ಬೈಕ್ನಲ್ಲಿ ರಿಪ್ಪನ್ಪೇಟೆ ಕಡೆಗೆ ಹೋಗುತ್ತಿದ್ದ ಸಾಗರ ಯುವಕ ಸಾವು! ನಡುರಸ್ತೆಯಲ್ಲಿ ನಡೆದಿದ್ದೆ ಗೊಂದಲ?
Sagar youth, who was on his way to Riponpet on a bike, died.
SHIVAMOGGA | Dec 28, 2023 | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪದಲ್ಲಿ ಬೈಕ್ವೊಂದು ಅಪಘಾತಕ್ಕೀಡಾಗಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ರಿಪ್ಪನ್ಪೇಟೆ
ಇಲ್ಲಿನ ವಡಗೆರೆ ಶಾಸಲೆ ಮುಂಭಾಗದಲ್ಲಿ ಇವತ್ತು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಆತನ ಬಳಿ ಆವಿನಹಳ್ಳಿ ಬಳಿ ಸಿಗುವ ಗ್ರಾಮವೊಂದರ ವಿಳಾಸ ಇರುವ ಡಿಎಲ್ ಪತ್ತೆಯಾಗಿದ್ದು, ಅದರಲ್ಲಿ ನವೀನ್ ಕುಮಾರ್ ಎಂದು ಬರೆಯಲಾಗಿದೆ.
ಆನಂದಪುರದ ಕಡೆಯಿಂದ ರಿಪ್ಪನ್ಪೇಟೆಗೆ ಬರುತ್ತಿದ್ದ ವೇಳೆ ಅಪಘಾತ ಹೇಗಾಯ್ತು ಎಂಬುದು ಸ್ಪಷ್ಟವಾಗಿಲ್ಲ.ಕೆಲವರು ಕಾರೊಂದು ಹಿಂಬದಿಯಿಂದ ಗುದ್ದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇನ್ನೂ ಅಪಘಾತವಾಗಿ ಯುವಕನ ತಲೆ ರಸ್ತೆಗೆ ಬಡಿದು ಸ್ಥಳದಲ್ಲಿಯೇ ಆತ ಪ್ರಾಣಬಿಟ್ಟಿದ್ದಾನೆ. ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಹಾಗೂ ಪೊಲೀಸರು ಯುವಕನ ಕುಟುಂಬವನ್ನ ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ.