗಳ ಸಂಚಾರಕ್ಕೆ ಅವಕಾಶ ಲಭಿಸುತ್ತಿದೆ. ಶಿವಮೊಗ್ಗ ಬೆಂಗಳೂರು ನಡುವೆ ನಾನಾ ಟ್ರೈನ್ಗಳು ಓಡಾಡುತ್ತಿವೆ. ಇದರ ನಡುವೆ ಶಿವಮೊಗ್ಗಕ್ಕೆ ಮೆಟ್ರೋ ವ್ಯವಸ್ಥೆ ಕಲ್ಪಿಸುವ ಮಾತನ್ನ ಸಂಸದ ಬಿವೈ ರಾಘವೇಂದ್ರ ಆಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮರು ಆಯ್ಕೆಯಾದಲ್ಲಿ ಶಿವಮೊಗ್ಗ- ಭದ್ರಾವತಿ ಅವಳಿ ನಗರಗಳಿಗೆ ಮೆಟ್ರೋ ವ್ಯವಸ್ಥೆ ಒದಗಿಸು ವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.
ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿನ ಎಲ್ಲ ಚುನಾವಣೆಗಳಲ್ಲೂ ನನ್ನ ಗೆಲುವಿಗೆ ಭದ್ರಾವತಿ ಕ್ಷೇತ್ರದ ಜನರ ಕೊಡುಗೆ ಸಹ ಇದೆ ತಾಯಿ ಶ್ರೀ ಚಾಮುಂಡೇಶ್ವರಿ ಆರ್ಶೀವಾದದಿಂದ ಈ ಬಾರಿಯೂ ಆಯ್ಕೆಯಾಗುವ ವಿಶ್ವಾಸವಿದೆ ಎಂದರು. ಅಲ್ಲದೆ ಇದೇ ವೇಳೆ ಶಿವಮೊಗ್ಗ -ಭದ್ರಾವತಿಗೆ ಅನುಕೂಲವಾಗುವಂತೆ ಮೆಟ್ರೋ ವ್ಯವಸ್ಥೆಯನ್ನು ತರುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು
ಇನ್ನಷ್ಟು ಸುದ್ದಿಗಳು
ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು
ರಾಗಿಗುಡ್ಡ ಕೇಸ್ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್ !
ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?