ಹೊಸನಗರದಲ್ಲಿ ಗೋಮೂತ್ರ, ಸಗಣಿ ನೀರು ಸುರಿದುಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿಭಟನೆ ! ಕಾರಣವೇನು ಗೊತ್ತಾ?
In Hosanagara, gram panchayat president protests by pouring cow urine, cow dung water Do you know the reason?
KARNATAKA NEWS/ ONLINE / Malenadu today/ May 26, 2023 SHIVAMOGGA NEWS
ಹೊಸನಗರ/ ನಿರ್ಲಕ್ಷ್ಯ ಒಳಗಾದ ಹೊಸನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಈ ಮಧ್ಯೆ ಟ್ಯಾಂಕರ್ಗಳಲ್ಲಿ ಹಳ್ಳಿಹಳ್ಳಿಗೆ ನೀರಿ ಸೌಕರ್ಯಗಳನ್ನ ಒದಗಿಸಲಾಗುತ್ತಿದೆಯಾದರೂ, ಅದರ ಬಿಲ್ ಮಂಜೂರಾತಿ ಆಗುತ್ತಿಲ್ಲ. ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಾಕರ್ ಶೆಟ್ಟಿ ಇವತ್ತು ಹೊಸನಗರ ತಾಲ್ಲೂಕು ಪಂಚಾಯಿತಿ ಎದುರು ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಈ ಹಿಂದೆ ತಾಲ್ಲೂಕು ಪಂಚಾಯಿತಿಯಲ್ಲಿ ಕಸಗುಡಿಸಿ ಪ್ರತಿಭಟಿಸಿದ್ದ ಕರುಣಾಕರ್ ಶೆಟ್ಟರು, ಈ ಸಲ ಇಡೀ ತಾಲ್ಲೂಕಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲು, ಹಣ ಮಂಜೂರು ಏಕೆ ಮಾಡುತ್ತಿಲ್ಲ. ಹೊಸನಗರಕ್ಕೆ ಮಾತ್ರವೇ ಈ ನಿರ್ಲಕ್ಷ್ಯವೇ ಏಕೆ ಎಂದು ಪ್ರಶ್ನಿಸಿದ್ದಾರೆ. ಜನರು ಕುಡಿಯುವ ನೀರು ಒದಗಿಸಿ ಎಂದು ಪ್ರಶ್ನಿಸುತ್ತಾರೆ. ಆದರೆ ಪಂಚಾಯಿತಿಗಳಿಗೆ ಹಣ ಒದಗಿಸುತ್ತಿಲ್ಲ. ನೀರಿನ ಟ್ಯಾಂಕರ್ಗಳ ಮೂಲಕ ನೀರು ಒದಗಿಸಲು ಸಾಧ್ಯವಾಗದೇ, ಜನರಿಂದ ಮಾತು ಕೇಳಬೇಕಾದ ಸನ್ನಿವೇಶವಿದೆ ಎಂದು ಅಳಲು ತೋಡಿಕೊಂಡಿದ್ಧಾರೆ.
ಹೊಸನಗರದಲ್ಲಿ ಗೋಮೂತ್ರ, ಸಗಣಿ ನೀರು ಸುರಿದುಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿಭಟನೆ ! ಕಾರಣವೇನು ಗೊತ್ತಾ? https://t.co/xnQKc24VkL #ShivamoggaNews #shivamogga #Shimoga #MalnadNews #LocalNews #KannadaNewsWebsite #latestnewstoday pic.twitter.com/fwHWqJ4wuk
— malenadutoday.com (@CMalenadutoday) May 26, 2023
ಕಳೆದ ಒಂದುವರೆ ತಿಂಗಳಿನಿಂದ ಮನೆ ಮನೆಗೆ ನೀರನ್ನ ಟ್ಯಾಂಕರ್ ಮೂಲಕ ಒದಗಿಸಲಾಗಿದೆ. ಈ ಮಧ್ಯೆ ಜಿಲ್ಲಾಡಳಿತ ನಡೆಸಿದ ಟಾಸ್ಕ್ ಫೋರ್ಸ್ ಸಭೆಯಲ್ಲಿ, ಪ್ರತಿ ತಾಲ್ಲೂಕಿಗೆ 15 ಲಕ್ಷ ರೂಪಾಯಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ಧರು. ನೀರಿನ ಸೌಲಭ್ಯ ಒದಗಿಸಿ ಎಂದು ಹೇಳಿದ್ದರು. ಆದರೆ ಇದುವರೆಗೂ ಬಿಡಿಗಾಸನ್ನು ಸಹ ನೀಡಿಲ್ಲ . ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಆದರೆ ನಾವು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ನಾವಿಲ್ಲಿ ಶುದ್ಧವಾಗಿದ್ದೇವೆ , ನಾವು ಶುದ್ಧವಾಗಿದ್ದೇವೆ ಎನ್ನುವುದನ್ನ ತೋರಿಸುವುದ್ದಕ್ಕಾಗಿಯೇ ಕಚೇರಿ ಮುಂದೆ ಸಗಣಿ ನೀರನ್ನ ಸುರಿದುಕೊಂಡು ಶುದ್ಧವಾಗಿದ್ದೇನೆ. ಹಾಗಾಗಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ಧಾರೆ.
ಇನ್ನೂ ಕರುಣಾಕರ್ ಶೆಟ್ಟರ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಉಪವಿಭಾಗೀಯ ಅಧಿಕಾರಿಯವರು ಹೊಸನಗರ ತಾಲ್ಲೂಕಿಗೆ, ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಗೆ 20 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಪೈಕಿ 10 ಲಕ್ಷ ರೂಪಾಯಿ ಅನುದಾನ ಮೊದಲ ಕಂತಿನಲ್ಲಿ ಬಂದಿದೆ. ನಗರ ಪಂಚಾಯ್ತಿಯಿಂದಲೇ ಮೊದಲು ಹಣ ಬಿಡುಗಡೆ ಮಾಡಿ, ಕುಡಿಯುವ ನೀರಿನ ಸೌಕರ್ಯಕ್ಕೆಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈಹಿನ್ನೆಲೆಯಲ್ಲಿ ಕರುಣಾಕರ್ ಶೆಟ್ಟರು ಪ್ರತಿಭಟನೆಯನ್ನ ಕೈ ಬಿಟ್ಟಿದ್ಧಾರೆ.
ಓವರ್ ಟೇಕ್ ಮಾಡುವಾಗ ಆಕ್ಸಿಡೆಂಟ್! ಬೈಕ್ ಸವಾರ ಸ್ಥಳದಲ್ಲಿಯೇ ಸಾವು!
ಕುಡಿಯುವ ನೀರಿನ ಸೌಲಭ್ಯ ಒದಗಿಸಿದ ಬಿಲ್ ಮಂಜೂರಾತಿ ಮಾಡದಿದ್ದಕ್ಕೆ ನಗರ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಂದ ಹೊಸನಗರದಲ್ಲಿ ಗೋಮೂತ್ರ, ಸಗಣಿ ನೀರು ಸುರಿದುಕೊಂಡು ಪ್ರತಿಭಟನೆ#ShivamoggaNews #shivamogga #Shimoga #MalnadNews #LocalNews #KannadaNewsWebsite #LatestNews #todaynewsheadlinesofworld, #newstoday pic.twitter.com/jjJHhNjedq — malenadutoday.com (@CMalenadutoday) May 26, 2023