ಬೈಕ್​ನಲ್ಲಿ ರಿಪ್ಪನ್​ಪೇಟೆ ಕಡೆಗೆ ಹೋಗುತ್ತಿದ್ದ ಸಾಗರ ಯುವಕ ಸಾವು! ನಡುರಸ್ತೆಯಲ್ಲಿ ನಡೆದಿದ್ದೆ ಗೊಂದಲ?

Sagar youth, who was on his way to Riponpet on a bike, died.

ಬೈಕ್​ನಲ್ಲಿ ರಿಪ್ಪನ್​ಪೇಟೆ ಕಡೆಗೆ ಹೋಗುತ್ತಿದ್ದ ಸಾಗರ ಯುವಕ ಸಾವು! ನಡುರಸ್ತೆಯಲ್ಲಿ ನಡೆದಿದ್ದೆ ಗೊಂದಲ?
Sagar youth, who was on his way to Riponpet on a bike, died.

SHIVAMOGGA  |  Dec 28, 2023  |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪದಲ್ಲಿ ಬೈಕ್​ವೊಂದು ಅಪಘಾತಕ್ಕೀಡಾಗಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ರಿಪ್ಪನ್​ಪೇಟೆ

ಇಲ್ಲಿನ ವಡಗೆರೆ ಶಾಸಲೆ ಮುಂಭಾಗದಲ್ಲಿ ಇವತ್ತು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಆತನ ಬಳಿ ಆವಿನಹಳ್ಳಿ ಬಳಿ ಸಿಗುವ ಗ್ರಾಮವೊಂದರ ವಿಳಾಸ ಇರುವ ಡಿಎಲ್ ಪತ್ತೆಯಾಗಿದ್ದು, ಅದರಲ್ಲಿ ನವೀನ್ ಕುಮಾರ್ ಎಂದು ಬರೆಯಲಾಗಿದೆ. 

READ : ಗ್ಯಾಸ್​ಗೆ ಆಧಾರ್​ ಲಿಂಕ್​ ಮಾಡಲು ಲಾಸ್ಟ್ ಡೇಟ್​ ಇದ್ಯಾ! ಇಲಾಖೆ ಪ್ರಕಟಣೆಯಲ್ಲಿ ಏನಿದೆ? ಸರತಿ ಸಾಲಿನಲ್ಲಿ ನಿಲ್ಲದೇ E-KYC ಮಾಡ್ಬಹುದು ಗೊತ್ತಾ?

ಆನಂದಪುರದ ಕಡೆಯಿಂದ ರಿಪ್ಪನ್​ಪೇಟೆಗೆ ಬರುತ್ತಿದ್ದ ವೇಳೆ ಅಪಘಾತ ಹೇಗಾಯ್ತು ಎಂಬುದು ಸ್ಪಷ್ಟವಾಗಿಲ್ಲ.ಕೆಲವರು ಕಾರೊಂದು ಹಿಂಬದಿಯಿಂದ ಗುದ್ದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. 

ಇನ್ನೂ ಅಪಘಾತವಾಗಿ ಯುವಕನ ತಲೆ ರಸ್ತೆಗೆ ಬಡಿದು ಸ್ಥಳದಲ್ಲಿಯೇ ಆತ ಪ್ರಾಣಬಿಟ್ಟಿದ್ದಾನೆ. ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಹಾಗೂ ಪೊಲೀಸರು ಯುವಕನ ಕುಟುಂಬವನ್ನ ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ.